ಟಾಸ್ ವಿನ್ ನಿರೀಕ್ಷೆಯಲ್ಲಿ ದಯಾಳ್
Team Udayavani, Jul 14, 2017, 6:55 AM IST
ಸುಮಾರು ಐದು ವರ್ಷಗಳ ಹಿಂದೆ ‘ಒಂದು ರೂಪಾಯಿ ಎರಡು ಪ್ರೀತಿ’ ಎಂಬ ಸಿನಿಮಾ ಆರಂಭವಾಗಿರೋದು ನಿಮಗೆ ನೆನಪಿರಬಹುದು. ದಯಾಳ್ ಪದ್ಮನಾಭ್ ನಿರ್ದೇಶನದ ಸಿನಿಮಾವಿದು. ಒಂದು ಹಂತದಲ್ಲಿ ಆ ಸಿನಿಮಾ ನಿಂತೇ ಹೋಗಿತ್ತು. ಈಗ ದಯಾಳ್ಗೆ ಆ ಸಿನಿಮಾ ಬಿಡುಗಡೆ ಮಾಡುವ ಮನಸ್ಸಾಗಿದೆ. ಅದು ಬದಲಾದ ಟೈಟಲ್ನೊಂದಿಗೆ. ಹೌದು, ಚಿತ್ರದ ಶೀರ್ಷಿಕೆ ಬದಲಾಗಿದೆ. ಈಗ ‘ಟಾಸ್’ ಎಂಬ ಶೀರ್ಷಿಕೆಯಡಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ‘ಒಂದು ರೂಪಾಯಿ ಎರಡು ಪ್ರೀತಿ’ ಎಂಬುದು ಟ್ಯಾಗ್ಲೈನ್ ಆಗಿದೆ.
ಅಷ್ಟಕ್ಕೂ ದಯಾಳ್ಗೆ ಈಗ ಸಿನಿಮಾ ಬಿಡುಗಡೆ ಮಾಡುವ ಮನಸ್ಸಾಗಿದ್ದು ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ, ಆ ಸಿನಿಮಾವಂತೆ. ‘ನಾನು ಈ ಸಿನಿಮಾವನ್ನು ನಂಬಿಕೊಂಡು, ಅದರ ಮೇಲಿನ ವಿಶ್ವಾಸದಿಂದ ಬಿಡುಗಡೆ ಮಾಡುತ್ತಿದ್ದೇನೆ. ನನ್ನನ್ನು ಬಿಡುಗಡೆ ಮಾಡು ಎಂದು ಆ ಸಿನಿಮಾ ಕೇಳುತ್ತಿತ್ತು. ನನಗೆ ಅದರ ಕಂಟೆಂಟ್ ಮೇಲೆ ವಿಶ್ವಾಸವಿದೆ. ಹಾಗಾಗಿ, ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದೇನೆ. ಚಿತ್ರರಂಗಕ್ಕೆ ಬಂದು ಈಗ ಸಾಕಷ್ಟು ಅನುಭವ ಆಗಿರುವುದರಿಂದ ಈ ಸಿನಿಮಾ ಒಂದು ವಾರ ಓಡಿದರೆ ಏನಾಗುತ್ತದೆ, ಎರಡು ವಾರ ಓಡಿದರೆ ಏನಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ನನಗಿದೆ. ಅದರ ಹೊರತಾಗಿ ಸಿನಿಮಾದಿಂದ ನಷ್ಟ ಆಯಿತು, ಎಲ್ಲವನ್ನು ಕಳೆದುಕೊಂಡೆ ಎಂಬ ಸೀನ್ ಇಲ್ಲಿ ಬರೋದಿಲ್ಲ’ ಎಂಬುದು ದಯಾಳ್ ಮಾತು.
ಅಂದಹಾಗೆ, ಚಿತ್ರ ಜುಲೈ 21 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ ದಯಾಳ್. ಈ ಹಿಂದೆ ‘ಹಗ್ಗದ ಕೊನೆ’, ‘ಆ್ಯಕ್ಟರ್’ ಸಿನಿಮಾ ಮೂಲಕ ಸಿಕ್ಕ ಒಳ್ಳೆಯ ಹೆಸರು, ‘ಟಾಸ್’ ಮೂಲಕ ಮತ್ತಷ್ಟು ಹೆಚ್ಚುತ್ತದೆ ಎಂಬ ವಿಶ್ವಾಸ ಕೂಡಾ ದಯಾಳ್ಗಿದೆ.
ದಯಾಳ್ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಮೂವರು ಪ್ರಮುಖ ವಿತರಕರಿಗೆ ತೋರಿಸಿದರಂತೆ. ಸಿನಿಮಾ ನೋಡಿದ ಅವರು ಸಿನಿಮಾ ಚೆನ್ನಾಗಿದೆ ಎಂದೇಳಿ, ವಿತರಣೆಗೆ ಅವರದ್ದೇ ಆದ ಷರತ್ತು ಹೇಳಿದರಂತೆ. ಆದರೆ, ದಯಾಳ್ ಮಾಡಿಕೊಂಡ ಪ್ಲ್ಯಾನ್ಗೆ ಅದು ವಕೌìಟ್ ಆಗದ ಕಾರಣ, ಈಗ ಸುಧೀರ್ ಎನ್ನುವವರು ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಸಂದೀಪ್ ಹಾಗೂ ರಮ್ಯಾ ಬಾರ್ನಾ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಪ್ರಮೋಶನ್ಗೆ ಬರುತ್ತಿಲ್ಲ, ಫೋನ್ಗೂ ಪ್ರತಿಕ್ರಿಯಿಸುತ್ತಿಲ್ಲ ಎಂಬ ಬೇಸರ ದಯಾಳ್ಗಿದೆ.
ರಮ್ಯಾ ಬಾರ್ನಾ ಅವರ ತಾಯಿಗೆ ಹುಷಾರಿಲ್ಲದ ಕಾರಣ ಪ್ರಮೋಶನ್ಗೆ ಬಂದಿಲ್ಲವಂತೆ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಸಂದೀಪ್ ಸಿನಿಮಾ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ಮಾತನಾಡಿದರು. ದಯಾಳ್ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿರುವ ಅವಿನಾಶ್, ಸಂಗೀತ ನಿರ್ದೇಶಕ ಗೌತಮ್ ಶ್ರೀವಾಸ್ತವ್, ಸಂಕಲನಕಾರ ಶ್ರೀ ‘ಟಾಸ್’ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