ಪ್ರಶ್ನೆ ಮಾಡಲಿ ಅಂತಲೇ ಹೆಸರಿಟ್ಟರಂತೆ!


Team Udayavani, Dec 1, 2017, 11:20 AM IST

01-21.jpg

“ಈಸಿನಿಮಾಗೆ ಇಂಥಾ ಪ್ರಶ್ನೆಗಳು ಬರಲಿ ಅಂತಾನೇ ಈ ಟೈಟಲ್‌ ಇಟ್ಟಿದ್ದೀವಿ ಸಾರ್‌…’
ಹೀಗಂತ, ಅದೇನೋ ಸಾಧನೆ ಮಾಡಿದಂಗೆ ಗಟ್ಟಿಯಾಗಿ ಹೇಳಿಕೊಂಡರು ಹೀರೋ ಕಮ್‌ ಕಥೆಗಾರ ಜಗದೀಶ್‌ ಪವಾರ್‌. ಅವರು ಹೇಳಿಕೊಂಡಿದ್ದು ಚೊಚ್ಚಲ ನಾಯಕತ್ವದ “ಥರ್ಡ್‌ ಕ್ಲಾಸ್‌’ ಚಿತ್ರದ ಬಗ್ಗೆ. ಎಲ್ಲಾ ಸರಿ, ನಿಮ್ಮ ಸಿನಿಮಾದ ಈ ಶೀರ್ಷಿಕೆ ಎಷ್ಟರಮಟ್ಟಿಗೆ ಸರಿ? ಎಂಬ ಪತ್ರಕರ್ತರ ಪ್ರಶ್ನೆಗೆ, ಮೇಲಿನಂತೆ ಉತ್ತರಿಸಿದರು ಜಗದೀಶ್‌ ಪವಾರ್‌.

“ಜನರಿಗೆ ನಮ್ಮ ಈ ಸಿನಿಮಾ ಆರಂಭದಲ್ಲೇ ಸುದ್ದಿಯಾಗಬೇಕು, ಎಲ್ಲರೂ ಆ ಸಿನಿಮಾ ಬಗ್ಗೆ ಮಾತಾಡುವಂತಾಗಬೇಕಾದರೆ, ವಿಶೇಷತೆಗಳಿರಬೇಕು. ಹಾಗಾಗಿ ಇಲ್ಲಿ “ಥರ್ಡ್‌ ಕ್ಲಾಸ್‌’ ಅಂತ ಟೈಟಲ್‌ ಇಟ್ಟಿದ್ದೇವೆ. “ಹಣೆ ಬರಹಕ್ಕೆ ಹೊಣೆ’ ಎಂಬ ಅಡಿಬರಹವೂ
ಇದೆ. ಆ ಶೀರ್ಷಿಕೆ ಇಟ್ಟಿದ್ದಕ್ಕೇ ಇಷ್ಟೊಂದು ಪ್ರಶ್ನೆಗಳು ಬರುತ್ತಿವೆ. ಇಲ್ಲದಿದ್ದರೆ ಯಾರೂ ಕೇಳುತ್ತಿರಲಿಲ್ಲ’ ಅಂತ ಮತ್ತೆ ಗೆದ್ದವರಂತೆ ಮಾತು ಹರಿಬಿಟ್ಟರು. ಎಲ್ಲಾ ಸರಿ, “ಥರ್ಡ್‌ ಕ್ಲಾಸ್‌’ ಶೀರ್ಷಿಕೆ ನೋಡಿ ಫ್ಯಾಮಿಲಿ ಆಡಿಯನ್ಸ್‌ ಬರ್ತಾರಾ? ಎಂಬ ಪ್ರಶ್ನೆಗೆ, “ನೋಡೋಣ ಇಂಥದ್ದೊಂದು ಟೈಟಲ್‌ ಇಟ್ಟು ರಿಸ್ಕ್ ಮಾಡ್ಕೊಂಡಿದ್ದೇವೆ ಅಂತನಿಸಿಲ್ಲ. ಇಲ್ಲಿ ಟೈಟಲ್‌ ಮಾತ್ರ ಹೀಗಿದೆ. ಒಳಗೆ ಒಂದೊಳ್ಳೆಯ ಸಂದೇಶವಿದೆ. ಅದು ಸಿನಿಮಾ ನೋಡಿದ ಮೇಲೆ ಶೀರ್ಷಿಕೆ ಇಟ್ಟಿದ್ದರ ಅರ್ಥ ತಿಳಿಯುತ್ತೆ’ ಅಂತ ಸುಮ್ಮನಾದರು.

