ಸಂಭ್ರಮದ ಸಮಯ


Team Udayavani, Sep 22, 2017, 3:33 PM IST

22-SU-6.jpg

ಸಭಾಂಗಣ ಫ‌ುಲ್‌ ಆಗಿತ್ತು. ವೇದಿಕೆಯೂ ಕಲರ್‌ ಫ‌ುಲ್‌ ಆಗಿತ್ತು. ಚಿತ್ರರಂಗದ ಅನೇಕ ಹಿರಿಯರು ಬಂದಿದ್ದರು. ಹಾಡು, ಕುಣಿತ ನಡುವೆ ಒಂದೊಂದೇ ಹಾಡುಗಳನ್ನೂ ಹೊರ ತರಲಾಯಿತು. ಇದಕ್ಕೂ ಮುನ್ನ ಮಹರ್ಷಿ ಡಾ.ಆನಂದ ಗುರೂಜಿ ಆ “ಹಾಡು-ಹರಟೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಂದಹಾಗೆ, ಇದು “3 ಗಂಟೆ, 30 ದಿನ 30 ಸೆಕೆಂಡ್‌’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ಆಡಿಯೋ ಸಿಡಿ ರಿಲೀಸ್‌ ಆಗಿದ್ದರಿಂದ ಅಲ್ಲಿ ಡ್ಯಾನ್ಸರ್ಗಳ ಡ್ಯಾನ್ಸ್‌ ಕಾರ್ಯಕ್ರಮವಿತ್ತು. ಹಾಡುಗಳ ಝಲಕ್‌ ತೋರಿಸುವ ಪ್ಲಾನಿಂಗೂ ಮಾಡಲಾಗಿತ್ತು. 

ಇವೆಲ್ಲದರ ನಡುವೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ವೇದಿಕೆಯೇರಿ, “ಅರ್ಧ ಚಂದ್ರ ಮೂಡಿದಂತೆ …’ ಎಂಬ ಹಾಡು ಬಿಡುಗಡೆ ಮಾಡಿದರು. “ಟೈಟಲ್‌ ಬಲು ಉದ್ದವಾಯ್ತು. ಆದ್ರೂ ಮಧ್ಯೆವೊಂದು ಹಂಪು ಇದೆ. ಈಗ ನಿರ್ದೇಶಕರುಗಳು ಏನೆಲ್ಲಾ ಟ್ರಿಕ್‌
ಮಾಡಿದ್ರೂ, ಪ್ರೇಕ್ಷಕರೇ ಜಾತಕ ಬರೆಯೋದು. ಶಿಷ್ಯ ಶ್ರೀಧರ್‌ ಸಂಭ್ರಮ್‌, ಒಳ್ಳೆಯ ಹಾಡು ಕೊಟ್ಟಿದ್ದಾರೆ. ಚಿತ್ರ 300 ದಿನ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು’ ಹಂಸಲೇಖ.

ಇದಕ್ಕೂ ಮುನ್ನ ನಿರ್ಮಾಪಕ ಚಂದ್ರಶೇಖರ್‌ ಆರ್‌. ಪದ್ಮಶಾಲಿ, “20 ವರ್ಷದ ಹಿಂದೆ “ಸಾಗರ ಪರ್ವತ’ ಎಂಬ ಧಾರಾವಾಹಿ ನಿರ್ಮಾಣ ಮಾಡಿದ್ದೆ. ಆಗ ಮಧುಸೂದನ್‌ ಅವರನ್ನು ನಿರ್ದೇಶಕರನ್ನಾಗಿ ಪರಿಚಯಿಸಿದ್ದೆ. ಈಗ ಎರಡು ದಶಕ ಬಳಿಕ ಈ ಚಿತ್ರ ನಿರ್ಮಿಸಿದ್ದೇನೆ. ಇಲ್ಲೂ ಮಧುಸೂದನ್‌ ಅವರೇ ನಿರ್ದೇಶಕರಾಗಿದ್ದಾರೆ. ನನ್ನೊಂದಿಗೆ 12 ಜನ ಸಹ ನಿರ್ಮಾಪಕರೂ ಸಾಥ್‌
ನೀಡಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ ಖುಷಿ ನನಗಿದೆ’ ಅಂದರು ಪದ್ಮಶಾಲಿ.

