ಯೋಗಿ ಕಣ್ಣಲ್ಲಿ ಮತ್ತೆ ಕನಸು


Team Udayavani, Jun 29, 2018, 6:00 AM IST

x-35.jpg

“ನಾನು ಸ್ಕೂಲ್‌ ಗೆಟಪ್‌ನಲ್ಲಿ ಕಾಣಿಸಿಕೊಂಡ ನಂತರ ಒಂದು ವಾರ ನನ್ನ ಹೆಂಡತಿ ಸರಿಯಾಗಿ ಮಾತನಾಡಲೇ ಇಲ್ಲ …’

– ಹೀಗೆ ಹೇಳಿ ನಕ್ಕರು ಯೋಗಿ. ಪಕ್ಕದಲ್ಲಿದ್ದ ನಿರ್ದೇಶಕ ಕೃಷ್ಣರಾಜ್‌ ಅವರಿಗೂ ನಗು ತಡೆಯಲಾಗಲಿಲ್ಲ. ಏಕೆಂದರೆ, ಯೋಗಿಯ ಸ್ಕೂಲ್‌ ಗೆಟಪ್‌ಗೆ ಕಾರಣರಾದವರು ಅವರೇ. ಅಷ್ಟಕ್ಕೂ ಯೋಗಿ ಸ್ಕೂಲ್‌ ಗೆಟಪ್‌ ಹಾಕಲು, ಮನೆಯಲ್ಲಿ ಅವರ ಹೆಂಡತಿ, ತಾಯಿ ರೇಗಿಸಲು ಕಾರಣವಾಗಿದ್ದು, “ಲಂಬೋದರ -ಬಸವನಗುಡಿ ಬೆಂಗಳೂರು’. ಇದು ಯೋಗೇಶ್‌ ಅಭಿನಯದ ಹೊಸ ಸಿನಿಮಾ. ಎರಡು ಹಾಡು ಬಿಟ್ಟರೆ ಉಳಿದಂತೆ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಈ ಚಿತ್ರದಲ್ಲಿ ಯೋಗಿ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದರಲ್ಲೊಂದು ಹೈಸ್ಕೂಲ್‌ ಹುಡುಗನ ಗೆಟಪ್‌. ಆ ಪಾತ್ರಕ್ಕಾಗಿ ಯೋಗಿ ಗಡ್ಡ-ಮೀಸೆ ಬೋಳಿಸಿ, ಯುನಿಫಾರಂ ಹಾಕಿ ನಿಂತಿದ್ದನ್ನು ನೋಡಿದ ಯೋಗಿ ಪತ್ನಿಗೆ ಅಚ್ಚರಿಯಾಗಿದೆ. ಪಕ್ಕಾ ಸ್ಕೂಲ್‌ ಹುಡುಗನಂತೆ ಕಂಡ ಅವರನ್ನು ನೋಡಿ ಒಂದು ವಾರ ಸರಿಯಾಗಿ ಮಾತನಾಡಿಸಲೇ ಇಲ್ಲವಂತೆ. ಇನ್ನು, ಯೋಗಿ ಅಮ್ಮ ಕೂಡಾ ಮಗನನ್ನು ಬೇಜಾನ್‌ ರೇಗಿಸಿದ್ದಾರೆ. ಅದೇನೇ ಆದರೂ ಯೋಗಿ ಮಾತ್ರ “ಲಂಬೋದರ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅದಕ್ಕೆ ಕಾರಣ ಕಥೆ. “ನಮ್ಮ ಸಿನಿಮಾ ಡಿಫ‌ರೆಂಟ್‌ ಆಗಿದೆ, ಸಂದೇಶವಿದೆ, ಯಾರೂ ಮಾಡದ್ದನ್ನು ನಾವು ಮಾಡಿದ್ದೀವಿ  ಎಂದು ಹೇಳಿಕೊಳ್ಳೋದಿಲ್ಲ. ಆದರೆ, ಒಂದು ಕಮರ್ಷಿಯಲ್‌ ಸಿನಿಮಾವಾಗಿ ಪ್ರೇಕ್ಷಕರು ಏನು ಬಯಸುತ್ತಾರೋ ಆ ಅಂಶದೊಂದಿಗೆ ನಿರ್ದೇಶಕ ಕೃಷ್ಣರಾಜ್‌ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪೋಲಿ ಬಿದ್ದಿರುವ ಮಧ್ಯಮ ವರ್ಗದ ಹುಡುಗನ ಸುತ್ತ ಈ ಕಥೆ ಸಾಗುತ್ತದೆ. ಜವಾಬ್ದಾರಿ ಇಲ್ಲದ ಆತನ ಜೀವನದಲ್ಲಿ ಬರುವ ಹುಡುಗಿ, ಹೇಗೆ ಆತನ ಬದಲಾವಣೆಗೆ ಕಾರಣಳಾಗುತ್ತಾಳೆಂಬ ಅಂಶವನ್ನು ಇಲ್ಲಿ ಹೇಳಲಾಗಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು. ಇಷ್ಟು ಹೇಳಿದ ಮೇಲೆ ಲವ್‌, ತುಂಟತನ, ಪುಂಡಾಟಿಕೆ ಎಲ್ಲವೂ
ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.  “ನಿರ್ದೇಶಕರು ಜೀವನದಲ್ಲಿ ಹೇಗಿದ್ದರೋ ಅದನ್ನು ನನ್ನಲ್ಲಿ ಪಾತ್ರವಾಗಿ ಮಾಡಿಸಿದ್ದಾರೆ’ ಎನ್ನುತ್ತಾ ನಕ್ಕರು ಯೋಗಿ. 