ಜಗದೀಶ್‌ ಪವಾರ್‌ ಇಲ್ಲಿ ಅಪ್ಪ, ಅಮ್ಮನ ಪ್ರೀತಿ ಕಾಣದ ಅನಾಥ ಮತ್ತು ಅವಿದ್ಯಾವಂತನಾಗಿ ಕಾಣಿಸಿಕೊಂಡಿದ್ದಾರಂತೆ. ಒಂದು ಕಾರು ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ನಾಯಕ, ಫ‌ಸ್ಟ್‌ಕ್ಲಾಸ್‌ ಹುಡುಗಿ ಜತೆ ಪ್ರೀತಿ ಚಿಗುರಿ ಆಮೇಲೆ ಏನಾಗುತ್ತೆ ಅನ್ನೋದನ್ನು ಇಲ್ಲಿ ಹೇಳಲಾಗಿದೆಯಂತೆ. ಶೀರ್ಷಿಕೆ ಹೀಗಿದ್ದರೂ, ಸಿನಿಮಾದೊಳಗಿರುವ ಅಂಶಗಳು ಫ‌ಸ್ಟ್‌ಕ್ಲಾಸ್‌ ಎಂಬುದು ಅವರ ಮಾತು. ಅಶೋಕ್‌ ದೇವ್‌ ಈ ಚಿತ್ರದ ನಿರ್ದೇಶಕರು. ಗೆಳೆಯರೊಬ್ಬರಿಂದ ಈ ಚಿತ್ರ ನಿರ್ದೇಶಿಸುವ ಅವಕಾಶ ಅವರಿಗೆ ಸಿಕ್ಕಿತಂತೆ. “ಥರ್ಡ್‌ ಕ್ಲಾಸ್‌’ ಶೀರ್ಷಿಕೆ ಯಾಕೆ ಇಟ್ಟಿದ್ದೇವೆ ಅನ್ನುವುದಕ್ಕೆ ಸಿನಿಮಾದಲ್ಲಿ ಉತ್ತರವಿದೆ.  ಇಲ್ಲಿ ಪ್ರೀತಿ, ದ್ವೇಷ, ಸೆಂಟಿಮೆಂಟ್‌ ಜತೆಗೆ ಒಂದು ಸಂದೇಶವೂ ಇದೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಅವರಿಗಿಬ್ಬರು ನಾಯಕಿಯರಿದ್ದಾರೆ. ಸದ್ಯಕ್ಕೆ ಚಿತ್ರದ ಎರಡು ಹಾಡುಗಳು ಬಾಕಿ ಇದೆ ಎಂಬುದು ನಿರ್ದೇಶಕರ ಮಾತು. ನಿರ್ಮಾಪಕ ಶಶಿ ನಾಯ್ಕ ಅವರಿಗೆ ಇದು ಮೊದಲ ಅನುಭವ.  ಅವರ ಜತೆಗೆ ಚಂದ್ರಕಲಾ ಬಾಯಿ ಕೂಡ ನಿರ್ಮಾನದಲ್ಲಿಸಾಥ್‌ ಕೊಟ್ಟಿದ್ದಾರೆ. ರೂಪಿಕಾ ಇಲ್ಲಿ ಗೃಹ ಮಂತ್ರಿ ಮಗಳಾಗಿ ನಟಿಸಿದ್ದಾರೆ. ಮೊದಲು ಅವರಿಗೂ ಈ ಶೀರ್ಷಿಕೆ ಕೇಳಿದಾಗ, ಯಾಕೆ ಇಂಥಾ ಶೀರ್ಷಿಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರಂತೆ. ಕೊನೆಗೆ ಕಥೆ ಕೇಳಿದಾಗ, ಅದೇ ಸೂಕ್ತವೆನಿಸಿತಂತೆ. ಫ‌ಸ್ಟ್‌ ಕ್ಲಾಸ್‌, ಮಿಡ್ಲ್ ಕ್ಲಾಸ್‌ ಮತ್ತು ಥರ್ಡ್‌ ಕ್ಲಾಸ್‌ ಜೀವನ ಕುರಿತ ಕಥೆ ಇಲ್ಲಿದೆ. ಸಿನಿಮಾ ನೋಡಿದವರಿಗೆ ಮಾತ್ರ ಈ ಚಿತ್ರದ ಶೀರ್ಷಿಕೆ ಇಟ್ಟಿದ್ದೇಕೆ ಅನ್ನೋದು ಗೊತ್ತಾಗುತ್ತೆ ಅಂದರು ರೂಪಿಕಾ. ಸಂಗೀತಾ ಅವರಿಲ್ಲಿ ನಾಯಕಿಯ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರಂತೆ ಅವರೂ ಸಹ ಈ ಶೀರ್ಷಿಕೆ ಬಗ್ಗೆ ಪ್ರಶ್ನಿಸಿದ್ದುಂಟಂತೆ. ಸಿನಿಮಾ ಥರ್ಡ್‌ ಕ್ಲಾಸ್‌ ಎಂದಿದ್ದರೂ, ಮಾಡಿರೋರೆಲ್ಲರೂ ಫ‌ಸ್ಟ್‌ಕ್ಲಾಸ್‌ ಮಂದಿ ಅಂದರು ಅವರು.

ಹಾಸ್ಯ ನಟ ಪವನ್‌ಕುಮಾರ್‌ ಯಥಾ ಪ್ರಕಾರ ಇಲ್ಲಿ ನಗಿಸುವ ಕಾರ್ಯ ಮಾಡಿದ್ದಾರಂತೆ. ಅವರಿಗೆ ಚಿತ್ರದ “ಗೆಧ್ದೋನ್‌ ಕಣ್‌ಗೆ ಸೋತೋನ್‌ ಥರ್ಡ್‌ ಕ್ಲಾಸ್‌, ಸೋತೋನ್‌ ಕಣ್‌ಗೆ ಗೆಧ್ದೋನ್‌ ಥರ್ಡ್‌ ಕ್ಲಾಸ್‌, ಶ್ರೀಮಂತನ ಕಣ್‌ಗೆ ಬಡವ ಥರ್ಡ್‌ಕ್ಲಾಸ್‌, ಬಡವನ ಕಣ್‌ಗೆ ಶ್ರೀಮಂತ ಥರ್ಡ್‌ ಕ್ಲಾಸ್‌’ ಈ ಹಾಡು ಇಷ್ಟ ಅಂತ ಹೇಳುವುದನ್ನು ಮರೆಯಲಿಲ್ಲ ಅವರು. ಉಳಿದಂತೆ ರಾಜ್‌ ಉದಯ್‌, ಮಾಸ್‌ಮಾದ ಇತರರು ಇದ್ದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.