ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿಯ 8ನೇ ಆವೃತ್ತಿ ಬಿಡುಗಡೆ

ಲಿಂಗರಾಜು ಪರಿಶ್ರಮದ ಡೈರೆಕ್ಟರಿಗೆ ಮೆಚ್ಚುಗೆ

Team Udayavani, Jun 7, 2019, 6:00 AM IST

f-24

ಕನ್ನಡ ಚಿತ್ರರಂಗದ ಪ್ರಚಾರಕರ್ತರಾಗಿ ಕಳೆದ ಮೂರು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಎಂ.ಜಿ.ಲಿಂಗರಾಜು, ಇದುವರೆಗೆ ಯಶಸ್ವಿಯಾಗಿ ಹೊರತರುತ್ತಿದ್ದ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8 ನೇ (ಇಂಗ್ಲೀಷ್‌) ಆವೃತ್ತಿ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಸಂಪಾದಕತ್ವದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿಯೇ ಅದನ್ನು ಹೊರತರುತ್ತಿದ್ದ ಎಂ.ಜಿ.ಲಿಂಗರಾಜು, ಈ 8 ನೇ ಆವೃತ್ತಿಯನ್ನು ಕಲರ್‌ಫ‌ುಲ್‌ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳಿಸಿದ್ದಾರೆ. ಅಂದಹಾಗೆ, ಅವರ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8 ನೇ ಅವೃತ್ತಿ ಬಿಡುಗಡೆಗೆ ನಟ ಮತ್ತು ನಿರ್ದೇಶಕ ಉಪೇಂದ್ರ, ನಟಿ ಹರಿಪ್ರಿಯಾ, ವೈಷ್ಣವಿ, ನಿರ್ಮಾಪಕ ಎಂ. ದೇವೇಂದ್ರ ರೆಡ್ಡಿ, ನಿರ್ದೇಶಕ ಸಾಯಿಪ್ರಕಾಶ್‌, ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್‌, ಗಣೇಶ್‌ ಕಾಸರೋಗೋಡು, ಭಾ.ಮ.ಹರೀಶ್‌ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಾಕ್ಷಿಯಾದರು.

ಅಂದಹಾಗೆ, 2019ರ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದಂದು ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌ ಆಕರ್ಷಣೆಯಾಗಿದ್ದರು. ಲಿಂಗರಾಜು ಅವರ ಪರಿಶ್ರಮ ಹಾಗು ಛಲದ ಬಗ್ಗೆ ಭಗವಾನ್‌ ಗುಣಗಾನ ಮಾಡಿದರು. ಈ ಡೈರೆಕ್ಟರಿ ಎಷ್ಟೊಂದು ಉಪಯುಕ್ತ ಎಂಬುದನ್ನು ಸಾರುತ್ತಲೇ, ಲಿಂಗರಾಜು ಅವರ ಅನೇಕ ಕನಸುಗಳು ನನಸಾಗಲಿ’ ಎಂದರು. “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ ಕುರಿತು ಉಪೇಂದ್ರ ಹೇಳಿದ್ದಿಷ್ಟು.”ಕಳೆದ 20 ವರ್ಷಗಳ ಹಿಂದೆ ಇದೇ ಡೈರೆಕ್ಟರಿಯ ಪ್ರಥಮ ಪ್ರತಿಯನ್ನು ನಾನು ಬಿಡುಗಡೆ ಮಾಡಿದ್ದು ಇನ್ನೂ ನೆನಪಿದೆ. ಇಂದು ಸಂತೋಷ ಪಡುವ ವಿಷಯ. ಲಿಂಗರಾಜು ಅವರು ಬಹಳ ರಿಸ್ಕ್ ತೆಗೆದುಕೊಂಡು ಈ ಪುಸ್ತಕವನ್ನು ಹೊರ ತಂದಿದ್ದಾರೆ, ಅದೇ ಬೇಸರದಿಂದ ಇದು ಕೊನೆಯ ಆವೃತ್ತಿ ಎಂದು ಹೇಳಿದ್ದಾರೆ. ಆದರೆ, ಇದು ಕೊನೆಯದಾಗಬಾರದು. ಎಲ್ಲಿ ಮೊದಲು ಇರುತ್ತದೆಯೋ ಅಲ್ಲಿ ಕೊನೆ ಇರುತ್ತೆ. ಎಲ್ಲಿ ಕೊನೆ ಇರುತ್ತದೆಯೋ ಅಲ್ಲಿ ಮೊದಲು ಇರುತ್ತದೆ. ನಾವೆಲ್ಲ ಅವರ ಜೊತೆಗಿದ್ದೇವೆ. ಚಿತ್ರರಂಗದ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಉಪಯೋಗಿಸಿಕೊಂಡು ಒಂದು “ವೆಬ್‌ಸೈಟ್‌’ ತೆರೆಯಿರಿ’ ಎಂಬ ಸಲಹೆ ಕೊಟ್ಟರು ಉಪೇಂದ್ರ.

ಗೀತರಚನೆಕಾರ ವಿ ನಾಗೇಂದ್ರಪ್ರಸಾದ್‌ ಕೂಡ ಅಂದು ಲಿಂಗರಾಜ್‌ ಅವರ ಪ್ರಯತ್ನವನ್ನು ಕೊಂಡಾಡಿದರು. “ಈಗಿನ ಕಾಲದಲ್ಲಿ ಅಂಗೈಯಲ್ಲಿ ಇಡೀ ವಿಶ್ವವನ್ನು ಇಟ್ಟುಕೊಂಡಿದ್ದೇವೆ. ಆದರೆ 20 ವರ್ಷಗಳ ಹಿಂದೆ ಈ ಡೈರೆಕ್ಟರಿಗೆ ಅದರದ್ದೇ ಆದಂತಹ ಮಹತ್ವವಿತ್ತು. ಇದನ್ನು ಲಿಂಗರಾಜ್‌ ಅವರು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಡಿಜಿಟಲ್‌ ರೂಪದಲ್ಲಿಯಾದರೂ ಈ ಕೆಲಸವನ್ನು ಅವರು ಮುಂದುವರೆಸಬೇಕು’ ಎಂದರು ನಾಗೇಂದ್ರಪ್ರಸಾದ್‌.

ಅಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್‌, ಹಿರಿಯ ನಟ ಶಂಕರ ಭಟ್‌, ನಿರ್ದೇಶಕ ಕಪಿಲ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. “ನಂದಿನಿ ಪಬ್ಲಿಕೇಶನ್‌’ ಹೂರತಂದಿರುವ ಸಿನಿಮಾ-ಟಿವಿ ಡೈರೆಕ್ಟರಿ 2019-2021 ಸಾಲಿನವರೆಗೆ ಇರಲಿದ್ದು, ಇದರಲ್ಲಿ ಹಿರಿತೆರೆ – ಕಿರುತೆರೆ ಕಲಾವಿದರು, ತಂತ್ರಜ್ಞರ ದೂರವಾಣಿ, ವಿಳಾಸ ಸೇರಿದಂತೆ ಸಮಗ್ರ ವಿವರಗಳು ಒಳಗೊಂಡಿದ್ದು, ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಸಂಘ-ಸಂಸ್ಥೆಗಳಲ್ಲೂ ಈ ಡೈರೆಕ್ಟರಿ ಲಭ್ಯವಿದೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.