ಇದೇ ಅಂತರಂಗ ಶುದ್ಧಿ


Team Udayavani, Sep 28, 2019, 3:00 AM IST

Udayavani Kannada Newspaper

ಮನಸ್ಸು ಶುದ್ಧವಾಗದ ಹೊರತು ದಿವ್ಯಾನುಭವ ಅಸಾಧ್ಯ. ಅಶುದ್ಧ ಚಿತ್ತನಿಗೂ ಎಲ್ಲಿಯಾದರೂ ದಿವ್ಯಾನುಭವ ಆಗಿದ್ದರೆ ಅವನಿಗೆ ದೇವರ ವಿಶೇಷ ಅನುಗ್ರಹದಿಂದಲೋ, ಗುರುವಿನ ಅನುಗ್ರಹದಿಂದಲೋ, ತಾತ್ಕಾಲಿಕವಾಗಿಯಾದರೂ ಶುದ್ಧ ಮನಸ್ಸಿನ ಸ್ಥಿತಿ ಉಂಟಾಗಿ ದ್ದಿರಬೇಕಷ್ಟೇ. ದಿವ್ಯಾನುಭವಕ್ಕೆ ದಿವ್ಯ ಮನಸ್ಸೇ ಬೇಕು. ಆ ದಿವ್ಯಾನು ಭವಗಳಲ್ಲಿ ಶ್ರೇಷ್ಠವಾದದ್ದು ಪರಮಾತ್ಮ ಸಾಕ್ಷಾತ್ಕಾರ. ಅಲ್ಲಿಗೆ ಹೋಗಲು ಚಿತ್ತದ ಶೋಧನೆ ಅವಶ್ಯ.

ಚಿತ್ತ ಶೋಧನೆಯಲ್ಲಿ ಎರಡು ವಿಧ. ಸುಪ್ತ ಮನಸ್ಸಿನ ಶೋಧನೆ ಹಾಗೂ ವ್ಯಕ್ತ ಮನಸ್ಸಿನ ಶೋಧನೆ. ಸುಪ್ತ ಮನಸ್ಸು ಎಂದರೆ, ನಮ್ಮ ಹಿಂದಿನ ಜನ್ಮದ ಅನುಭವಗಳ ಸಂಸ್ಕಾರಗಳನ್ನು ಇಟ್ಟುಕೊಂಡಿರುವ ಮನಸ್ಸಿನ ಒಂದು ಅವ್ಯಕ್ತ ಭಾಗ. ಸಂಚಿತ ಕರ್ಮಗಳೆಲ್ಲವೂ ಈ ಸುಪ್ತ ಮನಸ್ಸಿನಲ್ಲಿರುತ್ತವೆ. ಮರಣ ಕಾಲದಲ್ಲಿ ಈ ಸುಪ್ತ ಮನಸ್ಸಿನ ಪೆಟ್ಟಿಗೆಯ ಬಾಗಿಲು ತೆರೆದುಕೊಳ್ಳುತ್ತದೆ. ಮರಣವೆಂದರೆ, ಈ ಜನ್ಮದಲ್ಲಿ ಅನುಭವಿಸಬೇಕಾಗಿದ್ದ ಪ್ರಾರಬ್ಧ ಕರ್ಮಗಳು ಖರ್ಚಾಗಿವೆ ಎಂದರ್ಥ.

