ಪರಿವರ್ತನೆ ಗೀತೆಗೆ ಬಂತು ಸೂಕ್ತ ಕಾಲ


Team Udayavani, Jul 10, 2020, 4:44 AM IST

parivartane

“ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದ ಬಾಕಿ ಇದೆ….ʼ ನಟ ದಿಗಂತ್‌ ಅಭಿನಯದ ಪರಪಂಚ ಚಿತ್ರದ ಗೀತೆ ಇದೆ, ಬಹುಶಃ ಈ ಹಾಡನ್ನು ಕೇಳದವರಿಲ್ಲ. ಅಷ್ಟರ ಮಟ್ಟಿಗೆ ಹಿಟ್‌ ಎನಿಸಿಕೊಂಡಿರುವ ಗೀತೆ ಇದು. ಹೌದು ನಿರ್ದೇಶಕ, ಸಾಹಿತಿ ಯೋಗರಾಜ್‌ ಭಟ್‌ ಬರೆದ ಗೀತೆ ಇದು. ವೀರ್‌ಸಮರ್ಥ್‌ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಕ್ರಿಶ್‌ಜೋಶಿ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಸರಿ, ಈಗ ಯಾಕೆ ಈ ಹಾಡಿನ ಕುರಿತ ಟಿಪ್ಪಣಿ ಎಂಬ ಪ್ರಶ್ನೆ ಬರಬಹುದು

. ಸದ್ಯಕ್ಕೆ ಈಗಿರುವ ಪರಿಸ್ಥಿತಿಗೆ ಈ ಹಾಡು ಹೊಂದಿಕೊಂಡಿದೆ ಎಂಬುದು ಎಲ್ಲರ ಅಭಿಪ್ರಾಯ. ಅಷ್ಟೇ ಅಲ್ಲ ಸ್ವತಃ ಯೋಗರಾಜ್‌ ಭಟ್‌ ಅವರೇ ಈ ಹಾಡು ಈಗ ಹೆಚ್ಚು ಪ್ರಸ್ತುತ ಎಂದು ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಮೊದ ಮೊದಲು ಈ ಹಾಡು ಬರೆದಾಗ, ಎಲ್ಲೂ ರೀಚ್‌ ಆಗಿರಲಿಲ್ಲ. ಆ ಬಳಿಕ ಒಳ್ಳೆಯ ಹಾಡು ಯಾಕೆ ರೀಚ್‌ ಆಗಲಿಲ್ಲ ಎಂದು ತಲೆಕೆಡಿಸಿಕೊಂಡ ಯೋಗರಾಜ್‌ಭಟ್‌, ಹುಚ್ಚ ವೆಂಕಟ್‌ ಅವರ ಬಳಿ ಈ ಹಾಡು ಹಾಡಿಸಿದರೆ ಹೇಗೆ? ಎಂಬ  ಐಡಿಯಾ ಬಂದಿದ್ದೇ ತಡ, ಆ ಹಾಡನ್ನು ಪುನಃ ಹುಚ್ಚ ವೆಂಕಟ್‌ ಅವರ ಕಡೆಯಿಂದ ಹಾಡಿಸಿಬಿಟ್ಟರು.

ಯಾವಾಗ ಹುಚ್ಚ ವೆಂಕಟ್‌ ಧ್ವನಿಯಲ್ಲಿ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ.. ಹಾಡು ಹೊರಬಂತೋ, ಎಲ್ಲೆಡೆ ಜೋರು ಸುದ್ದಿ  ಯಾಯ್ತು. ವಿಶೇಷ ವೆಂದರೆ, ಈ ಹಾಡು ಕೇಳಿದ ಅದೆಷ್ಟೋ ಕನ್ನಡಿಗರು ವಿದೇಶಗಳಿಂದ ಇತ್ತ ಬರಬೇಕು ಎಂಬ ಇಂಗಿತ ವ್ಯಕ್ತಪಡಿಸಿ ದರು. ಒಂದಷ್ಟು ಸಾಫ್ಟ್ ವೇರ್‌ ಮಂದಿ ಕೂಡ ಬೆಂಗಳೂರು ಬಿಟ್ಟು, ತಮ್ಮ ಊರಿನತ್ತ ದಾರಿ ಹಿಡಿದರು. ಈ ಹಾಡಲ್ಲಿ ಅಷ್ಟೊಂದು ಅದ್ಭುತ ತಾತ್ಪರ್ಯವಿದೆ.  ಅರ್ಥಪೂರ್ಣ ಸಾಹಿತ್ಯವಿದೆ. ಇಡೀ ನಮ್ಮ ಊರಿನ ನಮ್ಮವರ, ನಮ್ಮ ಗೆಳೆಯರ ಪ್ರೀತಿ ಸಂಬಂಧದ ಮೌಲ್ಯಗಳು ತುಂಬಿಕೊಂಡಿವೆ.

ಹಾಡು ಕೇಳಿದ ಬಹುತೇಕರು ತಲೆತೂಗಿಸಿದ್ದಲ್ಲದೆ,  ಹಾಡಿನ ಬಗ್ಗೆಯೇ ಹೇಳಿದ್ದು ಮಾತ್ರ ವಿಶೇಷ. ಈಗ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈಗ ಜನರು ಬೆಂಗಳೂರು ಬಿಟ್ಟು ತಮ್ಮೂರಿನ ದಾರಿ ಹಿಡಿಯುತ್ತಿದ್ದಾರೆ. ಹಾಗಾಗಿ ಈ ಹಾಡು ಇಂದಿಗೆ ಪ್ರಸ್ತುತವಾಗಿದೆ ಎಂಬುದು  ಯೋಗರಾಜ್‌ ಭಟ್‌ ಅವರ ಮಾತು. ಅದೇನೆ  ಇರಲಿ, ಯಾವುದೇ ಸಿನಿಮಾ ಇರಲಿ, ಅದರಲ್ಲಿ ಕೆಲ ಹಾಡುಗಳು ಪರಿವರ್ತನೆಗೆ ಕಾರಣವಾಗುತ್ತವೆ. ಅಂತಹ ಪರಿವರ್ತನೆಗೆ ಈ ಹಾಡು ಕೂಡ ಈಗ ಕಾರಣವಾಗಿದೆ ಎಂಬುದಷ್ಟೇ ಈಗಿನ ಸತ್ಯ.

*‌ ವಿಜಯ್

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.