ಅಂಬೇಡ್ಕರ್ ತತ್ವದ ಧಾಂಗಡಿ
Team Udayavani, Jul 6, 2018, 6:00 AM IST
ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಳು ಬಂದಿವೆ. ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಅವರ ಹಾದಿಯ ಕುರಿತಾದ ಸಿನಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಧಾಂಗಡಿ’. ಹೌದು, “ಧಾಂಗಡಿ’ ಎಂಬ ಚಿತ್ರವೊಂದು ಚಿತ್ರೀಕರಣ ಮುಗಿಸಿದ್ದು, ಚಿತ್ರ ಇಂದು ತೆರೆಕಾಣುತ್ತಿದೆ. ಅಂಬೇಡ್ಕರ್ ಅವರ ಜೀವನ, ಅವರ ಸಿದ್ಧಾಂತದ ಕುರಿತಾಗಿ ಈ ಸಿನಿಮಾ ಸಾಗುತ್ತದೆಯಂತೆ. ಶರತ್ ಈ ಸಿನಿಮಾದ ನಿರ್ದೇಶಕರು. ಆರಂಭದಲ್ಲಿ ಡಾ.ಸಿದ್ರಾಮ್ ಕಾರಣಿಕ ನಿರ್ದೇಶಕರಾಗಿದ್ದರು. ಆ ನಂತರ ಅವರ ಜಾಗಕ್ಕೆ ಶರತ್ ಬಂದಿದ್ದಾರೆ.
ಶರತ್ ಅವರಿಗೆ ಈ ಪ್ರಾಜೆಕ್ಟ್ ಬಂದಾಗ, ತನ್ನ ಕೈಯಿಂದ ಈ ಸಿನಿಮಾ ಮಾಡಲು ಸಾಧ್ಯನಾ ಎಂದು ಯೋಚಿಸಿದರಂತೆ. ಆ ನಂತರ ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಓದಿ, ಸಿನಿಮಾಕ್ಕೆ ಬೇಕಾದ ಅಂಶವನ್ನು ಸಂಗ್ರಹಿಸಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಶರತ್. ಈ ಸಿನಿಮಾದ ಚಿತ್ರೀಕರಣ ಬೆಳಗಾವಿ ಸುತ್ತಮುತ್ತ ನಡೆದಿದೆ. ಅಮಾವಾಸ್ಯೆಯ ದಿನ ಆರಂಭವಾದ ಚಿತ್ರೀಕರಣಕ್ಕೆ ಅಮಾವಾಸ್ಯೆಯ ದಿನವೇ ಕುಂಬಳಕಾಯಿ ಒಡೆಯಲಾಗಿದೆ. ಈ ಮೂಲಕ ಚಿತ್ರ ಮೂಢನಂಬಿಕೆಯ ವಿರುದ್ಧ ಎಂಬುದನ್ನು ತೋರಿಸಿಕೊಟ್ಟಿದೆ.
ಈ ಚಿತ್ರವನ್ನು ಸುರೇಂದ್ರ ಉಗಾರೆ ನಿರ್ಮಿಸಿದ್ದಾರೆ. ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು. ಜೊತೆಗೆ ಮುಂದಿನ ದಿನಗಳಲ್ಲಿ ಗೌತಮ ಬುದ್ಧ ಹಾಗೂ ಟಿಪ್ಪು ಸುಲ್ತಾನ್ ಕುರಿತ ಸಿನಿಮಾ ಮಾಡುವುದಾಗಿ ಘೋಷಿಸಿದರು. ಈ ಚಿತ್ರದಲ್ಲಿ ಸಂಜು, ಬಿರಾದಾರ್, ಡಾ.ಸಿದ್ರಾಮ್ ಕಾರಣಿಕ, ಕನಕ ಲಕ್ಷ್ಮೀ, ಡಾ.ಸವಿತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಮೋದ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ವೆಂಕಟ್ ಸುಮಾರು 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್