ಗ್ಲಾಮರಸ್ ಆಕ್ಷನ್
ಝಾನ್ಸಿ ಲಕ್ಷ್ಮೀ ಭರ್ಜರಿ ಹೊಡೆದಾಟ
Team Udayavani, Aug 16, 2019, 5:31 AM IST
ಗ್ಲಾಮರಸ್ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀ ರೈ, ‘ಝಾನ್ಸಿ’ ಚಿತ್ರದ ಮೂಲಕ ಆ್ಯಕ್ಷನ್ಗೆ ತಿರುಗಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ‘ಝಾನ್ಸಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ಮೊದಲ ಹಂತವಾಗಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ , ನಿರ್ಮಾಪಕ ಕೆ.ಮಂಜು ಸೇರಿದಂತೆ ಇತರರು ಜೊತೆಯಾಗಿ ಚಿತ್ರದ ಆಡಿಯೋ ರಿಲೀಸ್ ಮಾಡಿದರು.
ಈ ಚಿತ್ರವನ್ನು ಮುಂಬೈ ಮೂಲದ ರಾಜೇಶ್ ಕುಮಾರ್ ನಿರ್ಮಿಸುತ್ತಿದ್ದು, ಪತ್ತಿ ಗುರುಪ್ರಸಾದ್ ನಿರ್ದೇಶನವಿದೆ. ಚಿತ್ರದ ಬಗ್ಗೆ ಮಾತನಾಡುವ ಗುರುಪ್ರಸಾದ್, ‘ಈ ಕಥೆಗೆ ಯಾರು ಸೂಕ್ತ ಎಂದು ನಾವು ಯೋಚಿಸುತ್ತಿದ್ದಾಗ ನಮ್ಮ ಕಣ್ಣಮುಂದೆ ಬಂದಿದ್ದು ಲಕ್ಷ್ಮೀ ರೈ ಮುಖ. ಅದರಂತೆ ಅವರಿಗೆ ಫೋನ್ ಮಾಡಿ, ಒನ್ಲೈನ್ ಹೇಳಿದ ಕೂಡಲೇ ಇಷ್ಟಪಟ್ಟ ಲಕ್ಷ್ಮೀ ರೈ, ‘ಖಂಡಿತಾ ಈ ಸಿನಿಮಾದಲ್ಲಿ ನಾನು ಮಾಡುತ್ತೇನೆ’ ಎಂದು ಹೇಳಿದರು. ಅದರಂತೆ ಚಿತ್ರೀಕರಣ ಆರಂಭವಾಯಿತು.
ಸುಖಾಸುಮ್ಮನೆ ಬಂದು ಅವರು ಆ್ಯಕ್ಷನ್ ಮಾಡಿಲ್ಲ. ಬದಲಾಗಿ ಈ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕೂಡಾ ಕಲಿತಿದ್ದಾರೆ. ಅವರ ಕೆರಿಯರ್ನಲ್ಲಿ ‘ಝಾನ್ಸಿ’ ದೊಡ್ಡ ಬ್ರೇಕ್ ನೀಡಲಿದೆ’ ಎಂದರು. ಚಿತ್ರದಲ್ಲಿ ರವಿಕಾಳೆ ಪ್ರಮುಖ ಪಾತ್ರ ಮಾಡಿದ್ದಾರೆ. ಆರಂಭದಲ್ಲಿ ಗ್ಲಾಮರಸ್ ಹೀರೋಯಿನ್ ಆಗಿರುವ ಲಕ್ಷ್ಮೀ ರೈಗೆ ಆ್ಯಕ್ಷನ್ ಮಾಡಲು ಸಾಧ್ಯನಾ ಎಂದುಕೊಂಡಿದ್ದರಂತೆ. ಆದರೆ, ಶೂಟಿಂಗ್ನಲ್ಲಿ ನೋಡಿದ ನಂತರ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡರಂತೆ. ನಾಯಕಿ ಲಕ್ಷ್ಮೀ ರೈ ಮಾತನಾಡಿ, ‘ನಾನು ಈ ಹಿಂದೆ ತಮಿಳು-ತೆಲುಗು ಚಿತ್ರಗಳಲ್ಲಿ ಸಣ್ಣಪುಟ್ಟ ಸ್ಟಂಟ್ಸ್ ಮಾಡಿದ್ದೆ. ಆದರೆ, ಆಗ ಗಾಯವಾಗಿತ್ತು. ‘ಝಾನ್ಸಿ’ ಚಿತ್ರದಲ್ಲಿ ಐದು ಫೈಟ್, ಒಂದು ಚೇಸ್ ಮಾಡಿದರೂ ಒಂದೇ ಒಂದು ಗಾಯವಾಗಿಲ್ಲ’ ಎಂದರು. ಈ ಚಿತ್ರಕ್ಕೆ ಕೃಪಾಕರ್ ಸಂಗೀತ ನೀಡಿದ್ದು, ಇದು ಅವರ 50ನೇ ಚಿತ್ರವಂತೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರ ಸಾಹಸವಿದ್ದು, ಲಕ್ಷ್ಮೀ ರೈ ಅವರ ಸ್ಟಂಟ್ಸ್, ಆ್ಯಕ್ಷನ್ ದೃಶ್ಯದ ವೇಳೆಯ ಅವರ ಅಟಿಟ್ಯೂಡ್ ಬಗ್ಗೆ ಮಾತನಾಡಿದರು.•
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