ದೇವ್ರಂಥಾ ಮನುಷ್ಯ ಕೆಂಡದಂಥಾ ಮಾತು


Team Udayavani, Feb 2, 2018, 10:43 AM IST

20-10.jpg

“ಸ್ಕಾನಿಂಗ್‌ ಮಾಡೋವಾಗ ಮಗು ಹೇಗಿದೆ, ಎಷ್ಟು ಬೆಳದಿದೆ ಅಂತ ಹೇಳ್ತಾರೆ ಹೊರತು, ಮಗು ಗಂಡಾ, ಹೆಣ್ಣಾ ಅಂತ ಹೇಳ್ತಾರಾ ಸಾರ್‌? ಅದು ಕ್ರೈಮ್‌ ಅಲ್ವಾ ಸಾರ್‌?’ ಬಹಳ ಮುಗ್ಧವಾಗಿ ಕೇಳಿದರು ಪ್ರಥಮ್‌. ಅದಕ್ಕೂ ಮುನ್ನ “ದೇವ್ರಂಥಾ ಮನುಷ್ಯ’ ಚಿತ್ರದ ಕಥೆ ಏನು, ಚಿತ್ರದಲ್ಲಿ ದೇವ್ರಂಥಾ ಮನುಷ್ಯ ಏನೆಲ್ಲಾ ಮಾಡ್ತಾನೆ, ರಾತ್ರಿ ಹೊತ್ತು ಯಾಕೆ ಸಿಗಬಾರದು ಅಂತೆಲ್ಲಾ ಹಲವು ಪ್ರಶ್ನೆಗಳು ಬಂದಿತ್ತು. ಇನ್ನೇನು ಚಿತ್ರ ಬಿಡುಗಡೆಯಾಗುತ್ತದೆ, ಆಗ ತನ್ನಿಂತಾನೇ ಗೊತ್ತಾಗತ್ತೆ ಎಂದು ಚಿತ್ರತಂಡದವರು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಪ್ರಶ್ನೆಗಳ ಸುರಿಮಳೆ ಮುಂದುವರೆಯುತ್ತಿದ್ದಂತೆಯೇ, ಪ್ರಥಮ್‌ ಎಂಟ್ರಿ ಕೊಟ್ಟು, ಹೀಗೆ ಹೇಳಿ ಸುಮ್ಮನಾದರು.

ಅಂದಹಾಗೆ, ಪ್ರಥಮ್‌ ಅಭಿನಯದ “ದೇವ್ರಂಥಾ ಮನುಷ್ಯ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಚಿತ್ರದ ಕುರಿತು ಮಾತನಾಡುವುದಕ್ಕೆ ಚಿತ್ರತಂಡದವರು ಬಂದಿದ್ದರು. ಪ್ರಥಮ್‌ ಜೊತೆಗೆ ನಾಯಕಿಯರಾದ ವೈಷ್ಣವಿ ಮೆನನ್‌, ಶ್ರುತಿ ರಾಜ್‌, ನಿರ್ದೇಶಕ ಕಿರಣ್‌ ಶೆಟ್ಟಿ, ನಿರ್ಮಾಪಕರಾದ ಮಂಜುನಾಥ್‌, ತಿಮ್ಮರಾಜು ಮುಂತಾದವರು ವೇದಿಕೆಯ ಮೇಲಿದ್ದು, ಚಿತ್ರದ ಬಗ್ಗೆ ಮಾತನಾಡಿದರು.

ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ನಿರ್ದೇಶಕ ಕಿರಣ್‌ ಶೆಟ್ಟಿ. ಇದು ಅವರಿಗೆ ಮೊದಲ ಚಿತ್ರ. “ಚಿತ್ರದ ಹಾಡುಗಳನ್ನು ಕೇಳಿ ಮುಖ್ಯಮಂತ್ರಿಗಳು ಸಹ ಮೆಚ್ಚಿದ್ದಾರೆ. ಚಿತ್ರದಲ್ಲಿ ಪ್ರಥಮ್‌ ಅವರ ಪಾತ್ರ ಬಹಳ ಚೆನ್ನಾಗಿದೆ. ಕಾಮಿಡಿಯಾದರೂ ಅವರ ಪಾತ್ರಕ್ಕೆ ಹಲವು ಶೇಡ್‌ಗಳಿವೆ. ಹತ್ತು ನಿಮಿಷಕ್ಕೊಮ್ಮೆ ಅವರ ಪಾತ್ರ ಬದಲಾಗುತ್ತಿರುತ್ತದೆ. ಈ ಚಿತ್ರದಲ್ಲಿ ನೀವು ಪ್ರಥಮ್‌ ಅವರ 10 ಅವತಾರಗಳನ್ನು ನೋಡಬಹುದು’ ಎನ್ನುತ್ತಾರೆ 
ಕಿರಣ್‌ ಶೆಟ್ಟಿ.

ಚಿತ್ರದ ಕಥೆಯೇನು ಎಂದರೆ, ರಿಚ್‌ ಅಪ್ಪನ ಪೆಚ್ಚು ಮಗ ಎಂಬ ಉತ್ತರ ಅವರಿಂದ ಬರುತ್ತದೆ. “ಇಲ್ಲಿ ನಾಯಕನಿಗೆ ಜವಾಬ್ದಾರಿ ಇಲ್ಲ. ಅನುಭವದ ಮೂಲಕ ಜವಾಬ್ದಾರಿ ಹೆಚ್ಚಾಗುತ್ತದೆ. ಇಲ್ಲಿ ನನ್ನ ನಿಜ ಜೀವನಕ್ಕೂ, ಪಾತ್ರಕ್ಕೂ ಸಂಬಂಧ ಇಲ್ಲ. ನಿಜ ಜೀವನದಲ್ಲಿ ನಾನು ಸಿಗರೇಟು, ಹೆಂಡ ಮುಟ್ಟುವುದಿಲ್ಲ. ಇಲ್ಲಿ ಕಥೆಗೆ ತಕ್ಕಂತೆ ಮುಟ್ಟಬೇಕಾಗುತ್ತದೆ’ ಎಂದರು ಪ್ರಥಮ್‌.

ಹತ್ತು ಅವತಾರಗಳೇನು ಎಂಬ ಪ್ರಶ್ನೆ ಬಂದಾಗ, “ಎಲ್ಲಾ ರಸಗಳೂ ಒಂದೊಂದು ಘಟ್ಟದಲ್ಲಿ ಬರುತ್ತಾ ಹೋಗುತ್ತದೆ. ಒಮ್ಮೆ ಮಜವಿದ್ದರೆ, ಇನ್ನೊಮ್ಮೆ ಎಮೋಷನ್‌ ಎಲ್ಲವೂ ಈ ಪಾತ್ರದಲ್ಲಿದೆ. ಇಲ್ಲಿ ನನಗಿಂತ ನಾಯಕಿಯರು ಬಹಳ ಚೆನ್ನಾಗಿ ಮಾಡಿದ್ದಾರೆ. ಅವರಿಂದ ಸಾಕಷ್ಟು ಕಲಿತೆ. ಇನ್ನು ಈ ಚಿತ್ರದ ನಿಜವಾದ ನಾಯಕರೆಂದರೆ ಸುಚೇಂದ್ರ ಪ್ರಸಾದ್‌ ಮತ್ತು ತಬಲಾ ನಾಣಿ’ ಎಂದರು ಪ್ರಥಮ್‌. ನಂತರ ಇಬ್ಬರು ನಾಯಕಿಯರು, ಇಬ್ಬರು ನಿರ್ಮಾಪಕರು ಎರಡೆರೆಡು ಮಾತುಗಳನ್ನಾಡಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.