ಯಶ್ ಶೆಟ್ಟಿ ಕಣ್ಣಲ್ಲಿ ಸಲಗ ಕನಸು
ಕರಾವಳಿ ಹುಡುಗ ಫುಲ್ ಬಿಝಿ
Team Udayavani, Mar 13, 2020, 5:30 AM IST
“ಜ್ವಲಂತಂ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಕರಾವಳಿ ಹುಡುಗ ಯಶ್ ಶೆಟ್ಟಿ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. “ಸೂಜಿದಾರ’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಅವರೀಗ ಮತ್ತೂಂದು ಸಿನಿಮಾ “ಕಾಲಾಂತಕ’ ಚಿತ್ರದಲ್ಲೂ ಲೀಡ್ ಪಾತ್ರ ಮಾಡಿದ್ದಾರೆ. ಅಂಬರೀಶ್ ನಿರ್ದೇಶನದ “ಕಾಲಾಂತಕ’ ವಿಶೇಷ ಕಥೆ ಹೊಂದಿದ್ದು, ಅದೊಂದು ವಿಭಿನ್ನ ಪಾತ್ರ ಇರುವಂತಹ ಚಿತ್ರ. ಇದೀಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿರುವ ಸಿನಿಮಾ ಮೇಲೆ ಯಶ್ ಶೆಟ್ಟಿಗೆ ಸಾಕಷ್ಟು ಭರವಸೆ ಇದೆ. ಇನ್ನು, “ದುನಿಯಾ’ ವಿಜಯ್ ನಿರ್ದೇಶನದ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಸಲಗ’ ಸಿನಿಮಾ ಕೂಡ ನನಗೊಂದು ಹೊಸ ಇಮೇಜ್ ತಂದುಕೊಡಲಿದೆ ಎಂಬ ನಂಬಿಕೆ ಅವರದು. ಆ ಬಗ್ಗೆ ಹೇಳುವ ಯಶ್ ಶೆಟ್ಟಿ, “ನಾನು “ದುನಿಯಾ’ ವಿಜಯ್ ಅವರ “ಕುಸ್ತಿ’ ಚಿತ್ರ ಮಾಡಬೇಕಿತ್ತು. ಕೆಲ ಕಾರಣಗಳಿಂದ ಅದು ಸೆಟ್ಟೇರಲಿಲ್ಲ. ಆ ನಂತರ “ಸಲಗ’ ಸಿನಿಮಾಗೆ ವಿಜಯ್ ಅವರು ಕರೆದು ಅವಕಾಶ ಕೊಟ್ಟರು. ನನ್ನ “ಅಥರ್ವ’ ಚಿತ್ರದ ಟ್ರೇಲರ್ ನೋಡಿ “ಸಲಗ’ದಲ್ಲಿ ಸ್ಟ್ರಾಂಗ್ ಪಾತ್ರ ಕೊಟ್ಟಿದ್ದಾರೆ. ಅದೊಂದು ನೆಗೆಟಿವ್ ರೋಲ್. ಸ್ಲಂ ಶೆಟ್ಟಿ ಎಂಬ ಪಾತ್ರ ಇಡೀ ಚಿತ್ರದ ಹೈಲೈಟ್ ಎನ್ನಬಹುದು. ಹೈಪರ್ ಎನಿಸುವ, ತುಂಬಾನೇ ರಗಡ್ ಆಗಿರುವ ನೈಜತೆ ತುಂಬಿರುವ ಪಾತ್ರ. ನಾನು ಈವರೆಗೆ ಮಾಡದಿರುವ ಹೊಸ ಡಿಸೈನ್ ಹೊಂದಿರುವ ಪಾತ್ರವದು. ಚಿತ್ರದಲ್ಲಿ ಸದಾ ಲುಂಗಿ, ಪೈಜಾಮ ಧರಿಸಿ, ವಿಶೇಷ ಮ್ಯಾನರಿಸಂ ತೋರಿಸುವ ಪಾತ್ರ. “ಸಲಗ’ದ ನಟನೆ ವಿಷಯದಲ್ಲಿ ಎಜುಕೇಷನ್ ಪಡೆದಂತಹ ಅನುಭವ ಆಗಿದೆ. ನನ್ನ ಕೆರಿಯರ್ಗೆ “ಸಲಗ’ ದೊಡ್ಡ ಮೆಟ್ಟಿಲು’ ಎಂಬುದು ಯಶ್ ಶೆಟ್ಟಿ ಮಾತು.
ಉಳಿದಂತೆ ಯಶ್ ಶೆಟ್ಟಿ, ಅನಂತ್ ಶೈನ್ ನಿರ್ದೇಶನದ “ವಿರಾಟ ಪರ್ವ’ದಲ್ಲಿ ನಟಿಸುತ್ತಿದ್ದು, ಎರಡು ಶೇಡ್ ಪಾತ್ರ ಮಾಡಿದ್ದಾರಂತೆ. ಅದೂ ಕೂಡ ಚಾಲೆಂಜಿಂಗ್ ಪಾತ್ರ ಎನ್ನುವ ಅವರು, “ಜೋಗಿ’ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರದಲ್ಲೂ ನೆಗೆಟಿವ್ ಲೀಡ್ ಪಾತ್ರ ಮಾಡಿದ್ದಾರೆ. ಉಳಿದಂತೆ “ಕೆಜಿಎಫ್-2′ ಚಿತ್ರದಲ್ಲಿ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ “ಕೃಷ್ಣ ಟಾಕೀಸ್’,”ಕಿರಾತಕ-2′, “ಧರಣಿ ಮಂಡಲ ಮಧ್ಯದೊಳಗೆ’, ದಿಗಂತ್ ಜೊತೆ “ಮಾರಿಗೋಲ್ಡ್’, “ಅಮರ ಪ್ರೇಮ ಕಥಾ’ ಸೇರಿದಂತೆ ಹೊಸಬರ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬರೀ ನೆಗೆಟಿವ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಅವರು, “ನಾನೊಬ್ಬ ಕಲಾವಿದ ಆಗಬೇಕು ಅಂತ ಬಂದವನು. ನೆಗೆಟಿವ್ ಪಾತ್ರ ನನಗಿಷ್ಟ. ಅದನ್ನು ಬಿಡೋದಿಲ್ಲ. ಎಂಜಾಯ್ ಮಾಡಿಕೊಂಡು ಮಾಡ್ತೀನಿ. ಹೀರೋ ಆದಾಗ, ಹೀರೋನೇ ಆಗಿರಬೇಕು. ವಿಲನ್ ಆಗಿಬಿಟ್ಟರೆ, ಎಲ್ಲರ ಜೊತೆಗೂ, ಎಲ್ಲಾ ಸಿನಿಮಾಗಳಲ್ಲೂ ನಟಿಸಬಹುದು’ ಎಂಬುದು ಅವರ ಮಾತು. ಈ ವರ್ಷ ದೊಡ್ಡ ಸ್ಟಾರ್ ಚಿತ್ರಗಳಲ್ಲೂ ಯಶ್ ಶೆಟ್ಟಿ ನಟಿಸುತ್ತಿರುವ ಅವರು, “ಸಲಗ’ ನನ್ನ ಲೈಫ್ಗೊಂದು ಹೊಸ ನಿರೀಕ್ಷೆ ಹುಟ್ಟಿಸಿರುವ ಚಿತ್ರ’ ಎನ್ನುತ್ತಾರೆ ಯಶ್ ಶೆಟ್ಟಿ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