ಬೆಟ್ಟಿಂಗ್‌ ಸ್ಟೋರಿ: ಐಫೋನ್‌ನಲ್ಲಿ ಕಮರ್ಷಿಯಲ್‌ ಸಿನಿಮಾ


Team Udayavani, Dec 21, 2018, 6:00 AM IST

72.jpg

ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆವುಳ್ಳ ಚಿತ್ರಗಳು ಬಂದಿರುವುದು, ಬರುತ್ತಿರುವುದು ಗೊತ್ತೇ ಇದೆ. ಈಗ ಆ ಸಾಲಿಗೆ “ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಚಿತ್ರಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಒಂದಷ್ಟು ಚಿತ್ರೀಕರಣವೂ ಆಗಿದೆ. ವಿಶೇಷವೆಂದರೆ, ಈ ಚಿತ್ರ ಸಂಪೂರ್ಣ ಐಫೋನ್‌ನಲ್ಲೇ ಚಿತ್ರೀಕರಣಗೊಂಡಿದೆ. ಹಾಗಂತ, ಕಲಾತ್ಮಕ ಚಿತ್ರವಂತೂ ಅಲ್ಲ, ಪಕ್ಕಾ ಕಮರ್ಷಿಯಲ್‌ ಅಂಶಗಳನ್ನಿಟ್ಟುಕೊಂಡು ಹೊಸದೊಂದು ಪ್ರಯೋಗಕ್ಕಿಳಿದಿದೆ ಚಿತ್ರತಂಡ. ಇತ್ತೀಚೆಗೆ ಚಿತ್ರದ ಸಣ್ಣ ಹಾಡಿನ ಝಲಕ್‌ ತೋರಿಸುವ ಮೂಲಕ ಮಾತುಕತೆ ನಡೆಸಿತು ಚಿತ್ರತಂಡ.

ಈ ಚಿತ್ರಕ್ಕೆ ರವಿ ಸುಬ್ಬುರಾವ್‌ ನಿರ್ದೇಶಕರು. ಅಷ್ಟೇ ಅಲ್ಲ, ನಾಯಕ ಕೂಡ ಆಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತಿಗಿಳಿದ ಅವರು, “ಇದು ಬೆಂಗಳೂರು ನಗರಕ್ಕೆ ಸಂಬಂಧಿಸಿದ ಕಥೆಯಲ್ಲ. ಎಲ್ಲೆಡೆ ಸಲ್ಲುವ ಕಥೆ. ಒಂದು ಗ್ಯಾಂಬಲಿಂಗ್‌ ಕುರಿತಾದ ಕಥೆ ಹೇಳಹೊರಟಿದ್ದೇನೆ. ಅದರಲ್ಲೂ ಕ್ರಿಕೆಟ್‌ ಬೆಟ್ಟಿಂಗ್‌ ಮೇಲೆ ಸಾಗುವ ಕಥೆ ಒಳಗೊಂಡಿದೆ. ಸಂಪೂರ್ಣ ರಾ ಫೀಲ್‌ ಜೊತೆಗೆ ಸಿನಿಮಾ ಮೂಡಿಬರಲಿದೆ. ಇಲ್ಲಿ ಕಥೆಯ ಜೊತೆಗೆ ತಾಂತ್ರಿಕವಾಗಿಯೂ ಹೊಸದೇನಾದರೂ ಮಾಡಬೇಕು ಎಂಬ ಉದ್ದೇಶದಿಂದ ಐಫೋನ್‌ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೇವೆ. ಅದೊಂದು ಚಾಲೆಂಜ್‌ ಆಗಿತ್ತು. ಮೊದಲು ಟೆಸ್ಟ್‌ ಮಾಡಿ, ಆ ನಂತರ ಚಿತ್ರೀಕರಣಕ್ಕೆ ಅಣಿಯಾಗಿದ್ದೇವೆ. ಇಷ್ಟರಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿರುವುದಾಗಿ ಹೇಳಿಕೊಂಡರು ರವಿ ಸುಬ್ಬರಾವ್‌.

