ಕ್ರೈಂ – ಕಾಮಿಡಿ ಕುಷ್ಕ ರೆಡಿ

ಆದರೆ ಪೀಸ್‌ ಕೇಳಂಗಿಲ್ಲ...

Team Udayavani, Mar 6, 2020, 4:25 AM IST

ಕ್ರೈಂ – ಕಾಮಿಡಿ ಕುಷ್ಕ ರೆಡಿ

“ಇದೊಂದು ಕೇಪರ್‌ ಕಾಮಿಡಿ…’
– ಹೀಗೆ ಹೇಳಿ ಕನ್ನಡಕವನ್ನೊಮ್ಮೆ ಸರಿಪಡಿಸಿಕೊಂಡರು ನಿರ್ದೇಶಕ ವಿಕ್ರಮ್‌ ಯೋಗಾನಂದ್‌. ಅವರು ಹೇಳಿದ್ದು “ಕುಷ್ಕ’ ಸಿನಿಮಾ ಬಗ್ಗೆ. ಇದು ಅವರ ಎರಡನೇ ಚಿತ್ರ. ಹಿಂದೆ “ಹೀಗೊಂದು ದಿನ’ ಮಾಡಿದ್ದರು. ಈಗ “ಕುಷ್ಕ’ ರುಚಿ ಉಣಬಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಾ.13 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಮ್ಮ ಸಿನಿಮಾ ಕುರಿತು ಒಂದಷ್ಟು ಹೇಳಲೆಂದೇ ಚಿತ್ರತಂಡದ ಜೊತೆ ಬಂದಿದ್ದರು ನಿರ್ದೇಶಕ ವಿಕ್ರಮ್‌ ಯೋಗಾನಂದ್‌.

ಮೊದಲು ಮಾತಿಗಿಳಿದ ವಿಕ್ರಮ್‌ ಯೋಗಾನಂದ್‌ ಹೇಳುತ್ತಾ ಹೋದರು. “ಕಳೆದ ಒಂದೂವರೆ ವರ್ಷದಿಂದಲೂ ಕಾದು ಈಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದೇವೆ. ಐರಾ ಫಿಲಂಸ್‌ ಚಿತ್ರವನ್ನು ವಿತರಣೆ ಮಾಡುತ್ತಿದೆ. “ಕುಷ್ಕ’ ಕುರಿತು ಹೇಳ್ಳೋದಾದರೆ, ಇದೊಂದು ಕ್ರೈಮ್‌ ಕಾಮಿಡಿ ಸಿನಿಮಾ. ಇಲ್ಲಿರುವ ಪ್ರತಿ ಪಾತ್ರಗಳೂ ಕ್ರೈಮ್‌ ಮಾಡಿದಾಗ, ಏನೆಲ್ಲಾ ಅನಾಹುತ ಆಗುತ್ತೆ ಎಂಬುದು ಕಥೆ. ಇಲ್ಲಿ ರೆಗ್ಯುಲರ್‌ ಫಾರ್ಮುಲಾ ಬಿಟ್ಟು ಹೊಸ ಪ್ರಯತ್ನ ಮಾಡಿದ್ದೇವೆ. ವಜ್ರದ ಹಿಂದೆ ಬೀಳುವ ವ್ಯಕ್ತಿಗಳ ಕಥೆ ಇಲ್ಲಿದೆ. “ಕುಷ್ಕ’ ಶೀರ್ಷಿಕೆಗೆ ಸಿನಿಮಾದಲ್ಲೇ ಉತ್ತರ ಸಿಗಲಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಗುರುಪ್ರಸಾದ್‌ ಆಕರ್ಷಣೆ’ ಎಂದರು ವಿಕ್ರಮ್‌.

