ಸ್ವಾರ್ಥರತ್ನನ ವಿಭಿನ್ನ ಯೋಚನೆ


Team Udayavani, Oct 12, 2018, 6:00 AM IST

z-29.jpg

ಆ ವೇದಿಕೆ ಮೇಲೆ ಹಿರಿಯ ನಿರ್ದೇಶಕ ಭಗವಾನ್‌ ನಿಂತಿದ್ದರು. ಅವರ ಎದುರು ರೆಟ್ರೋ ಶೈಲಿಯ ಕಾಸ್ಟೂಮ್‌ನಲ್ಲಿ ನಾಯಕ ಆದರ್ಶ್‌ ಮತ್ತು ನಾಯಕಿ ಇಶಿತಾ ವರ್ಷ ನಿಂತಿದ್ದರು. ಪಕ್ಕದಲ್ಲೇ ನಿರ್ದೇಶಕ ಅಶ್ವಿ‌ನ್‌ ಕೊಡಂಗಿ ಚಿಕ್ಕದ್ದೊಂದು ಕ್ಯಾಮೆರಾ ಹಿಡಿದು ನಿಂತಿದ್ದರು. ಎದುರಿಗಿದ್ದ ಕ್ಯಾಮೆರಾಗಳು ಅವರ ಮೇಲೆ ಫೋಕಸ್‌ ಆಗಿದ್ದವು. ಭಗವಾನ್‌ ಆ್ಯಕ್ಷನ್‌ ಹೇಳಿದರು. ಗಾಯಕ ಮೋಹನ್‌ ಕೃಷ್ಣ “ನೀ ಬಂದು ನಿಂತಾಗ…’ ಹಾಡು ಗುನುಗಿದರು. ವೇದಿಕೆ ಮೇಲೆ ಆದರ್ಶ್‌ ಮತ್ತು ಇಶಿತಾ ವರ್ಷ ಇಬ್ಬರೂ

 ಕೈ ಹಿಡಿದು ಅತ್ತಿಂದಿತ್ತ, ಇತ್ತಿಂದತ್ತ ಹೆಜ್ಜೆ ಹಾಕಿದರು. ಭಗವಾನ್‌ ಕಟ್‌ ಇಟ್‌ ಅಂದರು. ಎಲ್ಲರೂ ಚಪ್ಪಾಳೆ ತಟ್ಟಿದರು. ವೇದಿಕೆ ಮೇಲಿದ್ದ ನಾಯಕಿ ನಾಚಿನೀರಾದರು… ಇದು ಯಾವುದೋ ಚಿತ್ರದ ಚಿತ್ರೀಕರಣದ ದೃಶ್ಯವಲ್ಲ. “ಸ್ವಾರ್ಥರತ್ನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ಇದಕ್ಕೆ ಕಾರಣ, ಚಿತ್ರದಲ್ಲೊಂದು “ನಿನ್ನಯನ..’ ಎಂಬ ರೆಟ್ರೋ ಶೈಲಿಯ ಕಪ್ಪು ಬಿಳುಪಿನ ಹಾಡಿದೆ. ಆ ಹಾಡನ್ನು ಬಿಡುಗಡೆ ಮಾಡಿದ್ದು ಹಿರಿಯ ನಿರ್ದೇಶಕ ಭಗವಾನ್‌. ಅಂದು ಭಗವಾನ್‌ ಆ್ಯಕ್ಷನ್‌ ಹೇಳುವ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ. ಈ ವೇಳೆ ಭಗವಾನ್‌, ತಮ್ಮ ಹಳೆಯ ನೆನಪಿಗೆ ಜಾರಿದರಲ್ಲದೆ, “ನೀ ಬಂದು ನಿಂತಾಗ..’ ಹಾಡನ್ನು ಬೆಳಗ್ಗೆ 7 ಕ್ಕೆ ಶುರುಮಾಡಿ, ಸಂಜೆ 5 ಕ್ಕೆ ಮುಗಿಸಿದ ವಿಷಯ ಹಂಚಿಕೊಂಡರು. ಇದು ಮೊದಲ ಹಾಡಿನ ವಿಷಯವಾದರೆ,

