ವೆನಿಲ್ಲಾ ವಿಶೇಷ


Team Udayavani, May 25, 2018, 6:00 AM IST

c-21.jpg

“ಅದೊಂದು ರೈಲ್ವೆ ಹಳಿ. ಅಲ್ಲೇ ಸಮೀಪದ ಯೂನಿರ್ವಸಿಟಿಗೆ ಹೋಗಲೆಂದು ಒಬ್ಬರು ಆ ರೈಲ್ವೆ ಹಳಿ ಪಕ್ಕ ನಿಂತಿದ್ದರು. ಅದೇ ವೇಳೆ ರೈಲೊಂದು ಸಾಗಿ ಹೋಯ್ತು. ಅಲ್ಲಿ ನಿಂತಾತನ ಕಣ್ಣಿಗೆ, ಆ ರೈಲಿನ ಬಾಗಿಲ ಬಳಿ ಇದ್ದ ಒಬ್ಬ ಹುಡುಗ, ಹುಡುಗಿ ಕಂಡಿದ್ದಾರೆ …’ ಅಷ್ಟೇ, ಆ ಸನ್ನಿವೇಶವೇ ಒಂದು ಚಿತ್ರವಾಗಿದೆ. ಅಲ್ಲೇನಾಯ್ತು, ಏನು ಇತ್ಯಾದಿ ವಿಷಯಗಳಿಗೆ ಉತ್ತರವಿಲ್ಲ. ಆದರೂ, ರೈಲಿನಲ್ಲಿ ಒಬ್ಬ ಹುಡುಗ, ಹುಡುಗಿ ನಿಂತ ಸನ್ನಿವೇಶವನ್ನು ನೋಡಿದಾತ ಹೇಳಿದ್ದನ್ನೇ ಕಥೆ ಮಾಡಿ, ಚಿತ್ರ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಆ ಚಿತ್ರಕ್ಕೆ ಅವರು ಇಟ್ಟುಕೊಂಡ ಹೆಸರು “ವೆನಿಲ್ಲಾ’.

ಹೌದು, ರೈಲಿನಲ್ಲಿ ಆ ಹುಡುಗ, ಹುಡುಗಿಯನ್ನು ನೋಡಿದವರು ಕುಮಾರ್‌. ಅವರು ಜಯತೀರ್ಥ ಅವರಿಗೆ ಹೇಳಿದ್ದಾರೆ. ಜಯತೀರ್ಥ ಅವರಿಗೊಂದು ಐಡಿಯಾ ಬಂದು, ಅದೀಗ ಚಿತ್ರವಾಗಿ ಪ್ರೇಕ್ಷಕರ ಮುಂದೆ ಜೂ.1 ರಂದು ಬರುತ್ತಿದೆ. ಆ ವಿಷಯ ಹೇಳಿಕೊಳ್ಳಲೆಂದೇ ಜಯತೀರ್ಥ ತಂಡ ಕಟ್ಟಕೊಂಡು ಪತ್ರಕರ್ತರ ಮುಂದೆ ಬಂದಿದ್ದರು.

ಒಂದೊಂದು ಸಿನಿಮಾ ಕಥೆ ಎಲ್ಲೆಲ್ಲೋ ಹುಟ್ಟುತ್ತವೆ. “ವೆನಿಲ್ಲಾ’ ಕಥೆ ಒಂದು ರೈಲಿನಲ್ಲಿ ಪಯಣಿಸೋ ಹುಡುಗ, ಹುಡುಗಿಯ ನೋಡಿ ರೆಡಿಯಾಗಿದೆ. ಈ ಕುರಿತು ಜಯತೀರ್ಥ ಹೇಳಿಕೊಂಡಿದ್ದು ಹೀಗೆ. “ಇದೊಂದು ಪ್ರಾಮಾಣಿಕ ಪ್ರಯತ್ನ. ನನ್ನ ನಿರ್ದೇಶನದ 5 ನೇ ಚಿತ್ರವಿದು. ಹಿಂದೆ ಮಾಡಿದ ಸಿನಿಮಾಗಳೆಲ್ಲವೂ ಕಮರ್ಷಿಯಲ್‌ ಆಗಿದ್ದವು. ಇದು ಬೇರೆ ಜಾನರ್‌ ಸಿನಿಮಾ. ಈ ಪ್ರಯೋಗ ನನಗೆ ಹೊಸದು. ಹೊಸ ತಂಡ ಕಟ್ಟಿಕೊಂಡು ಹೊಸದೇನನ್ನೋ ಮಾಡಿದ್ದೇನೆ. “ಬ್ಯೂಟಿಫ‌ುಲ್‌ ಮನಸುಗಳು’ ಬಳಿಕ ಬಂದ ಪ್ರಾಜೆಕ್ಟ್ ಇದು. ಹೊಸ ಹುಡುಗ ಅವಿನಾಶ್‌ ಜಯರಾಂ ಈ ಚಿತ್ರ ಮಾಡೋಣ ಅಂದಾಗ, ಒಪ್ಪಲಿಲ್ಲ. ಆತ ರಂಗಭೂಮಿ ನಟ. ಮಂಡ್ಯ ರಮೇಶ್‌ ಅವರ ನಟನಾದಲ್ಲಿದ್ದವನು. ಒಮ್ಮೆ ನಾಟಕ ನೋಡಿದೆ. ಎರಡು ಗಂಟೆ ನಾಟಕದಲ್ಲಿ ಆತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡ ರೀತಿ ಇಷ್ಟವಾಯ್ತು. ಹಾಗೆ ಕಥೆಯೂ ಓಕೆ ಆಗಿತ್ತು. ಸಿನಿಮಾ ಮಾಡಿದೆ. ಇಲ್ಲಿ ಅಶ್ಲೀಲತೆ ಇಲ್ಲ, ಡಬ್ಬಲ್‌ ಮೀನಿಂಗ್‌ ಇಲ್ಲ, ಕೆಟ್ಟದ್ಯಾವುದೂ ಇಲ್ಲ. ಆದರೆ, ಘರ್ಷಣೆ ಇಲ್ಲದೆ ಕಥೆ ಹುಟ್ಟೋದಿಲ್ಲ. ಒಂದೊಳ್ಳೆ ಸಿನಿಮಾಗೆ ಬೇಕಾದೆಲ್ಲವೂ ಇಲ್ಲಿದೆ. ಸಿನಿಮಾಗೆ ಹೀರೋ ಸಾಕಷ್ಟು ವಿಷಯಗಳನ್ನು ಕಲೆ ಹಾಕಿ ಕೊಟ್ಟಿದ್ದರಿಂದ ಚಿತ್ರ ಇನ್ನಷ್ಟು ಚೆನ್ನಾಗಿ ಬಂದಿದೆ’ ಎಂಬುದು ಜಯತೀರ್ಥ ಮಾತು.

