ಭಗವಾನ್‌ ಬೊಂಬೆಯಾಟ ಶುರು


Team Udayavani, Jan 4, 2019, 12:30 AM IST

x-80.jpg

ಹಿರಿಯ ನಿರ್ದೇಶಕ ಭಗವಾನ್‌ (ದೊರೆ-ಭಗವಾನ್‌) ಸುಮಾರು ಎರಡು ದಶಕಗಳ ಬಳಿಕ ಮತ್ತೂಂದು ಚಿತ್ರ ನಿರ್ದೇಶಿಸಿದ್ದಾರೆ. ಅದು “ಆಡುವ ಗೊಂಬೆ’. ಹೌದು, ಭಗವಾನ್‌ ಅವರ ಚಿತ್ರ ಬದುಕಿನಲ್ಲಿ ಅವರು ನಿರ್ದೇಶಿಸುತ್ತಿರುವ 50ನೇ ಚಿತ್ರವಿದು. ಈ ವಾರ ತೆರೆಗೆ ಬರುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಮಾಧ್ಯಮ ಮುಂದೆ ಬಂದಿದ್ದ ಭಗವಾನ್‌ ಮತ್ತು ತಂಡ, “ಗೊಂಬೆ’ಯ ಆಟ-ಪಾಠ ಅನುಭವಗಳನ್ನು ತೆರೆದಿಟ್ಟರು.

“ನನ್ನ ಚಿತ್ರ ಬದುಕಿನಲ್ಲಿ ಇದೊಂದು ವಿನೂತನ, ವಿಭಿನ್ನ, ವಿಶೇಷ ಚಿತ್ರ’ ಎನ್ನುತ್ತಲೇ ಮಾತಿಗಿಳಿದ ನಿರ್ದೇಶಕ ಭಗವಾನ್‌, “ಸುಮಾರು 22 ವರ್ಷದ ನಂತರ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶವನ್ನು ನನ್ನ ಶಿಷ್ಯಂದಿರು ಕಲ್ಪಿಸಿಕೊಟ್ಟರು. ಅವರಿಂದಾಗಿ ಮತ್ತೆ ಚಿತ್ರವನ್ನು ನಿರ್ದೇಶಿಸುವಂತಾಯಿತು. ಈ ಚಿತ್ರದಲ್ಲಿ ಹಿರಿಯರು ಮತ್ತು ಕಿರಿಯರು ಎಲ್ಲರೊಂದಿಗೂ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈಗಿನ ತಲೆಮಾರಿಗೆ ಹೇಳಿ ಮಾಡಿಸಿದ ಕಥೆ ಚಿತ್ರದಲ್ಲಿದೆ. ಹಣೆಬರಹ ಅಥವಾ ವಿಧಿಯಾಟ ಎನ್ನುವುದು ನಮ್ಮ ಜೀವನದಲ್ಲಿ ಹೇಗೆಲ್ಲಾ ಆಟ ಆಡಿಸಬಹುದು ಎನ್ನುವುದೇ ಚಿತ್ರದ ಕಥಾಹಂದರ. ಈಗಿನ ಚಿತ್ರಗಳಲ್ಲಿ ಇರುವಂತೆ ಡ್ಯಾನ್ಸ್‌, ಫೈಟ್ಸ್‌, ಕುಡಿತ ಈ ಥರದ ಯಾವ ಅಂಶಗಳೂ ಈ ಚಿತ್ರದಲ್ಲಿಲ್ಲ. ಆದರೆ ಮನರಂಜನೆಗೆ ಏನೆಲ್ಲ ಬೇಕೋ, ಅದೆಲ್ಲವೂ ಚಿತ್ರದಲ್ಲಿದೆ. ಇಲ್ಲಿ ಸಾಕಷ್ಟು ತಿರುವುಗಳಿವೆ. ಪ್ರತಿ ದೃಶ್ಯ-ಸನ್ನಿವೇಶಗಳೂ ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ. ಯಾವುದೇ ಗಿಮಿಕ್‌ ಇಲ್ಲದೆ ಚಿತ್ರ ಮಾಡಿದ್ದೇವೆ’ ಎಂದರು ಭಗವಾನ್‌. 