ನಿರ್ಮಾಪಕ ಮಧುಗೌಡ ಅವರಿಗೆ ಇದು ಮೊದಲ ಅನುಭವ. ಅವರು ಪ್ರತಾಪ್‌ ರೆಡ್ಡಿ ಜೊತೆ ಸೇರಿ “ಕುಷ್ಕ’ ತಯಾರಿಸಿದ್ದಾರಂತೆ. ಹೊಸ ಬಗೆಯ ಕಥೆ ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡಲಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ, ಮುಂದೆ “ಬಿರಿಯಾನಿ’ ಮಾಡ್ತೀವಿ’ ಅಂದರು ಮಧುಗೌಡ.

ರಾಕ್‌ಲೈನ್‌ ಸುಧಾಕರ್‌ ಅವರಿಲ್ಲಿ ಕುಡುಕನ ಪಾತ್ರ ಮಾಡಿದ್ದಾರಂತೆ. “ನಾಳೆ ಶೂಟಿಂಗ್‌ ಅಂದಾಗ, ಹಿಂದಿನ ದಿನ ನಿರ್ದೇಶಕರು ಕಾಲ್‌ ಮಾಡಿ ಪಾತ್ರದ ಬಗ್ಗೆ ಹೇಳಿದ್ದರು. ಇದೊಂದು ಒಳ್ಳೆಯ ಚಿತ್ರ ಆಗುತ್ತೆ ಎಂಬ ನಂಬಿಕೆ ನನ್ನದು’ ಎಂದರು ಸುಧಾಕರ್‌.

ಸಂಗೀತ ನಿರ್ದೇಶಕ ಅಭಿಮಾನ್‌ ಗುಪ್ತ ಅವರಿಗೆ ಇದು ಎರಡನೇ ಚಿತ್ರ. “ನಿರ್ದೇಶಕ ವಿಕ್ರಮ್‌, ಕೈಲಾಶ್‌ ಇಬ್ಬರು ಗೆಳೆಯರು ಬಂದು ಕಥೆ ಹೇಳಿದಾಗ, ವಿಭಿನ್ನವಾಗಿದೆ ಎನಿಸಿತು. ಹಾಗಾಗಿ, ಇಲ್ಲಿ ಹೊಸ ಸೌಂಡ್‌ ಕೊಡಲು ಪ್ರಯತ್ನಿಸಿದ್ದೇನೆ’ ಎಂಬುದು ಅಭಿಮಾನ್‌ ಗುಪ್ತ ಅವರ ಮಾತು.

ಕೈಲಾಶ್‌ ಅವರು ಹಿಂದೆ ಡಾ.ಪಾಲ್‌ ಎಂಬ ವೆಬ್‌ಸೀರಿಸ್‌ ಮಾಡಿದ್ದರಂತೆ. ಅವರಿಗೆ ಇಲ್ಲಿ ಶೋಭರಾಜ್‌ ಜೊತೆ ಇರುವ ಪಾತ್ರವಾಗಿದ್ದು, ಅವರಿಲ್ಲಿ ರಜಾಕ್‌ ಎಂಬ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ.

ಚಿತ್ರವನ್ನು ವಿತರಣೆ ಮಾಡುತ್ತಿರುವ ನಿಹಾಲ್‌, “ಕುಷ್ಕ’ದ ಟೀಸರ್‌, ಟ್ರೇಲರ್‌ ನೋಡಿ, ಚಿತ್ರದಲ್ಲಿ ವಿಶೇಷತೆ ಇದೆ ಎಂಬ
ಕಾರಣಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.

ಶಂಕರ್‌ ನಾರಾಯಣ್‌, ಜೀವನ್‌, ಅರುಣ್‌ ಇದ್ದರು. ನಾಯಕ ಚಂದನ್‌ ಗೌಡ ಗೈರಾಗಿದ್ದರು. ನಾಯಕಿ ಸಂಜನಾ ಆನಂದ್‌ ತಡವಾಗಿ ಬಂದು ಕ್ಷಮಿಸಿ ಎಂದಷ್ಟೇ ಹೇಳಿ, ತಮ್ಮ ಪಾತ್ರ ಕುರಿತು ಹೇಳಿಕೊಂಡರು.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.