ನಾಯಕ ಅವಿನಾಶ್‌ಗೆ ಇದು ಕಷ್ಟ ಇಷ್ಟಗಳ ನಡುವೆ ಮಾಡಿದ ಚಿತ್ರವಂತೆ. “ನನ್ನ ಕನಸನ್ನು ಅಪ್ಪ ನನಸು ಮಾಡಿದ್ದಾರೆ. ಈಗಿನ ಯುವಕರ ಕುರಿತಾದ ಚಿತ್ರವಿದು. ನಾನಿಲ್ಲಿ ಸೀದಾ ಸಾದ ಇರುವ ಹುಡುಗನ ಪಾತ್ರ ಮಾಡಿದ್ದೇನೆ. ಲೈಫ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಾರ್ಮಲ್‌ ಹುಡುಗ. ಸ್ಕೂಲ್‌ನಲ್ಲೇ ಹುಡುಗಿಯೊಬ್ಬಳ ಮೇಲೆ ಕ್ರಷ್‌ ಆಗಿರುತ್ತೆ. 12 ವರ್ಷಗಳ ಬಳಿಕ ಆಕೆ ಪುನಃ ಸಿಗ್ತಾಳೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎಂದರು ಅವಿನಾಶ್‌.

“ಬಿಗ್‌ಬಾಸ್‌’ ಮನೆಯಿಂದ ಹೊರ ಬಂದ ರೆಹಮಾನ್‌, ಹಲವು ರಿಯಾಲಿಟಿ ಶೋ ನಡೆಸಿಕೊಡುವಾಗ ಬಂದ ಕಥೆ ಇದಂತೆ. “ಇಲ್ಲಿ ನಾಯಕಿಯ ಅಣ್ಣನ ಪಾತ್ರ ಮಾಡಿದ್ದೇನೆ. ಒಬ್ಬ ರೀಸರ್ಚ್‌ ಆಗಿ, ಚಿತ್ರಕ್ಕೆ ತಿರುವು ಕೊಡುವಂತಹ ಪಾತ್ರ ನನ್ನದು’ ಅಂದರು ರೆಹಮಾನ್‌.

ನಾಯಕಿ ಸ್ವಾತಿ ಕೊಂಡೆ ಇಲ್ಲೊಂದು ಹೊಸ ತರಹದ ಪಾತ್ರ ಮಾಡಿದ ಬಗ್ಗೆ ಹೇಳಿಕೊಂಡರು. ಕಾಕ್ರೋಚ್‌ ಸುಧಿಗೆ ಇಲ್ಲೊಂದು ಸಣ್ಣ ಪಾತ್ರ ಸಿಕ್ಕಿದೆಯಂತೆ. ಅದೊಂದು ಕಳ್ಳನ ಪಾತ್ರ ಎಂಬುದು ಅವರ ಮಾತು. ಕಿರಣ್‌ ಹಂಪಾಪುರ, ಸಂಗೀತ ನಿರ್ದೇಶಕ ಭರತ್‌,ಹೇಮಂತ್‌ “ವೆನಿಲ್ಲಾ’ ಅನುಭವ ಹಂಚಿಕೊಂಡರು.

ಟಾಪ್ ನ್ಯೂಸ್

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.