ಎರಡನೇ ಹಾಡಿನ ಬಿಡುಗಡೆ ಕೂಡ ವಿಶೇಷವಾಗಿತ್ತು. ಯಶ್‌-ರಾಧಿಕಾ ಅವರ ಜೋಡಿ ಮೇಲೊಂದು “ಅವಳ ಕಂಡಂತೆ..’ ಎಂಬ ಹಾಡಿದೆ. ಆ ಹಾಡನ್ನು ಯಶ್‌ ಅವರ ಬಳಿ ಅನುಮತಿ ಪಡೆದು, ಅವರ ಅಭಿಮಾನಿಗಳಿಂದಲೇ ಹಾಡನ್ನು ಬಿಡುಗಡೆ ಮಾಡಿಸಿದರು ನಿರ್ದೇಶಕ ಅಶ್ವಿ‌ನ್‌ ಕೊಡಂಗಿ. ವೇದಿಕೆಗೆ ಬಂದ ಯಶ್‌ ಅಭಿಮಾನಿಗಳ ಸಂಘದ ವಜ್ರಮುನಿ, ಸತೀಶ್‌, ಬಸವರಾಜ್‌ ಬಳ್ಳಾರಿ, ನಿಖೀಲ್‌ ಸೇರಿದಂತೆ ಗದಗ್‌, ಚಿಕ್ಕಮಗಳೂರಿನಿಂದ ಆಗಮಿಸಿದ್ದ ಅಭಿಮಾನಿಗಳು, ಯಶ್‌ ಹಾಗು ರಾಧಿಕಾ ಅವರ ಭಾವಚಿತ್ರ ಬಿಡುಗಡೆ ಮಾಡುವ ಮೂಲಕ ಅವರ ಕುರಿತ ಹಾಡನ್ನು ಬಿಡುಗಡೆ ಮಾಡಿದರು.

ಆ ನಂತರ “ಅಯ್ಯೋ ಅಯ್ಯೋ..’ ಎಂಬ ಎಣ್ಣೆ ಹಾಡೊಂದನ್ನು ಸಭಾಂಗಣದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ವೇದಿಕೆಗೆ ಆಹ್ವಾನಿಸಿ, ಅವರಿಂದ ಬಾಟಲ್‌ ಓಪನ್‌ ಮಾಡುವ ಮೂಲಕ ಬಿಡುಗಡೆ ಮಾಡಿಸಲಾಯಿತು. ಆ ಹಾಡಿಗೆ ಸಾಧುಕೋಕಿಲ ಹೆಜ್ಜೆ ಹಾಕಿದ್ದರಿಂದ, ಬಾಟಲ್‌ ಮೇಲೆ ಸಾಧು ಅವರ ಭಾವಚಿತ್ರ ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು. ಇದಾದ ಬಳಿಕ ವೇದಿಕೆಗೆ ಅಂಚೆಪೆಟ್ಟಿಗೆಯನ್ನೂ ತಂದಿಡಲಾಯಿತು. ಆಗಲೂ ವೇದಿಕೆಗೆ ಒಬ್ಬರನ್ನು ಆಹ್ವಾನಿಸಿ, ಅವರಿಂದ ಅದರೊಳಗಿದ್ದ ಲೆಟರ್‌ವೊಂದನ್ನು ತೆಗೆಸಿ ಜಯಂತ್‌ ಕಾಯ್ಕಿಣಿ ಅವರು ಬರೆದ “ಜೀವ ಕರೆಯೋಲೆ’ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಅಲ್ಲಿಗೆ ಸಮಯವೂ ಮೀರಿತ್ತು. ಚಿತ್ರದ ಬಗ್ಗೆ ಮಾತುಕತೆಗಿಂತ ಅಂದು ಹಾಡುಗಳನ್ನು ಬಿಡುಗಡೆ ಮಾಡಿಸುವುದರಲ್ಲೇ ನಿರ್ದೇಶಕರು ಸಮಯ ಕಳೆದರು.

ಸಂಗೀತ ನಿರ್ದೇಶಕ ಬಿ.ಜೆ.ಭರತ್‌ ಚಿತ್ರದಲ್ಲಿರುವ ಹಾಡುಗಳ ಬಗ್ಗೆ ಗುಣಗಾನ ಮಾಡಿದರು. ನಿರ್ದೇಶಕ ಅಶ್ವಿ‌ನ್‌ ಚಿತ್ರ ಮೂಡಿಬಂದ ಬಗೆ ವಿವರಿಸಿದರು. ನಾಯಕಿಯರಾದ ಇಶಿತಾ ವರ್ಷ ಹಾಗೂ ಸ್ನೇಹಾ ಸಿಂಗ್‌ ಪಾತ್ರ ಹಾಗೂ ಚಿತ್ರ ಬಗ್ಗೆ ಹೇಳಿಕೊಂಡರು. ಅಲ್ಲಿಗೆ ಹಾಡುಗಳ ಬಿಡುಗಡೆಗೆ ಬ್ರೇಕ್‌ ಬಿತ್ತು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.