ಆಗ ಪೆಟ್ಟಿಗೆಯಿಂದ ತೆಗೆಯಲ್ಪಟ್ಟ ಸಂಚಿತ ಕರ್ಮವೊಂದು ಫ‌ಲ ಕೊಡಲು ಪ್ರಾರಂಭಿಸುತ್ತದೆ. ಹೀಗೆ ಫ‌ಲ ಕೊಡಲು ಪ್ರಾರಂಭಿಸಿದ ಕರ್ಮಗಳು, ಪ್ರಾರಬ್ಧ ಕರ್ಮಗಳೆನಿಸಿಕೊಳ್ಳುತ್ತವೆ. ಮರಣ ಕಾಲದಲ್ಲಿ ಅಭಿವ್ಯಕ್ತವಾದ ಪ್ರಾರಬ್ಧ ಕರ್ಮದಿಂದಲೇ ಮುಂದಿನ ಜನ್ಮದ ಕ್ರೂರಿಯೋ, ಸ್ನೇಹಿಯೋ ಮುಂತಾದ ಮನಃಸ್ಥಿತಿಯುಂಟಾಗುತ್ತದೆ. ಈ ಜನ್ಮದಲ್ಲಿ ನಮ್ಮ ಭಾವನೆಗಳಿಗೆ, ಆಲೋಚನೆಗಳಿಗೆ ಒಂದಲ್ಲ ಒಂದು ವಿಧದಲ್ಲಿ, ಗೋಚರಿಸುವ ನಮ್ಮ ಮನಃಸ್ಥಿತಿಯೇ ವ್ಯಕ್ತ ಮನಸ್ಸು.

ಸುಪ್ತ ಮನಸ್ಸು ಇದರ ಹಿಂದಿರುತ್ತದೆ. ಮನಸ್ಸು ಶುದ್ಧವಾಗಬೇಕಾದರೆ ಸುಪ್ತ ಮನಸ್ಸಿಗೂ ಸಂಸ್ಕಾರ ಬೇಕು. ವ್ಯಕ್ತ ಮನಸ್ಸಿಗೂ ಸಂಸ್ಕಾರ ಬೇಕು. ಸಂಸ್ಕಾರ ಕರ್ಮಗಳು ಹೆಚ್ಚಿನ ಅಂಶದಲ್ಲಿ ಸುಪ್ತ ಮನಸ್ಸಿನ ಸಂಸ್ಕಾರಕ್ಕಾಗಿಯೇ ಇವೆ. ಉದಾ: ಉಪನಯನ ಸಂಸ್ಕಾರದಲ್ಲಿನ ಹವನಗಳು. ವ್ಯಕ್ತ ಮನಸ್ಸಿನ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಮಂತ್ರೋಪದೇಶ, ಅದರ ಕ್ರಮವತ್ತಾದ ಉಪಾಸನೆ ಮುಂತಾದವುಗಳು ನಮ್ಮ ವ್ಯಕ್ತ ಮನಸ್ಸಿಗೆ ಶಾಂತಿ- ಸಮಾಧಾನಗಳನ್ನು ತಂದುಕೊಡುತ್ತವೆ.

ಅದರ ಮುಖ್ಯ ಉದ್ದೇಶ ಸುಪ್ತ ಮನಸ್ಸಿಗೆ ಸಂಸ್ಕಾರ ನೀಡುವುದೇ ಆಗಿದೆ. ಅನೇಕ ವಿಧದ ಮಾನಸಿಕ, ದೈಹಿಕ ಕಾಯಿಲೆಗಳಿಗೆ ಮನಸ್ಸಿನ ಅಶುದ್ಧಿಯೇ ಕಾರಣವಾಗಿದೆ. ಸಂಸ್ಕಾರ ಕರ್ಮಗಳು, ನಿತ್ಯ ಕರ್ಮಗಳು, ಸತ್ಸಂಗ ಮುಂತಾದವುಗಳ ಮೂಲಕ ಈ ಎರಡು ವಿಧದ ಅಶುದ್ಧಿಯನ್ನು ಹೋಗಲಾಡಿಸಿಕೊಂಡರೆ, ಎರಡೂ ವಿಧದ ಕಾಯಿಲೆಗಳು ಬಹುಮಟ್ಟಿಗೆ ಕಡಿಮೆ ಆಗುತ್ತವೆ. ಚೆನ್ನಾಗಿ ಸಾಧನೆ ಮಾಡಿ ಸುಪ್ತ, ವ್ಯಕ್ತ ಮನಸ್ಸುಗಳೆರಡನ್ನೂ ಪೂರ್ತಿ ಶುದ್ಧಿಗೊಳಿಸಿಕೊಂಡರೆ, ಅವನೊಬ್ಬ ಮಹಾತ್ಮನಾಗುತ್ತಾನೆ.

* ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.