ನಿರ್ದೇಶಕ ಕೃಷ್ಣರಾಜ್‌ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಯೋಗಿಯ “ಕಾಲಾಯ ತಸ್ಮೈ ನಮಃ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಕಥೆ ಮಾಡಿಕೊಂಡು, ನಿರ್ಮಾಪಕರನ್ನು ಒಪ್ಪಿಸಿದ ನಂತರ ಯೋಗಿಗೆ ಕಥೆ ಹೇಳಿದರಂತೆ. ಯೋಗಿ ಕೂಡಾ ಕಥೆ ಇಷ್ಟಪಡುವ ಮೂಲಕ ಸಿನಿಮಾ ಆರಂಭವಾಗಿದೆ. ಎಲ್ಲಾ ಓಕೆ, “ಲಂಬೋದರ -ಬಸವನಗುಡಿ ಬೆಂಗಳೂರು’ ಎಂಬ ಟೈಟಲ್‌ ಇಡಲು ಕಾರಣವೇನು ಎಂದು ನೀವು ಕೇಳಬಹುದು. “ನಮ್ಮ ಚಿತ್ರದ ಕಥೆ ನಡೆಯೋದು ಬೆಂಗಳೂರಿನ ಹಳೆಯ ಏರಿಯಾದಲ್ಲಿ. ಹಳೆಯ ಏರಿಯಾ ಎಂದಾಗ ಸಿಗೋದು ಮಲ್ಲೇಶ್ವರಂ ಮತ್ತು ಬಸವನಗುಡಿ. ನಾವು ಬಸವನಗುಡಿಯನ್ನು ತೋರಿಸಿದ್ದೇವೆ. ಆದಷ್ಟು ಬಸವನಗುಡಿಯ ಹಳೆಯ ಏರಿಯಾಗಳಲ್ಲೇ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಗಣೇಶ, ಗಣಪತಿ ಎಂಬರ್ಥದ ಟೈಟಲ್‌ ಬೇಕಿತ್ತು. ಆದರೆ, ಈಗಾಗಲೇ ಗಣೇಶ ಹೆಸರಿನಲ್ಲಿ ಟೈಟಲ್‌ ಬಂದಿವೆ. ಹಾಗಾಗಿ, ಲಂಬೋದರ ಎಂದಿಟ್ಟೆವು. ಜೊತೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ ಕೂಡಾ ತುಂಬಾ ಫೇಮಸ್‌’ ಎಂದು ವಿವರ ಕೊಟ್ಟರು. ಇನ್ನು ಬಸವನಗುಡಿಯ ಕಡಲೇಕಾಯಿ ಪರಿಷೆ, ವಿದ್ಯಾರ್ಥಿ ಭವನ ಸೇರಿದಂತೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಚಿತ್ರವನ್ನು ಉಡುಪಿ ಮೂಲದ ರಾಘವೇಂದ್ರ ಭಟ್‌ ಅವರು ನಿರ್ಮಿಸಿದ್ದಾರೆ. ಕಥೆ ಇಷ್ಟವಾಗಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು.

ಚಿತ್ರದಲ್ಲಿ ಧರ್ಮಣ್ಣ ಹಾಗೂ ಸಿದ್ದು ಮೂಳೀಮನೆ ನಟಿಸಿದ್ದಾರೆ. ನಾಯಕನ ಜೊತೆಗಿದ್ದು, ಆತನನ್ನು ಹಾಳು ಮಾಡುವ ಪಾತ್ರ ಮಾಡಿದ್ದಾಗಿ ಹೇಳಿದರು. ಚಿತ್ರದಲ್ಲಿ ಆಕಾಂಕ್ಷಾ ನಾಯಕಿ. ಚಿತ್ರಕ್ಕೆ ಹರೀಶ್‌ ಗಿರಿ ಗೌಡ ಅವರ ಸಂಕಲನವಿದೆ. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.