ನಟ ಸಂಚಾರಿ ವಿಜಯ್‌, “2018ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದ “ನಾತಿಚರಾಮಿ’ ಕೊನೆ ಚಿತ್ರವಾಗಿತ್ತು. 2019ರಲ್ಲಿ ಮೊದಲು ಬಿಡುಗಡೆಯಾಗುವ ಚಿತ್ರಗಳಲ್ಲಿ ಮತ್ತೆ ನಾನು ಅಭಿನಯಿಸಿರುವ “ಆಡುವ ಗೊಂಬೆ’ ಚಿತ್ರವಿದೆ. ಕಲಾವಿದನಿಗೆ ಸಹಜವಾಗಿಯೇ ಇದು ಖುಷಿ ನೀಡುವಂಥದ್ದು. ನನ್ನ ಪ್ರಕಾರ, “ಆಡುವ ಗೊಂಬೆ’ “ಕಸ್ತೂರಿ ನಿವಾಸ’ದ ಮುಂದುವರೆದ ಭಾಗ. ಚಿತ್ರದಲ್ಲಿ ಏನೆಲ್ಲಾ ಮನರಂಜನೆ, ಸಂದೇಶ, ಚಿಂತನೆಗಳಿದ್ದವೊ, ಅದೆಲ್ಲವೂ ಈ ಚಿತ್ರದಲ್ಲೂ ಇದೆ. ಈಗಿನ ಸಮಾಜಕ್ಕೆ ಒಪ್ಪುವ ಕಥೆಯನ್ನು ಅಷ್ಟೇ ಚೆನ್ನಾಗಿ ಚಿತ್ರ ರೂಪದಲ್ಲಿ ತೆರೆಗೆ ತಂದಿದ್ದಾರೆ ಹಿರಿಯ ನಿರ್ದೇಶಕ ಭಗವಾನ್‌’ ಎಂದು ಚಿತ್ರವನ್ನು ಬಣ್ಣಿಸಿದರು. 

ಚಿತ್ರದ ಬಗ್ಗೆ ಮಾತನಾಡಿದ ನಟಿ ಸುಧಾ ಬೆಳವಾಡಿ, “ನಿರ್ದೇಶಕರು ಆರಂಭದಲ್ಲಿ ಹೇಳಿದ 45 ನಿಮಿಷದ ಕಥೆ, ಅದನ್ನು ಹೇಳಿದ ರೀತಿ ಎರಡೂ ಸೊಗಸಾಗಿತ್ತು. ಕಥೆ ಕೇಳುತ್ತಿದ್ದಂತೆ ಚಿತ್ರಕ್ಕೆ ಸಿಕ್ಕ ಅವಕಾಶವನ್ನು ಒಪ್ಪಿಕೊಂಡೆ. ಈ  ವಯಸ್ಸಲ್ಲೂ ಅವರ ಶ್ರದ್ಧೆ, ಪ್ರಾಮಾಣಿಕತೆ ಈಗಿನವರಿಗೆ ಅನುಕರಣೀಯ. ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಹಣೆ ಬರಹವೇ ನಾಯಕ ಎನ್ನುವುದನ್ನು ಇಡೀ ಚಿತ್ರ ಒಂದೇ ಸಾಲಿನಲ್ಲಿ ಹೇಳುತ್ತದೆ. ಮ್ಯಾನ್‌ ಪ್ರಪೋಸಸ್‌, ಗಾಡ್‌ ಡಿನ್ಪೋಸಸ್‌ ಅನ್ನುವಂತೆ ಎಲ್ಲವು ಚಿತ್ರದಲ್ಲಿ ಅಡಗಿದೆ’ ಎಂದರು. 

“ಕಸ್ತೂರಿ ನಿವಾಸ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ಎ.ಶಿವಪ್ಪ ಹಾಗೂ ಕೆ. ವೇಣುಗೋಪಾಲ್‌ ಈ ಚಿತ್ರ ನಿರ್ಮಿಸಿದ್ದಾರೆ. ಅನಂತನಾಗ್‌, ಸುಧಾ ಬೆಳವಾಡಿ, ಸಂಚಾರಿ ಜಯ್‌, ರಿಶಿತಾ ಮಲಾ°ಡ್‌, ನಿರೋಷ ಶೆಟ್ಟಿ, ದಿಶಾ ಕೃಷ್ಣಯ್ಯ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ಹೇಮಂತ್‌ ಕುಮಾರ್‌ ಸಂಗೀತ ಸಂಯೋಜನೆ, ತ್ರಿಭುವನ್‌ ನೃತ್ಯ ಸಂಯೋಜನೆಯಿದೆ. ಈ ಚಿತ್ರಕ್ಕೆ ಜಬೇಜ್‌ ಕೆ ಗಣೇಶ್‌ ಅವರ ಛಾಯಾಗ್ರಹಣ ಮತ್ತು ಶಿವಪ್ರಸಾದ್‌ ಯಾದವ್‌ ಸಂಕಲನವಿದೆ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.