ಬೆಲ್‌ ಬಾಟಮ್‌ ಅರ್ಧಶತಕ : ಸಂಭ್ರಮದಲ್ಲಿ ಚಿತ್ರತಂಡ


Team Udayavani, Apr 12, 2019, 6:00 AM IST

Suchi-Bel-Bottom

ರಿಷಭ್‌ ಶೆಟ್ಟಿ ಅಭಿನಯದ “ಬೆಲ್‌ ಬಾಟಮ್‌’ ಅಂತೂ ಅರ್ಧ ಸೆಂಚುರಿ ಬಾರಿಸಿದೆ. ಹಾಗಾಗಿ ಚಿತ್ರ ತಂಡದ ಖುಷಿಗಂತೂ ಪಾರವೇ ಇಲ್ಲ. ಈಗಿನ ದಿನಮಾನದಲ್ಲಿ ಚಿತ್ರ ಗಳಿಕೆ ಆಗುವುದೇ ದೊಡ್ಡ ಸುದ್ದಿ. ಅದರಲ್ಲೂ ಐವತ್ತು ದಿನ ಪೂರೈಸುವುದು ಅಂದರೆ ನಿಜಕ್ಕೂ ಅದು ಗೆಲುವೇ ಅಂದುಕೊಳ್ಳಬೇಕು. ಈ ಸಂಭ್ರಮ ಹಂಚಿಕೊಳ್ಳಲೆಂದೇ ನಿರ್ದೇಶಕ ಜಯತೀರ್ಥ ತಮ್ಮ ಚಿತ್ರತಂಡವನ್ನು ಮಾಧ್ಯಮ ಮುಂದೆ ಕರೆತಂದಿದ್ದರು. ಚಿತ್ರದ ಯಶಸ್ಸು ಕುರಿತು ಒಬ್ಬೊಬ್ಬರೇ ಮಾತನಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡಿರುವ ರಿಷಭ್‌ ಶೆಟ್ಟಿ ಅವರಿಗಂತೂ ಈ ಗೆಲುವು ಮತ್ತೂಂದು ಹೊಸ ಹುಮ್ಮಸ್ಸು ತಂದುಕೊಟ್ಟಿದೆಯಂತೆ. ಅವರೇ ಹೇಳುವಂತೆ, ಇದು ಇಡೀ ತಂಡದ ಗೆಲುವು. ಚಿತ್ರತಂಡದ ಪ್ರತಿಯೊಬ್ಬರ ಶ್ರಮದಿಂದಾಗಿ ಈ ಯಶಸ್ಸು ಸಿಕ್ಕಿದೆ. ಈಗಾಗಲೇ ಚಿತ್ರದ ಎರಡನೇ ಭಾಗ ಕುರಿತು ತಯಾರಿ ನಡೆಸುತ್ತಿದ್ದೇವೆ. ಚಿತ್ರಕ್ಕೆ ಆರಂಭದಿಂದಲೂ ಮೆಚ್ಚುಗೆ ಸಿಕ್ಕಿತ್ತು. ಹಿಂದಿ ಮತ್ತು ತಮಿಳು ಭಾಷೆಗೆ ರಿಮೇಕ್‌ ಹಕ್ಕು ಮಾರಾಟವಾಗಿರುವುದು ಮತ್ತೂಂದು ಖುಷಿಗೆ ಕಾರಣವಾಗಿದೆ. ಇಂತಹ ಗೆಲುವಿಗೆ ಮಾಧ್ಯಮದ ಸಹಕಾರ, ಪ್ರೋತ್ಸಾಹವೂ ಕಾರಣ’ ಎನ್ನಲು ಮರೆಯಲಿಲ್ಲ ರಿಷಭ್‌ ಶೆಟ್ಟಿ.

ನಿರ್ದೇಶಕ ಜಯತೀರ್ಥ ಅವರಿಗೆ “ಬೆಲ್‌ ಬಾಟಮ್‌’ ಯಶಸ್ಸು ಮತ್ತಷ್ಟು ಧೈರ್ಯ ಕೊಟ್ಟಿದೆಯಂತೆ. ಎಲ್ಲರ ಪ್ರೋತ್ಸಾಹ, ಸಹಕಾರದಿಂದ ಚಿತ್ರ ಗೆಲುವು ಸಾಧಿಸಿ, 50 ದಿನಗಳನ್ನು ಪೂರೈಸಿದೆ. ಹೆಚ್ಚಿನದ್ದಾಗಿ ಮಾಧ್ಯಮಗಳು ಕೊಟ್ಟ ಸಹಕಾರ ಈ ಗೆಲುವಿಗೆ ಕಾರಣವಾಗಿದೆ’ ಎಂಬುದು ಅವರ ಮಾತು.

ಹರಿಪ್ರಿಯಾ ಅವರಿಗೆ ಚಿತ್ರ ಗೆಲುವು ಕೊಟ್ಟ ಖುಷಿ. ಚಿತ್ರತಂಡದ ಶ್ರಮಕ್ಕೆ ಸಿಕ್ಕ ಪ್ರತಿಫ‌ಲ ಇದು ಎಂಬುದು ಅವರ ಮಾತು. ಉಳಿದಂತೆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ತಮ್ಮ ಅನುಭವ ಹಂಚಿಕೊಂಡು, “ಬೆಲ್‌ ಬಾಟಮ್‌’ ಮೂಲಕ ಇನ್ನಷ್ಟು ಉತ್ಸಾಹ ಹೆಚ್ಚಿದೆ ಎನ್ನುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾದರು. ಉಳಿದಂತೆ ಟಿ.ಕೆ.ದಯಾನಂದ್‌, ರಘು ನಿಡುವಳ್ಳಿ, ಪ್ರಮೋದ್‌ ಶೆಟ್ಟಿ, ನಿರ್ಮಾಪಕ ಸಂತೋಷ್‌ ಸೇರಿದಂತೆ ಚಿತ್ರತಂಡ ತಮ್ಮ ಖುಷಿಯನ್ನು ಹಂಚಿಕೊಂಡಿತು.

ಟಾಪ್ ನ್ಯೂಸ್

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.