ಹೀಗೊಂದು ವಿಚಿತ್ರ ಪ್ರೇಮಕಥೆ!
Team Udayavani, Jul 2, 2017, 4:10 PM IST
ರ್ಯಾಪ್ ಸಿಂಗರ್ ಆಗಿ, ವಿಡಿಯೋ ಆಲ್ಬಂಗಳ ಮೂಲಕವೇ ಚಿತ್ರರಂಗದಲ್ಲಿ ಗುರುತಿಸಿಕೊಂಡು ಬಂದ ಚಂದನ್ ಶೆಟ್ಟಿ ಗಾಯಕರಾಗಿಯೂ ಬೇಡಿಕೆಯಲ್ಲಿದ್ದಾರೆ. ಇಂತಿಪ್ಪ ಚಂದನ್ ಶೆಟ್ಟಿ ಈಗ ಹೀರೋ ಆಗುತ್ತಿದ್ದಾರೆ. ಈಗಾಗಲೇ ಅವರು ನಾಯಕರಾಗಿರುವ ಚಿತ್ರಕ್ಕೆ ಮುಹೂರ್ತ ಕೂಡಾ ನಡೆದಿದೆ. ಅದು “ವಿಚಿತ್ರ ಪ್ರೇಮಕಥೆ’. ರವಿವರ್ಮ ಈ ಚಿತ್ರದ ನಿರ್ದೇಶಕರು. ಈ ಹಿಂದೆ “ಸಂಗಮ’, “ಜೈ ಭಜರಂಗಬಲಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ರವಿವರ್ಮ ಈಗ “ವಿಚಿತ್ರ ಪ್ರೇಮಕಥೆ’ ಮಾಡಲು ಹೊರಟಿದ್ದಾರೆ.
ಟೈಟಲ್ ಕೇಳಿದಾಗ ಇದೊಂದು ಲವ್ಸ್ಟೋರಿ ಎಂದು ಗೊತ್ತಾಗುತ್ತದೆ. ಆದರೆ ವಿಚಿತ್ರವಾಗಿ ಏನಿದೆ, ಎಂದು ನೀವು ಕೇಳಬಹುದು. ಇಲ್ಲಿ ನೀವು “ವಿ’ಯನ್ನು ಬಿಟ್ಟರೆ “ಚಿತ್ರ ಪ್ರೇಮಕಥೆ’ ಎಂದು ಓದಿಕೊಳ್ಳಬಹುದು. ಅದಕ್ಕೆ ಕಾರಣ ಇದು ಚಿತ್ರಕಲೆಗಾರರ ಸುತ್ತ ನಡೆಯುವ ಕಥೆ. ಹಾಗಾಗಿಯೇ ಚಿತ್ರಕ್ಕೆ “ಕುಂಚ ಕಹಾನಿ’ ಎಂಬ ಟ್ಯಾಗ್ ಲೈನ್ ಇದೆ. ಚಿತ್ರಕಲೆಯನ್ನು ಕಲಿತಿರುವ ನಾಯಕನ ಹಿನ್ನೆಲೆಯ ಲವ್ಸ್ಟೋರಿಯಾಗಿದ್ದರಿಂದ ಆ ಟೈಟಲ್ ಇಡಲಾಗಿದೆಯಂತೆ.
ಇದೊಂದು ಪಕ್ಕಾ ರೊಮ್ಯಾಂಟಿಕ್ ಲವ್ಸ್ಟೋರಿಯಾಗಿದ್ದು, ನಾನಾ ಶೇಡ್ಗಳಲ್ಲಿ ಸಾಗುತ್ತದೆಯಂತೆ. ಅಂದಹಾಗೆ, ಈ ಚಿತ್ರವನ್ನು ಗುಬ್ಬಿ ವೀರಣ್ಣನವರ ಮೊಮ್ಮಗ ಭರತ್ಕುಮಾರ್ ನಿರ್ಮಿಸುತ್ತಿದ್ದಾರೆ. ಗುಬ್ಬಿ ವೀರಣ್ಣ ಪ್ರೊಡಕ್ಷನ್ಸ್ನಡಿ ಈ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ನಿಶ್ಚಿಕಾ ನಾಯ್ಡು ನಟಿಸುತ್ತಿದ್ದಾರೆ. ನಿಶ್ವಿಕಾಗೆ ಇದು ಕನ್ನಡದಲ್ಲಿ ಎರಡನೇ ಸಿನಿಮಾ. ಈಗಾಗಲೇ ಅನೀಶ್ ತೇಜೇಶ್ವರ್ ನಾಯಕರಾಗಿರುವ “ವಾಸು’ ಚಿತ್ರದಲ್ಲೂ ನಿಶ್ವಿಕಾ ನಾಯಕಿಯಾಗಿದ್ದಾರೆ.
ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಅವರ ಸಂಗೀತ, ವಿನಾಯಕರಾಮ್ ಕಲಗಾರು ಸಂಭಾಷಣೆ ಚಿತ್ರಕ್ಕಿದೆ. ಈಗಾಗಲೇ ಗುಬ್ಬಿಯಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಗುಬ್ಬಿ, ತುಮಕೂರು, ಬೆಂಗಳೂರು, ಮೂಡಿಗೆರೆ ಸೇರಿದಂತೆ ನಾನಾ ಕಡೆಗಳಲ್ಲಿ ಮೂರು ಶೆಡ್ನೂಲ್ನಲ್ಲಿ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