ಛಾಯಾಗ್ರಾಹಕ ಪ್ರಮೋದ್‌ ಅವರಿಗೆ ನಿರ್ದೇಶಕ ರವಿ ಸುಬ್ಬುರಾವ್‌ ಕಥೆ ಹೇಳಿದಾಗ, ಖುಷಿಗೊಂಡರಂತೆ. ಆದರೆ, ಐಫೋನ್‌ನಲ್ಲಿ ಈ ಚಿತ್ರವನ್ನು ಚಿತ್ರೀಕರಿಸಬೇಕು ಅಂದಾಗ, ಕಿರುಚಿತ್ರ ಮಾಡುತ್ತಿದ್ದೀರಾ ಅಥವಾ ಚಿತ್ರ ಮಾಡುತ್ತಿದ್ದೀರಾ ಅಂತ ಪ್ರಶ್ನಿಸಿದ ಪ್ರಮೋದ್‌ಗೆ, ಇದು ಹಂಡ್ರೆಡ್‌ ಪರ್ಸೆಂಟ್‌ ಕಮರ್ಷಿಯಲ್‌ ಚಿತ್ರ ಅಂದರಂತೆ. “ಚಾಲೆಂಜ್‌ ಆಗಿ ತೆಗೆದುಕೊಂಡು ಐದಾರು ತಿಂಗಳು ರಿಹರ್ಸಲ್‌ ನಡೆಸಿ, ಕೆಲವೆಡೆ ಚಿತ್ರೀಕರಣ ಮಾಡಿ, ಐದು ನಿಮಿಷದ ಔಟ್‌ಪುಟ್‌ ನೋಡಿದ ಮೇಲೆ ಚಿತ್ರ ಮಾಡುವ ನಿರ್ಧಾರಕ್ಕೆ ಬಂದೆವು. ಸಿನಿಮಾ ನೋಡಿದವರಿಗೆ ಎಲ್ಲೂ ಇದು ಐಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ ಅಂತ ಗೊತ್ತಾಗುವುದಿಲ್ಲ. ಅಷ್ಟೊಂದು ಕ್ಲಿಯರ್‌ ಆಗಿ ಮೂಡಿಬಂದಿದೆ’ ಎಂದರು ಪ್ರಮೋದ್‌.

ನಿರ್ಮಾಪಕ ರಿತೇಶ್‌ ಜೋಶಿ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಸಂರಕ್ಷಣೆ’ ಎಂಬ ಚಿತ್ರ ಮಾಡಿದ್ದರಂತೆ. ಈಗ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. “ರವಿ ಮತ್ತು ನಾನು ಐದು ವರ್ಷಗಳಿಂದಲೂ ಒಳ್ಳೆಯ ಸಿನಿಮಾ ಮಾಡಬೇಕು. ಹೊಸತನ ಕೊಡಬೇಕು ಎಂದು ಚರ್ಚಿಸುತ್ತಿದ್ದೆವು. ಹಿಂದೆ ಕೆಜಿಎಫ್ ಹೆಸರಿನ ಡಾಕ್ಯುಮೆಂಟರಿ ಮಾಡೋಕೆ ಚರ್ಚೆ ಮಾಡಿ, ಎಲ್ಲವೂ ತಯಾರಿ ನಡೆಸಿದ್ದೆವು. ಕಾರಣಾಂತರದಿಂದ ಆಗಲಿಲ್ಲ. ಈಗ ಐಫೋನ್‌ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಈವರೆಗೆ ಎಲ್ಲೂ ಕಾಂಪ್ರಮೈಸ್‌ ಮಾಡಿಕೊಳ್ಳದೆ ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂಬ ವಿವರ ಕೊಟ್ಟರು ರಿತೇಶ್‌ ಜೋಶಿ.

ಚಿತ್ರದಲ್ಲಿ ದಿಶಾ ಕೃಷ್ಣಯ್ಯ ನಾಯಕಿ. ಅವರಿಲ್ಲಿ ಕಾರ್ಪೋರೇಟ್‌ ಫೀಲ್ಡ್‌ನಲ್ಲಿ ಕೆಲಸ ಮಾಡುವ ಹುಡುಗಿ ಪಾತ್ರ ಮಾಡಿದ್ದಾರಂತೆ. ಇದೊಂದು ನೈಜತೆಗೆ ಹತ್ತಿರವಾಗಿರುವ ಚಿತ್ರ ಎಂದು ಹೇಳಿಕೊಂಡರು ಅವರು. ಇನ್ನು, ಅನಿಲ್‌ ಚಿತ್ರಕ್ಕೆ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಎಲ್ಲಾ ಹೊಸ ಗಾಯಕರೇ ಹಾಡಿದ್ದಾರಂತೆ. ಶ್ರೀಲಂಕಾ ಭಾಷೆ ಕೂಡ ಇಲ್ಲಿ ಮಿಕ್ಸ್‌ ಆಗಿದೆ ಎಂದು ವಿವರ ಕೊಡುತ್ತಾರೆ ಅನಿಲ್‌. ಸುರೇಶ್‌ ಶೆಟ್ಟಿ, ಸೋನಾಲಿಶ ಇತರರು ಮಾತನಾಡಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.