ಬದುಕಿಗೆ ವಿವೇಚನೆ ಏಕೆ ಬೇಕು?

ಮಠದ ಬೆಳಕು

Team Udayavani, Jul 27, 2019, 5:00 AM IST

v-5

ಬದುಕಿಗೆ ವಿವೇಚನೆ ಏಕೆ ಬೇಕು?

ನಾವು ಭಗವಂತನ ಅನುಗ್ರಹವನ್ನು ಸಂಪಾದಿಸಬೇಕೆಂದರೆ, ಅವನನ್ನು ಸಂತೋಷಪಡಿಸಬೇಕೆಂದಿದ್ದರೆ, ಅವನು ವಿಧಿಸಿರುವ ಧರ್ಮವನ್ನು ಪಾಲಿಸಬೇಕು. ಭಗವಂತ ನಮಗೆ ವಿವೇಚನಾ ಶಕ್ತಿಯನ್ನು ಕೊಟ್ಟಿದ್ದಾನೆ. ಇದನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ, ತಪ್ಪು ನಮ್ಮದಾಗುತ್ತದೆ. ಪ್ರಾಚೀನ ಋಷಿಗಳು ಇದನ್ನು ಹೀಗೆ ಉದಾಹರಣೆಯಿಂದ ವಿಶದೀಕರಿಸಿದ್ದಾರೆ…

ತಂದೆಯೊಬ್ಬ, “ಯುದ್ಧ ಬಂದರೆ ಇದನ್ನು ಉಪಯೋಗಿಸು’ ಎಂದು, ಮಗನಿಗೊಂದು ಕತ್ತಿಯನ್ನು ಕೊಟ್ಟನು. ಆ ಯುವಕ, ಕತ್ತಿಯನ್ನು ಕೊಟ್ಟ ಕೆಲಸಕ್ಕೆ ಬಳಸದೆ, ಅದರಿಂದ ತನ್ನ ತಲೆ ಕತ್ತರಿಸಿಕೊಂಡ. ಅದು ಯಾರ ತಪ್ಪು? ತಂದೆಯಧ್ದೋ, ಮಗನಧ್ದೋ? ಮಗನದ್ದೇ ತಪ್ಪು! ಆತ ಆ ಕತ್ತಿಯನ್ನು ಸರಿಯಾದ ಉದ್ದೇಶಕ್ಕಾಗಿ ಬಳಸಲಿಲ್ಲ. ಅದನ್ನು ಅನರ್ಥ ಕೆಲಸಕ್ಕೆ ಬಳಸಿ, ತನಗೇ ನಾಶ ತಂದುಕೊಂಡ. ಇದು ವಿವೇಕವಿಲ್ಲದವರು ಮಾಡುವ ಕೆಲಸ.

ಧರ್ಮವನ್ನು ಅನುಸರಿಸಬೇಕಾದ ನಾವು, ನಮಗಿರುವ ವಿವೇಚನಾ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳದೆ, ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲೂ ಯತ್ನಿಸದೇ ಹೋದರೆ, ನಮಗೆ ಏನಾದರೂ ಕಷ್ಟ ಬಂದರೆ, ಅದು ಯಾರ ತಪ್ಪು? ಧರ್ಮ ಮಾರ್ಗವನ್ನು ಅನುಸರಿಸುವ ಬದಲು, ನಮ್ಮನ್ನು ಯಾರೂ ನೋಡುವುದಿಲ್ಲವೆಂಬ ಬ್ರಾಂತಿಯಿಂದ ಜೀವಿಸಿರುವಷ್ಟು ಕಾಲ ಸುಖವಾಗಿ ಜೀವಿಸು. “ಸಾಲ ಮಾಡಿಯಾದರೂ ತುಪ್ಪವನ್ನು ತಿಂದು ಬಾಳು’ ಅನ್ನುವ ಪದ್ಧತಿಯನ್ನು ಅನುಸರಿಸುತ್ತಾ, ನಮಗೆ ನಾವೇ ಎಷ್ಟೋ ಕಷ್ಟಗಳನ್ನು ತಂದುಕೊಂಡರೆ, ಇದಕ್ಕೆ ನಮ್ಮನ್ನು ಬಿಟ್ಟರೆ ಬೇರ್ಯಾರು ಹೊಣೆಯಾಗುತ್ತಾರೆ?

ನಮ್ಮ ವಿವೇಚನಾ ಶಕ್ತಿಯನ್ನು ಧರ್ಮಾಚರಣೆಗೆ ವಿನಿಯೋಗಿಸಬೇಕು. ಹಿರಿಯರು ಈ ಧರ್ಮವನ್ನು ನಮ್ಮ ಒಳಿತಿಗಾಗಿ ಹೇಳಿದ್ದಾರೆ. ಅವರು ಉಪದೇಶಿಸಿದಂತೆ ಮಾಡಬೇಕು. ಯಾರ ನಿರ್ಣಯವು ಪಕ್ಷಪಾತದಿಂದ ಆದುದಲ್ಲವೋ, ಯಾರು ಧರ್ಮಕಾಮರೋ, ಯಾರು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಸರಿಯಾಗಿ ನಿರ್ಣಯಿಸಬಲ್ಲರೋ- ಅಂಥ ಹಿರಿಯರ ಉಪದೇಶವನ್ನು ಅನುಸರಿಸಬೇಕು. ಈ ವಿಷಯವನ್ನು ಉಪನಿಷತ್ತುಗಳು ಹೇಳುತ್ತವೆ. ಅಂಥ ಮಾರ್ಗವನ್ನು ಅನುಸರಿಸಿದರೆ ಶ್ರೇಯಸ್ಸು ದಕ್ಕುತ್ತದೆ.

ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ಶಾರದಾಪೀಠಂ, ಶೃಂಗೇರಿ

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.