ನೆಗೆಟಿವ್‌ನಿಂದ ಪಾಸಿಟಿವ್‌ನತ್ತ …


Team Udayavani, Mar 9, 2018, 3:23 PM IST

vasista.jpg

ವಸಿಷ್ಠ ಸಿಂಹ ಎಂಬ ಯುವ ನಟನನ್ನು ನೀವು ಇಲ್ಲಿವರೆಗೆ ನೋಡಿರುವುದು ನೆಗೆಟಿವ್‌ ಪಾತ್ರಗಳಲ್ಲೇ. ಅದು “ರಾಜಾಹುಲಿ’ಯಿಂದ ಹಿಡಿದು ಮೊನ್ನೆ ಮೊನ್ನೆ ತೆರೆಕಂಡ “ಟಗರು’ ಚಿತ್ರದ ಚಿಟ್ಟೆ ಪಾತ್ರದವರೆಗೂ. ಸಾಮಾನ್ಯವಾಗಿ ನೆಗೆಟಿವ್‌ ಪಾತ್ರಗಳ ಮೂಲಕ ಬಂದವರಿಗೆ ಅಂತಹದ್ದೇ ಪಾತ್ರ ಸಿಗುತ್ತಾ ಹೋಗುತ್ತದೆ. ಕೆರಿಯರ್‌ನುದ್ದಕ್ಕೂ ವಿಲನ್‌ ಆಗಿಯೇ ಸಾಗಬೇಕಾಗುತ್ತದೆ. ಆದರೆ, ವಸಿಷ್ಠ ಸಿಂಹ ಮಾತ್ರ ಆ ವಿಚಾರದಲ್ಲಿ ಅದೃಷ್ಟ ಮಾಡಿದ್ದಾರೆ. ವಿಲನ್‌ ಆಗಿ ಬಂದ ಅವರು ಈಗ ಹೀರೋ ಆಗುತ್ತಿದ್ದಾರೆ.

ಈಗಾಗಲೇ ಅವರನ್ನು ಹೀರೋ ಮಾಡಿ ಸಿನಿಮಾ ನಿರ್ದೇಶನಕ್ಕೆ ನಿರ್ದೇಶಕರು ತಯಾರಾಗಿದ್ದಾರೆ. ಹಾಗಾಗಿ ನೆಗೆಟಿವ್‌ನಿಂದ ಪಾಸಿಟಿವ್‌ನತ್ತ ವಸಿಷ್ಠ ಎನ್ನಬಹುದು. ಈ ಬದಲಾವಣೆ ಬಗ್ಗೆ ವಸಿಷ್ಠ ಅವರಿಗೆ ಖುಷಿ ಇದೆ. ಜೊತೆಗೆ ಪಾತ್ರ ಮುಖ್ಯವೇ ಹೊರತು ಇಮೇಜ್‌ ಅಲ್ಲ ಎಂಬ ನಿರ್ಧಾರಕ್ಕೂ ಅವರು ಬಂದಿದ್ದಾರೆ. “ನಾನು ಇಮೇಜ್‌ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಮಾಡೋ ಪಾತ್ರ ಚೆನ್ನಾಗಿರಬೇಕು. ಒಬ್ಬ ಕಲಾವಿದನಾಗಿ ಒಂದು ಸಿನಿಮಾದಿಂದ ಮತ್ತೂಂದು ಸಿನಿಮಾಕ್ಕೆ ಬದಲಾವಣೆ ಬೇಕು.

ಅದನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಪ್ರತಿ ಪಾತ್ರಕ್ಕೂ ನನ್ನಿಂದ ಹೊಸದನ್ನು ಕೊಡಲು ಸಾಧ್ಯವೋ ಅದನ್ನು ಕೊಡುತ್ತಿದ್ದೇನೆ’ ಎನ್ನುತ್ತಾರೆ. ವಸಿಷ್ಠ ಸಿಂಹ ಸೋಲೋ ಹೀರೋ ಆದರೂ ಅವರ ಪಾತ್ರಗಳು ನೆಗೆಟಿವ್‌ ಶೇಡ್‌ನೊಂದಿಗೆ ಸಾಗಬೇಕು ಎಂಬ ಆಸೆ ಇದೆ. ನೆಗೆಟಿವ್‌ ಅಂಶ ಪ್ರತಿ ಮನುಷ್ಯನಲ್ಲೂ ಇರುತ್ತದೆ. ಅದನ್ನು ಪಾತ್ರಗಳಲ್ಲಿ ತುಂಬಿದರೆ ಚೆನ್ನಾಗಿರುತ್ತದೆ ಎಂಬುದು ವಸಿಷ್ಠ ಆಸೆ. “ಪಾತ್ರಗಳಲ್ಲಿ ನೆಗೆಟಿವ್‌ ತುಣುಕು ಇರಬೇಕು. ಆಗಲೇ ಮನುಷ್ಯ ಅನಿಸೋದು. ಸಾಮಾನ್ಯವಾಗಿ ನಾನು ನೀಟಾದ ಔಟ್‌ ಅಂಡ್‌ ಔಟ್‌ ಪಾಸಿಟಿವ್‌ ಪಾತ್ರ ಒಪ್ಪಲ್ಲ.

ನಾನು ಸಾಚಾ, ಒಳ್ಳೆಯವನು ಅನ್ನೋದೆಲ್ಲ ಕಥೆ. ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ನೆಗೆಟಿವ್‌ ಅಂಶ ಇದ್ದೇ ಇರುತ್ತದೆ. ಆ ಅಂಶ ನನ್ನ ಪಾತ್ರದಲ್ಲಿದ್ದರಬೇಕೆಂಬ ಆಸೆ. ಸನ್ಯಾಸಿ ಪಾತ್ರ ಬೇಕಾದರೂ ಮಾಡುತ್ತೇನೆ. ಆದರೆ, ಒಂದು ಅಂಶದಲ್ಲಾದರೂ ಆತನ ನೆಗೆಟಿವ್‌ ಸೈಡ್‌ ತೋರಿಸಬೇಕು’ ಎನ್ನುವುದು ವಸಿಷ್ಠ ಮಾತು. ವಸಿಷ್ಠ ಸಿಂಹ ಹೀರೋ ಆಗುತ್ತಿದ್ದರೂ ಅವರಿಗೆ ವಿಲನ್‌ ಪಾತ್ರಗಳ ಮೇಲೆ ಅತೀವ ಪ್ರೀತಿ. ಅದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು.

ಅಲ್ಲಿ ಸಾಕಷ್ಟು ನೆಗೆಟಿವ್‌ ರೋಲ್‌ಗ‌ಳನ್ನು ಮಾಡಿದ್ದೆ. ಹಾಗಾಗಿಯೇ ನನಗೆ ನೆಗೆಟಿವ್‌ ಪಾತ್ರಗಳ ಮೇಲೆ ಒಲವು ಜಾಸ್ತಿ. ಜೊತೆಗೆ ನೆಗೆಟಿವ್‌ ಪಾತ್ರಗಳಲ್ಲಿ ನಟನೆಯ ಅವಕಾಶ ಕೂಡಾ ಹೆಚ್ಚು. ಯಾವುದೇ ಚಿತ್ರವನ್ನಾದರೂ ನೀವು ತೆಗೆದುಕೊಳ್ಳಿ, ಅಲ್ಲಿ ವಿಲನ್‌ ಯಾವುದಕ್ಕೂ ಕೇರ್‌ ಮಾಡಲ್ಲ, ಬಯಸಿದ್ದನ್ನು ಪಡೆಯುತ್ತಾನೆ, ತಾನು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳಲು ಆತನ ಹೊಡೆದಾಡತ್ತಾನೆ. ಒಂದರ್ಥದಲ್ಲಿ ಆತ ಹೀರೋಗಿಂತ ಛಲಗಾರ.

ಸಾಮಾನ್ಯವಾಗಿ ಹೀರೋಗಳಿಗೆ ಇಂಟ್ರೋಡಕ್ಷನ್‌, ಸಾಂಗ್‌ ಮೂಲಕ ಅವರ ಪಾತ್ರವನ್ನು ಬಿಲ್ಡ್‌ ಮಾಡುತ್ತಾರೆ. ಅದೇ ವಿಲನ್‌ ಒಂದು ಕೆಟ್ಟ ಲುಕ್‌ ಕೊಟ್ಟರೂ ಅದು ಆತನ ಇಮೇಜ್‌ ಅನ್ನು ಹೆಚ್ಚಿಸುತ್ತದೆ’ ಎಂದು ವಿಲನ್‌ ಪಾತ್ರದ ಆಳ-ವಿಸ್ತಾರದ ಬಗ್ಗೆ ಮಾತನಾಡುತ್ತಾರೆ ವಸಿಷ್ಠ. ವಸಿಷ್ಠ ಚಿತ್ರರಂಗಕ್ಕೆ ಬಂದು ಹೆಚ್ಚೇನು ವರ್ಷಗಳಾಗಿಲ್ಲ. “ರಾಜಾಹುಲಿ’ ಚಿತ್ರದ ಮೂಲಕ ಬಂದವರು ವಸಿಷ್ಠ. ಆ ಚಿತ್ರದ ನಂತರ ಸಾಕಷ್ಟು ಆಫ‌ರ್‌ಗಳು ಬಂತಂತೆ. ಜೊತೆಗೆ ಚಾಕಲೇಟ್‌ ಹೀರೋ ತರಹ ಇದ್ದೀಯ ನೆಗೆಟಿವ್‌ ಪಾತ್ರಕ್ಕೆ ಈ ಲುಕ್‌ ಸೆಟ್‌ ಆಗಲ್ಲ ಎಂಬ ಮಾತೂ ಕೇಳಿಬಂತಂತೆ.

ಆಗಲೇ ವಸಿಷ್ಠ ಎಚ್ಚೆತ್ತುಕೊಂಡಿದ್ದು. ಗಡ್ಡ, ಮೀಸೆ ಬಿಟ್ಟು, ವಕೌìಟ್‌ ಮಾಡಿ, ದೇಹದಾಕೃತಿಯಲ್ಲೂ ಬದಲಾವಣೆ ಮಾಡಿಕೊಂಡರಂತೆ. ಆ ನಂತರ ವಸಿಷ್ಠ ತಿರುಗಿ ನೋಡಿಲ್ಲ. ಆರಂಭದಲ್ಲಿ ಒಂದೆರಡು ಸಿನಿಮಾಗಳ ಕಥೆ ಕೇಳದೇ ಎಡವಿದ ವಸಿಷ್ಠ ಬೇಗನೇ ಪಾಠ ಕಲಿತರಂತೆ. “ನಾನು ಯಾವುದೇ ಸಿನಿಮಾವನ್ನು ಕೂಡಾ ಕಥೆ ಕೇಳದೇ, ಕ್ಲಾéರಿಟಿ ಇಲ್ಲದೇ ಒಪ್ಪಲ್ಲ. ಆರಂಭದಲ್ಲಿ ಎರಡು ಸಿನಿಮಾಗಳನ್ನು ಕಥೆ ಕೇಳದೇ ಮಾಡಿ ಅದರಿಂದ ಪಾಠ ಕಲಿತೆ. ಒಂದು ಸಿನಿಮಾದಲ್ಲಂತೂ ವಿಲನ್‌ ಪಾತ್ರ ಕೊಟ್ಟು, ನನ್ನನ್ನು ಹೀರೋ ಎಂದು ಬಿಂಬಿಸಿದರು.

ಅದಕ್ಕೆ ಕಾರಣ ಆ ಸಿನಿಮಾದಲ್ಲಿ ಗೊತ್ತಿದ್ದ ಮುಖ ನಾನೊಬ್ಬನೇ ಇದ್ದಿದ್ದು. ಆದರೆ, ಸಿನಿಮಾ ನೋಡಿದಾಗ ನನ್ನ ಪಾತ್ರ ಜೂನಿಯರ್‌ ಆರ್ಟಿಸ್ಟ್‌ ತರಹ ಇತ್ತು. ಆ ನಂತರ ಕಥೆ ಕೇಳದೇ ಒಪ್ಪಿಕೊಳ್ಳಲ್ಲ. ಇತ್ತೀಚೆಗೆ ಕಥೆ ಕೇಳದೇ ಒಪ್ಪಿಕೊಂಡ ಸಿನಿಮಾವೆಂದರೆ ಅದು “ಟಗರು’. ಅದಕ್ಕೆ ಕಾರಣ ಸೂರಿ ಮೇಲಿನ ನಂಬಿಕೆ. ಆದರೂ ಸಿನಿಮಾ ಆರಂಭವಾಗುವಾಗ ಪಾತ್ರ ಹೇಗೆ ಟ್ರಾವೆಲ್‌ ಮಾಡುತ್ತೆ ಎಂಬುದನ್ನು ಕೇಳಿಕೊಂಡಿದ್ದೆ’ ಎನ್ನುತ್ತಾರೆ ವಸಿಷ್ಠ. ವಸಿಷ್ಠಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಾಗಲೀ, ಸಿನಿಮಾ ಬಗ್ಗೆ ಕುತೂಹಲವಾಗಲೀ ಇರಲಿಲ್ಲವಂತೆ.

ಚಿತ್ರರಂಗಕ್ಕೆ ಬಂದಿದ್ದು ಅಚಾನಕ್‌ ಆಗಿ ಎನ್ನುತ್ತಾರೆ. “ನನಗೆ ಸಿನಿಮಾ ಬಗ್ಗೆ ಆಸಕ್ತಿ ಇರಲಿಲ್ಲ. ನನಗೆ ಗಾಯಕನಾಗಬೇಕೆಂಬ ಆಸೆಯಷ್ಟೇ ಇತ್ತು.  ಆದರೆ, ಅಚಾನಕ್‌ ಆಗಿ ಬಂದೆ. ಆರಂಭದಲ್ಲಿ ಒಂದೆರಡು ಪಾತ್ರ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಜನ ಫೋಟೋ, ಆಟೋಗ್ರಾಫ್ ಎಂದು ಗುರುತಿಸಿದಾಗ, ಸಿನಿಮಾ ಬಗ್ಗೆ ಆಸೆ ಹೆಚ್ಚಾಯಿತು. ಅದರಂತೆ ಆರಂಭದಲ್ಲಿ ಪಾಕೇಟ್‌ ಮನಿ ತರಹದ ಸಂಭಾವನೆ ಸಿಗುತ್ತಿತ್ತು. ಹೇಗೋ ಜೀವನ ಸಾಗುತ್ತಿತ್ತು.

ಇಷ್ಟು ಕೊಟ್ಟಿದೆ ಅಂದಮೇಲೆ ಇನ್ನೂ ಕೊಡುತ್ತೆ ಎಂಬ ನಂಬಿಕೆಯೊಂದಿಗೆ ಹೆಚ್ಚೆಚ್ಚು ಶ್ರಮ ಹಾಕಿ ಚಿತ್ರರಂಗದಲ್ಲಿ ತೊಡಗಿಕೊಂಡೆ’ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಸದ್ಯ ತೆರೆಕಂಡಿರುವ “ಟಗರು’ ಚಿತ್ರದಲ್ಲಿ ವಸಿಷ್ಠ ಚಿಟ್ಟೆ ಎಂಬ ಪಾತ್ರ ಮಾಡಿದ್ದಾರೆ. ಆದರೆ, ಸೂರಿಯವರ “ಕಡ್ಡಿಪುಡಿ’ ಚಿತ್ರದಲ್ಲಿ ಜೂನಿಯರ್‌ ಆರ್ಟಿಸ್ಟ್‌ ತರಹ ವಸಿಷ್ಠ ಹಿಂದೆ ನಿಂತಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. “ಕಡ್ಡಿಪುಡಿ ಚಿತ್ರದಲ್ಲಿ ನನ್ನ ಸ್ನೇಹಿತ ನಟಿಸುತ್ತಿದ್ದ. ಅದೊಂದು ದಿನ ಅವನನ್ನು ಬಿಡಲು ನಾನು ಸೆಟ್‌ಗೆ ಹೋದೆ.