ಮಧುಸೂದನ್‌ ಅವರು ಈ ಶೀರ್ಷಿಕೆ ಇಟ್ಟಿರುವ ಉದ್ದೇಶದ ಬಗ್ಗೆ ಮಾತನಾಡಿದರು. ಒಂದು ಗೊಂದಲ ಇರಲಿ ಅಂತಾನೇ ಈ ಟೈಟಲ್‌ ಇಟ್ಟಿದ್ದಾಗಿ ಹೇಳಿಕೊಂಡರು. “ಒಂದು ವರ್ಷ ಕಥೆ ಸಿದ್ಧಪಡಿಸಿಕೊಂಡು ಆ ಬಳಿಕ, ಒಂದು ಟೀಮ್‌ ಕಟ್ಟಿಕೊಂಡು ಸಿನಿಮಾ ಮಾಡಿದ್ದೇನೆ. ಹೃದಯ ಮತ್ತು ಬ್ರೈನ್‌ ನಡುವಿನ ಚಿತ್ರವಿದು ಅಂತ ತಮ್ಮ ಚಿತ್ರದ ಕಥೆ, ತಂಡ ಹಾಗೂ ಶ್ರಮ ಹಾಕಿದ’ ಬಗ್ಗೆ ವಿವರಿಸಿದರು ಮಧುಸೂದನ್‌.

ಕಾರ್ಯಕ್ರಮದ ನಡುವೆ, ಪ್ರೋಮೋ ಮತ್ತು ಹಾಡು ತೋರಿಸುವುದರ ಜತೆಗೆ ರಮೇಶ್‌ ಅರವಿಂದ್‌ ಹಾಗೂ ಜಯಂತ್‌ ಕಾಯ್ಕಿಣಿ ಕೂಡ ಸಿನಿಮಾ ಹಾಡುಗಳ ಬಗ್ಗೆ ಮಾತನಾಡಿದ ವೀಡಿಯೋ ಬಂತು. ಅಂದು ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರಪ್ರಸಾದ್‌, ಭಗವಾನ್‌, ಭಾರ್ಗವ, ಜೋಸೈಮನ್‌, ಸುನೀಲ್‌ ಕುಮಾರ್‌ ದೇಸಾಯಿ, ಉಮೇಶ್‌ ಬಣಕಾರ್‌, “ಸೂರಪ್ಪ’ ಬಾಬು, ಬಿಟಿವಿ ಮುಖ್ಯಸ್ಥ ಕುಮಾರ್‌, ನಾಯಕ ಅರುಣ್‌ ಗೌಡ, ನಾಯಕಿ ಕಾವ್ಯಾ ಶೆಟ್ಟಿ ಇತರರು ಇದ್ದರು. ಇವರ ಮಾತುಗಳ ನಡುವೆ, ಶ್ರೀಧರ್‌ ಸಂಭ್ರಮ್‌
ಹಾಗೂ ಚಂದನ್‌ ಶೆಟ್ಟಿ ಹಾಡೊಂದನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು,
ಇದೇ ಮೊದಲ ಬಾರಿಗೆ ಶ್ರೀಧರ್‌ ಸಂಭ್ರಮ್‌ ಅವರು ಒಂದು ಹಾಡನ್ನು ಪೂರ್ಣಪ್ರಮಾಣವಾಗಿ ಹಾಡಿದ್ದಾರೆ. ಆ ಹಾಡು 
ದಾಸವಾಣಿಯೊಂದನ್ನು ನೆನಪಿಸುವಂತಿದ್ದು, ಅದರಲ್ಲಿ ಜೀವನ ತತ್ವದ ಸಾರಾಂಶಗಳಿವೆ ಎಂಬುದು ಚಿತ್ರತಂಡದ ಮಾತು.

 ವಿಭ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.