ಉಪ್ಪಿ ಲವ್ ಸ್ಟೋರಿಗೆ 25ರ ಸಂಭ್ರಮ
Team Udayavani, Jul 5, 2019, 5:00 AM IST
ಸಿನಿಮಾವೊಂದರ ನಿಜವಾದ ಗೆಲುವನ್ನು ನಿರ್ಧರಿಸುವುದು ಹೇಗೆ?
– ಹೀಗೊಂದು ಗೊಂದಲ ಅನೇಕರಲ್ಲಿದೆ. ಆದರೆ, ಉಪೇಂದ್ರ ಅವರಲ್ಲಿ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರವಿದೆ. ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ, ಪಾರ್ಕಿಂಗ್ ಬಾಯ್, ಕ್ಯಾಂಟಿನ್, ಬ್ಲ್ಯಾಕ್ ಟಿಕೆಟ್ ಮಾರುವಾತ ಸೇರಿದಂತೆ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲರೂ ಒಳ್ಳೆಯ ಹಣ ಮಾಡಿದಾಗ ಮಾತ್ರ ಅದು ಸಿನಿಮಾವೊಂದರ ಗೆಲುವು. ಉಪೇಂದ್ರ ಈ ಮಾತು ಹೇಳಲು ಕಾರಣ ‘ಐ ಲವ್ ಯು’ ಚಿತ್ರ. ಆರ್.ಚಂದ್ರು ನಿರ್ಮಾಣ, ನಿರ್ದೇಶನದ ‘ಐ ಲವ್ ಯು’ ಚಿತ್ರಕ್ಕೆ ಈಗ 25ರ ಸಂಭ್ರಮ. ಈ ಚಿತ್ರ ಸಿನಿಮಾದ ಎಲ್ಲಾ ವರ್ಗದವರು ಖುಷಿಯಾಗುವಂತೆ ಮಾಡಿದೆಯಂತೆ. ಇತ್ತೀಚೆಗೆ ಚಿತ್ರತಂಡ ಈ ಸಂಭ್ರಮವನ್ನು ಹಂಚಿಕೊಳ್ಳಲು ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಉಪ್ಪಿ ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡರು. ‘ನಿರ್ಮಾಪಕ ಸಿನಿಮಾವನ್ನು ಹಂಚಿಕೆದಾರನಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ನಿಜವಾದ ಗೆಲುವಲ್ಲ. ಸಿನಿಮಾ ಬಿಡುಗಡೆಯಾಗಿ ಎಲ್ಲಾ ವಿಧಗಳಲ್ಲೂ ಯಶಸ್ಸು ಕಾಣುವುದು ನಿಜವಾದ ಗೆಲುವು. ಈ ಚಿತ್ರ ಗೆಲ್ಲುತ್ತದೆ ಎಂದು ನನಗೆ ಅಣ್ಣನ ಮಗ ನಿರಂಜನ್ ಹೇಳಿದ. ಆ ನಂತರ ವಿತರಕರಾದ ಮೋಹನ್ ದಾಸ್ ಪೈ, ಧೀರಜ್ ಕೂಡಾ ಅದೇ ಮಾತು ಹೇಳಿದರು. ನಿರ್ದೇಶಕ ಚಂದ್ರು ಅವರು ಆರಂಭದಲ್ಲಿ ಏನು ಹೇಳಿದ್ದಾರೋ ಅದರಂತೆ ಸಿನಿಮಾ ಮಾಡಿದ ಪರಿಣಾಮ ಸಿನಿಮಾ ಗೆದ್ದಿದೆ. ಇವತ್ತು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದೊಂದು ಸಿನಿಮಾಗಳ ಗೆಲುವು ಕೂಡಾ ಚಿತ್ರರಂಗದ ಗೆಲುವು ಇದ್ದಂತೆ’ ಎಂದರು ಉಪೇಂದ್ರ. ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ಕೂಡಾ ಚಿತ್ರದ ಗೆಲುವಿನ ಬಗ್ಗೆ ಖುಷಿಪಟ್ಟರು. ಉಳಿದಂತೆ ಚಿತ್ರತಂಡದ ಸದಸ್ಯರು ಕೂಡಾ ತಮ್ಮ ಸಂಭ್ರಮ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