ಬಾಲ್ಯವಿವಾಹದ ಸುತ್ತ ಭಾಗ್ಯಶ್ರೀ
ಪಿಡುಗು ನಿರ್ಮೂಲನೆಯೇ ಸಿನಿಮಾ ಗುರಿ...
Team Udayavani, Aug 16, 2019, 5:35 AM IST
ಬಾಲ್ಯ ವಿವಾಹದ ವಿರುದ್ಧ ಹೋರಾಡುವ, ಆ ಪಿಡುಗನ್ನು ಸಮಾಜದಿಂದ ಹೋಗಲಾಡಿಸಲು ಶ್ರಮಿಸುವ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಎಲ್ಲಾ ಸಿನಿಮಾಗಳ ಗುರಿ ಒಂದೇ, ಅದು ಬಾಲ್ಯ ವಿವಾಹ ನಿರ್ಮೂಲನೆ. ಈಗ ಅದೇ ಗುರಿಯೊಂದಿಗೆ ಮತ್ತೂಂದು ಸಿನಿಮಾ ತಯಾರಾಗಿದೆ. ಅದು ‘ಭಾಗ್ಯಶ್ರೀ’. ಬಾಗಲಕೋಟೆಯ ಆಶಾ ಶಾಹೀರ್ ಬಿಳಗಿ ಹಾಗೂ ಶಾಹೀರ ಬಿಳಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಸ್.ಮಲ್ಲೇಶ್ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಬೇಬಿ ಹೀರಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ನಿರ್ದೇಶಕ ಮಲ್ಲೇಶ್ ಅವರಿಗೆ ಇದು ಚೊಚ್ಚಲ ಚಿತ್ರ. ಈ ಹಿಂದೆ ಹಲವು ಸಿನಿಮಾಗಳ ವಿತರಣೆ ಸೇರಿದಂತೆ ಸಿನಿಮಾದ ನಾನಾ ವಿಭಾಗಗಳಲ್ಲಿ ಅನುಭವ ಪಡೆದ ಮಲ್ಲೇಶ್ ಈಗ ಆ ಎಲ್ಲಾ ಅನುಭದೊಂದಿಗೆ ‘ಭಾಗ್ಯಶ್ರೀ’ ಎಂಬ ಚಿತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಆಶಾ ಬಿಳಗಿ, ‘ಬಾಲ್ಯವಿವಾಹ ಎಂಬುದು ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಸರ್ಕಾರ ಅದರ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಇವತ್ತಿಗೂ ಅಲ್ಲಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುತ್ತವೆ. ಈ ವಿಚಾರವನ್ನಿಟ್ಟುಕೊಂಡೇ ‘ಭಾಗ್ಯಶ್ರೀ’ ಚಿತ್ರ ಮಾಡಲಾಗಿದೆ’ ಎಂದರು. ಬೇಬಿ ಹೀರಾ ಕೂಡಾ ಚಿತ್ರೀಕರಣದ ಅನುಭವ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಹಿರಿಯ ಸಾಹಿತಿ ಪ್ರೊ.ದೊಡ್ಡರಂಗೇಗೌಡರು ಆಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ಎರಡು ಹಾಡುಗಳನ್ನು ಬರೆಯುವ ಜೊತೆಗೆ ಚಿತ್ರತಂಡಕ್ಕೆ ಒಂದಷ್ಟು ಸಲಹೆಗಳನ್ನು ಕೂಡಾ ನೀಡಿದ್ದಾರಂತೆ. ಅದರಂತೆ ನಿರ್ದೇಶಕರು ಸಮಾಜಕ್ಕೊಂದು ಸಂದೇಶವಿರುವ ಸಿನಿಮಾ ಮಾಡಿದ್ದಾರೆ ಎಂದರು. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ಸಂಜೀವ್ ರೆಡ್ಡಿ ಸಂಕಲನವಿದೆ. ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು