ಹುಲಿ ಹೈದ ಪ್ಯಾಟೇಗ್ ಬಂದ
Team Udayavani, Mar 1, 2019, 12:30 AM IST
ಕನ್ನಡದಲ್ಲಿ ಹೀರೋಗಳ ಅಭಿಮಾನಿಗಳಾಗಿ ಈಗಾಗಲೇ ಹಲವು ನಟರ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಹುಲಿ ಹೈದ’ ಎಂಬ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಬಹುತೇಕ ಯುವಕರೇ ಸೇರಿ ಮಾಡಿರುವ ಚಿತ್ರವಿದು. ಈ “ಹುಲಿ ಹೈದ’ ಚಿತ್ರಕ್ಕೆ ಫ್ಯಾನ್ ಆಫ್ ಟೈಗರ್’ ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ಮಾಸ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರದಲ್ಲಿ ವಿಕ್ರಮ್ ರಾಜ್ ಹೀರೋ. ಬಳ್ಳಾರಿ ಮೂಲದ ಇವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ಟೈಗರ್ ಪ್ರಭಾಕರ್ ಅವರ ಅಭಿಮಾನಿಯಾಗಿ ನಟಿಸಿದ್ದಾರೆ. ಅವರ ಚಿತ್ರಗಳನ್ನು ನೋಡಿ ಸ್ಫೂರ್ತಿಗೊಂಡು, ಹೇಗೆ ತನ್ನ ಬದುಕಿನಲ್ಲಿ ಅಂದುಕೊಂಡಂತಹ ಗುರಿ ತಲುಪುತ್ತಾನೆ ಎಂಬುದು ಕಥೆ. ಅಂದಹಾಗೆ, ಇದೊಂದು ತ್ರಿಕೋನ ಪ್ರೇಮಕತೆ ಹೊಂದಿರುವ ಚಿತ್ರ. ನಾಯಕ ವಿಕ್ರಮ್ರಾಜ್ ಅವರಿಗೆ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇದೆಯಂತೆ.
ಚಿತ್ರವನ್ನು ಸುಪ್ರೀತ್ ಕೂರ್ಗ್ ನಿರ್ದೇಶನ ಮಾಡಿದ್ದಾರೆ. “ತುಮಕೂರು, ಶಿವಮೊಗ್ಗ, ಬಳ್ಳಾರಿ, ಹರಪ್ಪನಹಳ್ಳಿ, ಬೆಂಗಳೂರು ಮತ್ತು ಹೊಸಪೇಟೆ ಸುತ್ತಮುತ್ತ ಸುಮಾರು ಇಪ್ಪತ್ತೆರೆಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯಕ್ಕೆ ಬಿಡುಗಡೆ ಕೆಲಸ ಜೋರಾಗಿ ನಡೆಯುತ್ತಿದೆ’ ಎಂಬುದು ನಿರ್ದೇಶಕರ ಮಾತು.
ಕೆ.ವಿ.ನಾಯ್ಕ ಚಿತ್ರದ ನಿರ್ಮಾಪಕರು. ಅಪೂರ್ವ ಮತ್ತು ಸೋನಚೌಹಾಣ್ ನಾಯಕಿಯರಾಗಿ ನಟಿಸಿದ್ದಾರೆ. ಅಪೂರ್ವ ಅವರಿಲ್ಲಿ ಅನಾಥೆ ಪಾತ್ರ ನಿರ್ವಹಿಸಿದ್ದಾರಂತೆ. ಇವರೊಂದಿಗೆ ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಮಂಜುನಾಯ್ಕ ಅವರಿಲ್ಲಿ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಾರ್ತಿಕ್ ವೆಂಕಟೇಶ್ ಅವರಿಲ್ಲಿ ನಾಲ್ಕು ಗೀತೆಗಳಿಗೆ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ರಾಕೇಶ್, ಸಾಗರ್,ನಾಗು ಅಣಸಿ ಛಾಯಾಗ್ರಹಣವಿದೆ. ಚೇತನ್ಕೆ.ಸಿ. ಅವರು ಮಾತುಗಳನ್ನು ಪೋಣಿಸಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಅನಿರುದ್ª ಅವರು, ಗಸಗಸೆ, ಮಾವು, ಸಂಪಿಗೆ ಸಸಿಗಳಿಗೆ ನೀರು ಹಾಕುವ ಮೂಲಕ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ವೇಳೆ ನಿರ್ಮಾಪಕ ರಾಜಶೇಖರ್, ಕೆ.ಸಿ.ಸಿಂಗ್, ಹಿರಿಯ ವಕೀಲರಾದ ಮಹೇಶ್ ಮುಂತಾದವರು ಇದ್ದರು. ಈ ಚಿತ್ರದ ಹಾಡುಗಳನ್ನು ಜಗದೀಶ್ ಅವರ ಸಿನಿ ಮ್ಯೂಸಿಕ್ ಸಂಸ್ಥೆಯಿಂದ ಹೊರತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