ಸುಮಂತ್ ಗೋವಿಂದ ನಾಮ ಸ್ಮರಣೆ
Team Udayavani, Mar 19, 2021, 2:20 PM IST
ನಟ ಸುಮಂತ್ ಶೈಲೇಂದ್ರ ಸದ್ಯ ಗೋವಿಂದ ನಾಮ ಸ್ಮರಣೆಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮುಂಬರುವ ಚಿತ್ರ “ಗೋವಿಂದ ಗೋವಿಂದ’.
ಹೌದು, ಸುಮಾರು ಮೂರು ವರ್ಷಗಳ ಬಳಿಕ ಈ ಬಾರಿ ಸುಮಂತ್ “ಗೋವಿಂದ ಗೋವಿಂದ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ “ಗೋವಿಂದ ಗೋವಿಂದ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಇದೇ ಏಪ್ರಿಲ್ ವೇಳೆಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇಲ್ಲಿಯವರೆಗೆ ಲವರ್ಬಾಯ್, ಆ್ಯಕ್ಷನ್ ಹೀರೋ ಹೀಗೆ ಬೇರೆ ಬೇರೆ ಗೆಟಪ್ಗ್ಳಲ್ಲಿ ಕಾಣಿಸಿಕೊಂಡಿದ್ದ ಸುಮಂತ್ ಶೈಲೇಂದ್ರ, ಈ ಚಿತ್ರದಲ್ಲಿ ಇಲ್ಲಿಯವರೆಗೆ ಕಾಣಿಸಿಕೊಂಡಿದ್ದ ಪಾತ್ರಗಳಿಗಿಂತ, ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸುಮಂತ್, “ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಲ್ಲಿ ಒಂದೊಂದು ಥರದ ಕ್ಯಾರೆಕ್ಟರ್ ಇದ್ದರೆ, ಈ ಸಿನಿಮಾದಲ್ಲಿ ಅದೆಲ್ಲದಕ್ಕಿಂತ ಡಿಫರೆಂಟ್ ಆಗಿರುವಂಥ ಬೇರೆಯದೇ ಕ್ಯಾರೆಕ್ಟರ್ ಇದೆ. ಇದರಲ್ಲಿ ನನ್ನದು ಪಕ್ಕಾ ಪಿಯುಸಿ ಹುಡುಗನ ಥರದ ಕ್ಯಾರೆಕ್ಟರ್. ಟೀನೇಜ್ ಹುಡುಗರಲ್ಲಿರುವ ತರಲೆ, ತುಂಟಾಟ ಎಲ್ಲವನ್ನೂ ನನ್ನ ಕ್ಯಾರೆಕ್ಟರ್ನಲ್ಲಿ ಕಾಣಬಹುದು. ಆಡಿಯನ್ಸ್ಗೆ ಕಂಪ್ಲೀಟ್ ಎಂಟರ್ ಟೈನ್ಮೆಂಟ್ ಕೊಡುವಂಥ ಕ್ಯಾರೆಕ್ಟರ್ ಇದು’ ಎನ್ನುತ್ತಾರೆ.
“ನಾನು ಇಲ್ಲಿಯವರೆಗೆ ಕಾಮಿಡಿ, ಸಸ್ಪೆನ್ಸ್ – ಥ್ರಿಲ್ಲರ್ ಶೈಲಿಯ ಸಿನಿಮಾಗಳನ್ನು ಮಾಡಿರಲಿಲ್ಲ. “ಗೋವಿಂದ ಗೋವಿಂದ’ ನನಗೆ ಹೊಸಥರದ ಸಿನಿಮಾ. ಇದರ ಸಬ್ಜೆಕ್ಟ್, ಪ್ರಸೆಂಟೇಷನ್ ಎಲ್ಲವೂ ಹೊಸಥರದಲ್ಲಿ ಇರಲಿದೆ. ಟೆಕ್ನಿಕಲಿ ಕೂಡ ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್, ಫಸ್ಟ್ಲುಕ್, ಟೀಸರ್, ಸಾಂಗ್ಸ್ ಎಲ್ಲದಕ್ಕೂ ಆಡಿಯನ್ಸ್ ಕಡೆಯಿಂದ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಥಿಯೇಟರ್ನಲ್ಲೂ “ಗೋವಿಂದ ಗೋವಿಂದ’ ಆಡಿಯನ್ಸ್ಗೆ ಇಷ್ಟವಾಗಲಿದೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ಸುಮಂತ್.
ಇನ್ನು “ಗೋವಿಂದ ಗೋವಿಂದ’ ಚಿತ್ರದಲ್ಲಿ ಸುಮಂತ್ ಅವರೊಂದಿಗೆ ಕವಿತಾ ಗೌಡ, ಭಾವನಾ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ. ಮನೋಹರ್, ಕಡ್ಡಿಪುಡಿ ಚಂದ್ರು, ಪದ್ಮವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನಾ ಶ್ರೀನಿಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಶೈಲೇಂದ್ರ ಪ್ರೊಡಕ್ಷನ್ಸ್’, “ಎಲ್ ಜಿ.ಕ್ರಿಯೇಷನ್ಸ್’ ಹಾಗೂ “ರವಿ ಗರಣಿ ಪ್ರೊಡಕ್ಷನ್ಸ್’ ಸಹಯೋಗದೊಂದಿಗೆ ನಿರ್ಮಿಸಿರುವ “ಗೋವಿಂದ ಗೋವಿಂದ’ ಚಿತ್ರಕ್ಕೆ ತಿಲಕ್ ನಿರ್ದೇಶನವಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