ಆಗ ಸೂರಿಯವರು, “ಬಾ, ಹೇಗೂ ಉದ್ದಕ್ಕಿದ್ದೀಯಾ, ನಿಲ್ಲು’ ಎಂದು ಹಿಂದುಗಡೆ ನಿಲ್ಲಿಸಿದರು. ಆಗ ಅವರಿಗೆ ನನ್ನ ಪರಿಚಯವೂ ಇರಲಿಲ್ಲ. ಆ ಸೀನ್‌ ನಂತರವೂ ಚಿತ್ರೀಕರಣದಲ್ಲಿ ಮುಂದುವರಿಯುವಂತೆ ಹೇಳಿದರು. ಆದರೆ, ಥಿಯೇಟರ್‌ ಹಿನ್ನೆಲೆಯಿಂದ ಬಂದ ನನಗೆ ಸುಮ್ಮನೆ ಹಿಂದೆಲ್ಲೋ ನಿಂತುಕೊಳ್ಳಲು ಮನಸ್ಸು ಒಪ್ಪಲಿಲ್ಲ. ಆದರೆ, ಈಗ “ಟಗರು’ವಿನಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ’ ಎಂದು ಫ್ಲ್ಯಾಶ್‌ಬ್ಯಾಕ್‌ಗೆ ಜಾರುತ್ತಾರೆ. ಎಲ್ಲಾ ಓಕೆ, ವಸಿಷ್ಠಗೆ ಬ್ರೇಕ್‌ ಕೊಟ್ಟ ಸಿನಿಮಾ ಯಾವುದು ಎಂದರೆ, “ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು’ ಎನ್ನುತ್ತಾರೆ.

“ಆ ಸಿನಿಮಾ ನನ್ನ ನಿದ್ದೆ ಕೆಡಿಸ್ತು. ಅವತ್ತಿನಿಂದ ಇವತ್ತಿನವರೆಗೂ ನಾನು ಬಿಝಿ ಇರುವಂತೆ ಮಾಡಿದೆ. ಊಟ, ತಿಂಡಿ ಎಲ್ಲವನ್ನು ಮೀರಿ ಕೆಲಸ ಎಂಬುದು ವಾಡಿಕೆಯಾಗಿದೆ. ಇವತ್ತು ಒಂದು ದಿನ ಶೂಟಿಂಗ್‌ ಕ್ಯಾನ್ಸಲ್‌ ಆದರೆ, ನಾನು ಹುಚ್ಚನಾಗಿಬಿಡುತ್ತೇನೆ. ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಕೆಲಸಕ್ಕೆ ಅಷ್ಟೊಂದು ಅಡಿಕ್ಟ್ ಆಗಿದ್ದೇನೆ. ಸರಿಯಾಗಿ ನಿದ್ದೆ ಮಾಡದೇ ಎರಡೂವರೆ ತಿಂಗಳಾಯಿತು. ನಿದ್ದೆ ಏನಿದ್ದರೂ ಗಾಡಿ ರನ್ನಿಂಗ್‌ನಲ್ಲಿರುವಾಗಷ್ಟೇ’ ಎಂದು ತಾವು ಬಿಝಿ ಇರುವ ಬಗ್ಗೆ ಹೇಳುತ್ತಾರೆ.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.