ಸತೀಶ್‌ ಬಯಸಿದ್ದು ಅರ್ಜುನ್‌ ಮಾಡಿದ್ದು ಜರ್ನಿ ಸಿನಿಮಾ


Team Udayavani, Apr 7, 2017, 3:45 AM IST

sathish.jpg

“ಲೈಫ್ 360′ ಎಂಬ ಸಿನಿಮಾವೊಂದು ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಆಡಿಯೋ ಬಿಡುಗಡೆಯಾಗಿದೆ. ಅರ್ಜುನ್‌ ನಟಿಸಿ, ನಿರ್ದೇಶಿಸಿರುವ ಚಿತ್ರದ ಆಡಿಯೋ ಬಿಡುಗಡೆಗೆ ನೀನಾಸಂ ಸತೀಶ್‌ ಅತಿಥಿಯಾಗಿ ಬಂದಿದ್ದರು. ಅತಿಥಿಯಾಗಿ ಬಂದಿದ್ದ ನೀನಾಸ ಸತೀಶ್‌, ಅರ್ಜುನ್‌ರಿಂದಾಗಿ ತಾವು ಮಾಡಬೇಕಾಗಿದ್ದ ಜರ್ನಿ ಹಿನ್ನೆಲೆಯ ಸಿನಿಮಾವೊಂದು ಕೈ ಬಿಟ್ಟ ಬಗ್ಗೆ ಹೇಳಿದರು. 

ಜರ್ನಿ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾವೊಂದನ್ನು ಮಾಡಬೇಕೆಂಬ ಆಸೆ ನೀನಾಸಂ ಸತೀಶ್‌ಗೆ ಆಯಿತಂತೆ. ಅದರಂತೆ ಕಥೆ ರೆಡಿ ಮಾಡಿ ಎಂದು ತಮ್ಮ ತಂಡಕ್ಕೆ ಹೇಳಿದರಂತೆ. ಆಗ ತಂಡದ ಸದಸ್ಯರು, “ಈಗಾಗಲೇ ಜರ್ನಿ ಬ್ಯಾಕ್‌ಡ್ರಾಪ್‌ನಲ್ಲಿ “ಲೈಫ್ 360′ ಎಂಬ ಸಿನಿಮಾ ಬರುತ್ತಿದೆ’ ಎಂದರಂತೆ. ಅರ್ಜುನ್‌ರನ್ನು ಕರೆಸಿ ಸತೀಶ್‌ ಕಥೆ ಬಗ್ಗೆ ಕೇಳಿದಾಗ ತಾವು ಮಾಡಲು ಅಂದುಕೊಂಡ ಸಬೆjಕ್ಟ್ಗೆ ಸಾಮ್ಯತೆ ಇತ್ತಂತೆ. ಹಾಗಾಗಿ, ಬೇಡ ಎಂದು ತಾನು ಜರ್ನಿ ಸಬೆjಕ್ಟ್ ಕೈ ಬಿಟ್ಟೆ ಎನ್ನುತ್ತಾ ಅರ್ಜುನ್‌ ಮತ್ತು ತಮ್ಮ ನಡುವಿನ ಪರಿಚಯದ ಬಗ್ಗೆ ಹೇಳಿ ಚಿತ್ರತಂಡಕ್ಕೆ ಶುಭ ಕೋರಿದರು ಸತೀಶ್‌.

