ವಿಷ್ಣು ಕಡಗ ಪುರಾಣ

ದಾದಾನ ಕೈಬಳೆಯ ಒಂದು ನೆನಪು

Team Udayavani, Sep 14, 2019, 5:00 AM IST

e-16

ಕೆಲ ವ್ಯಕ್ತಿಗಳ ಚರಿಷ್ಮಾ ಹೇಗಿರುತ್ತದೆ ಎಂದರೆ ಯಾವ ಕಾಲಕ್ಕೂ ಅವರು ಹುಟ್ಟು ಹಾಕಿದ ಟ್ರೆಂಡ್‌ ಜನಮಾನಸದಲ್ಲಿ ಉಳಿಯುತ್ತದೆ. ಅಂಥವರ ಸಾಲಿಗೆ ಸೇರುವ ನಟ ವಿಷ್ಣುವರ್ಧನ್‌. ಅವರ ಕೈಯಲ್ಲಿ ಫ‌ಳಗುಟ್ಟುತ್ತಿದ್ದ ಕಡಗಕ್ಕೂ ಒಂದು ಕತೆಯಿದೆ. ಅದೀಗ ಎಲ್ಲಿದೆ? ವಿಷ್ಣು ಅವರ ಜನ್ಮದಿನ (ಸೆ.18) ಸಮೀಪಿಸುತ್ತಿರುವ ಈ ವೇಳೆ, ಆ ಕಡಗದ ಒಂದು ನೆನಪು…

ಸಿನಿಮಾಗಳ ಪ್ರಭಾವ ಜನಸಾಮಾನ್ಯರ ಮೇಲೆ ಬಹಳವಾದುದು. ಸಿನಿಮಾ ಬಂದು ಹೋದ ನಂತರ ಆ ಸಿನಿಮಾದಲ್ಲಿ ಬಳಕೆಯಾದ ವಸ್ತುಗಳು, ವಸ್ತ್ರಗಳು ಹೊಸದೊಂದು ಟ್ರೆಂಡ್‌ಅನ್ನೇ ಹುಟ್ಟುಹಾಕುತ್ತವೆ. ಆ ಟ್ರೆಂಡ್‌ ಕೆಲ ಸಮಯವಷ್ಟೇ ಚಾಲ್ತಿಯಲ್ಲಿರುತ್ತದೆ. ಆದರೆ, ಕೆಲ ವ್ಯಕ್ತಿಗಳ ಚರಿಷ್ಮಾ ಹೇಗಿರುತ್ತದೆ ಎಂದರೆ ಯಾವ ಕಾಲಕ್ಕೂ ಅವರು ಹುಟ್ಟು ಹಾಕಿದ ಟ್ರೆಂಡ್‌ ಜನಮಾನಸದಲ್ಲಿ ಉಳಿಯುತ್ತದೆ. ಅಂಥವರ ಸಾಲಿಗೆ ಸೇರುವ ನಟ ವಿಷ್ಣುವರ್ಧನ್‌. ಅವರನ್ನು ಅನುಕರಿಸುವ ಅಷ್ಟೂ ಮಂದಿ ಮಾಡುವ ಸಾಮಾನ್ಯವಾದ ಅಭಿನಯ ಎಂದರೆ ಕೈ ಎತ್ತಿ, ಕಡಗವನ್ನು ತಿರುಗಿಸುವುದು.

ಸಿನಿಮಾಗಳಲ್ಲಿ ವಿಷ್ಣುವರ್ಧನ್‌ ಕಡಗ ತಿರುಗಿಸಿದರೆಂದರೆ ಮುಗಿಯಿತು. ಎದುರಾಳಿಗಳ ಧೂಳಿಪಟವಾಗುವುದು ಖಂಡಿತ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿಬಿಡುತ್ತಿತ್ತು. ಇಂದಿಗೂ ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಕಡಗ ತೊಟ್ಟು ತಮ್ಮ ನೆಚ್ಚಿನ ನಾಯಕನಟನನ್ನು ಸಂಭ್ರಮಿಸುತ್ತಾರೆ. ಈ ಕಡಗ ಎಲ್ಲಿಂದ ಬಂತು? ಅದನ್ನು ವಿಷ್ಣುವರ್ಧನ್‌ ಅವರು ಮೊದಲು ತೊಟ್ಟಿದ್ದು ಯಾವಾಗ? ಮುಂತಾದ ಪ್ರಶ್ನೆಗಳು ಈ ಸಂದರ್ಭದಲ್ಲಿ ಏಳುವುದು ಸಹಜ. ವಿಷ್ಣು ಅವರು 80 ದಶಕಗಳಲ್ಲೇ ಕಡಗವನ್ನು ಧರಿಸಲು ಶುರುಮಾಡಿದ್ದರು. ಇನ್ನೂ ನಿಖರವಾಗಿ ಹೇಳಬೇಕೆಂದರೆ, 1980ರಲ್ಲಿ ಬಿಡುಗಡೆಯಾದ “ಸಿಂಹ ಜೋಡಿ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಕಡಗ ಧರಿಸಿದ್ದು.