ಕಾಲೇಜು ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನಿಟ್ಟುಕೊಂಡು ಅರ್ಜುನ್‌ “ಲೈಫ್ 360′ ಸಿನಿಮಾವನ್ನು ಮಾಡಿದ್ದಾರಂತೆ. “ನಾನು ಕಾಲೇಜು ದಿನಗಳಲ್ಲಿ ನನಗೆ ತೋಚಿದ್ದನ್ನು ಬರೆಯುತ್ತಿದೆ. ಅವೆಲ್ಲವನ್ನು ಸೇರಿಸಿ, ನನ್ನ ಸ್ನೇಹಿತರ ಸಹಾಯದಿಂದ ಸ್ಕ್ರಿಪ್ಟ್ ಮಾಡಿ ಈಗ ಸಿನಿಮಾ ಆಗಿದೆ. ಚಿತ್ರದಲ್ಲಿ ಟೀನೇಜ್‌ ಪ್ರೀತಿಯಿಂದ ಹಿಡಿದು ಜೀವನದ ಪಾಠ ಕೂಡಾ ಇದೆ’ ಎಂಬುದು ಅರ್ಜುನ್‌ ಮಾತು. ಮೊದಲೇ ಹೇಳಿದಂತೆ ಇದೊಂದು ಜರ್ನಿ ಸ್ಟೋರಿ. ನಾಯಕ ಊರು ಸುತ್ತುತ್ತಲೇ ಜೀವನ ಪಾಠ ಕಲಿಯುತ್ತಾನಂತೆ. 22 ಜಿಲ್ಲೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಅನುಷಾ ಹಾಗೂ ಪಾಯಲ್‌ ನಾಯಕಿಯರಾಗಿ ನಟಿಸಿದ್ದಾರೆ. 

ಅನುಷಾ ಮಾತನಾಡಿ, “ಅರ್ಜುನ್‌ಗೆ ಸಿನಿಮಾ ಮೇಲೆ ತುಂಬಾ ಆಸಕ್ತಿ. ಸುಮಾರು ಎರಡು ವರ್ಷಗಳಿಂದಲೂ “ನೆವರ್‌ ಗೀವ್‌ ಅಪ್‌’ ಎಂಬ ಅವರ ವಾಟ್ಸಾಪ್‌ ಬದಲಾಗಿಲ್ಲ. ನಾನು ಒಪ್ಪಿಕೊಂಡ ಮೊದಲ ಸಿನಿಮಾವಿದು’ ಎಂದರು. ಮತ್ತೂಬ್ಬ ನಾಯಕಿ ಪಾಯಲ್‌ಗೆ ಆರಂಭದಲ್ಲಿ ಇದೊಂದು ಕಿರುಚಿತ್ರ ಮತ್ತು ಹೆಚ್ಚು ಪ್ರಚಾರ ಪಡೆಯದೇ ಹೋಗುವ ಚಿತ್ರವೆಂದು ಭಾವಿಸಿಕೊಂಡಿದ್ದರಂತೆ. ಆದರೆ, ಈಗ ಚಿತ್ರ ಚೆನ್ನಾಗಿ ಮೂಡಿಬಂದ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಯಿಂದ ಖುಷಿಯಾಗಿದ್ದಾರಂತೆ. ರಾಜಶೇಖರ್‌ ಈ ಸಿನಿಮಾದ ನಿರ್ಮಾಪಕರು.

ಚಿತ್ರಕ್ಕೆ ಮಹಾಂತ ನೀಲ್‌, ಪ್ರಜ್ವಲ್‌ ಪೈ ಹಾಗೂ ಆಕಾಶ್‌ ಶಿವಕುಮಾರ್‌ ಸಂಗೀತ ನೀಡಿದ್ದಾರೆ. ನಟ-ನಿರ್ದೇಶಕ ಅರ್ಜುನ್‌ ಸ್ಪಷ್ಟ ಕನ್ನಡದಲ್ಲಿ ತುಂಬಾ ಸುಂದರವಾದ ಸಾಹಿತ್ಯ ಬರೆದಿದ್ದು, ಒಳ್ಳೆಯ ಟ್ಯೂನ್‌ ಹಾಕಲು ಸಹಾಯವಾಯಿತು ಎನ್ನುವುದು ಸಂಗೀತ ನಿರ್ದೇಶಕರ ಮಾತು. ಚಿತ್ರಕ್ಕೆ ಅನಿಲ್‌ ಛಾಯಾಗ್ರಹಣವಿದೆ. ಜಂಗ್ಲಿ ಮ್ಯೂಸಿಕ್‌ ಮೂಲಕ ಆಡಿಯೋ ಹೊರಬಂದಿದೆ. 

ಟಾಪ್ ನ್ಯೂಸ್

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.