ಆ ಕಡಗ ಅವರ ಕೈ ಸೇರಿದ್ದರ ಹಿಂದೆ, ಒಂದು ಕುತೂಹಲಕರ ಘಟನೆಯಿದೆ. ಅದೊಮ್ಮೆ ಸಿನಿಮಾ ಶೂಟಿಂಗ್‌ಗೆಂದು ವಿಷ್ಣು ಅವರು ಬೀದರ್‌ಗೆ ತೆರಳಿದ್ದರು. ಶೂಟಿಂಗ್‌ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲೇ ಸಿಖ್ಬರ ಗುರುದ್ವಾರವಿತ್ತು. ಅಷ್ಟು ಸಾಕಾಗಿತ್ತು, ಅವರ ಗಮನ ಅತ್ತ ಸೆಳೆಯಲು. ಚಿತ್ರೀಕರಣ ಪ್ಯಾಕಪ್‌ ಆಗುವುದನ್ನೇ ಕಾಯುತ್ತಿದ್ದ ವಿಷ್ಣು ಅವರು ಗುರುದ್ವಾರಕ್ಕೆ ಹೋಗಿಬಿಟ್ಟರು. ಅವರಿಗೆ ಅಧ್ಯಾತ್ಮದಲ್ಲಿ ಎಷ್ಟು ಒಲವಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಿಲ್ಲ. ಅದೆಂಥಧ್ದೋ ಸೆಳೆತ ಅವರನ್ನು ಗುರುದ್ವಾರದೊಳಕ್ಕೆ ಕರೆತಂದಿತ್ತು. ಅಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದಂತೆಯೇ ಸಂತನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ಎದುರಾಗಿದ್ದರು. ವಿಷ್ಣು ಅವರಿಗೆ ಕಡೆಯವರೆಗೂ ಭೂಷಣವಾಗಿದ್ದ ಕಡಗವನ್ನು ನೀಡಿದ್ದು ಅವರೇ.

ಆ ಕಡಗದಲ್ಲಿ ಅದ್ಯಾವ ಶಕ್ತಿಯನ್ನು ವಿಷ್ಣು ಅವರು ಕಂಡರೋ ಗೊತ್ತಿಲ್ಲ, ಇನ್ಯಾವತ್ತೂ ಅವರದನ್ನು ಬಿಚ್ಚಿಡಲಿಲ್ಲ. ನಾವೆಲ್ಲರೂ ಒಂದಲ್ಲ ಒಂದು ವಸ್ತುವಿನಲ್ಲಿ ನಮ್ಮ ನಂಬಿಕೆಯನ್ನು ಹುದುಗಿಸಿಡುತ್ತೇವೆ. ಅದು ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಯುತ್ತೇವೆ. ಇದು ಕೂಡಾ ಹಾಗೆಯೇ. ಸದ್ಯ, ವಿಷ್ಣು ಅವರ ಕಡಗ ಈಗ ಅವರ ಮನೆಯಲ್ಲಿಯೇ ಭದ್ರವಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ಸಿದ್ಧಗೊಂಡಾಗ ಕಡಗವನ್ನು ಸ್ಮಾರಕದ ಬಳಿಯಲ್ಲಿಯೇ ಪ್ರದರ್ಶನಕ್ಕಿಡುವ ಇರಾದೆಯನ್ನು ಕುಟುಂಬಸ್ಥರು ಹೊಂದಿದ್ದಾರೆ.

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.