ಸಾಗುತ ದೂರ ಗೆಲುವಿನ ಕನಸು

ಹೊಸ ತಂಡದಲ್ಲಿ ನಗು

Team Udayavani, Feb 21, 2020, 5:10 AM IST

chitra-20

“ಮೊದಲ ಸಲ ಒಂದೊಳ್ಳೆಯ ಪ್ರತಿಕ್ರಿಯೆಯೊಂದಿಗೆ ನನ್ನ ಸಿನಿಮಾ ಗೆಲುವು ಕೊಟ್ಟಿದೆ. ಇದು ನಿಮ್ಮೆಲ್ಲರ ಪ್ರೀತಿಯ ಸಹಕಾರದಿಂದ ಸಾಧ್ಯವಾಗಿದೆ..’

– ನಿರ್ದೇಶಕ ರವಿತೇಜ ಹೀಗೆ ತುಂಬ ಖುಷಿಯಲ್ಲೇ ಹೇಳುತ್ತಾ ಹೋದರು. ಅವರು ಹೇಳಿದ್ದು, ತಮ್ಮ ನಿರ್ದೇಶನದ “ಸಾಗುತ ದೂರ ದೂರ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ. “ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಕಂಟೆಂಟ್‌ ಬಗ್ಗೆ ಮಾತಾಡುತ್ತಿದ್ದಾರೆ. ತಾಯಿ, ಮಗನ ಎಮೋಷನಲ್‌ ಕುರಿತು ಹೊಗಳುತ್ತಿದ್ದಾರೆ. ನನಗೆ ಚಿತ್ರ 50 ದಿನ, ಶತದಿನ ಹೋಗುವುದು ಬೇಡ. ಜನರಿಗೆ ತಲುಪಿದರೆ ಸಾಕು. ನಮ್ಮ ನಿರ್ಮಾಪಕರೂ ಸಹ, ಈ ಸಿನಿಮಾದಿಂದ ಹಣ ಬರದಿದ್ದರೂ ಪರವಾಗಿಲ್ಲ. ಕನ್ನಡಿಗರಿಗೆ ಚಿತ್ರ ರೀಚ್‌ ಆಗಬೇಕು. ಆಗ ನಾವು ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಗುತ್ತೆ ಅಂತ. ಹಾಗಾಗಿ, ಕನ್ನಡಿಗರು ದಯವಿಟ್ಟು, ಒಮ್ಮೆ ಈ ಚಿತ್ರ ನೋಡಿ. ಸಾಧ್ಯವಾದರೆ, ಬೇರೆಯವರಿಗೂ ನೋಡುವಂತೆ ಮನವಿ ಮಾಡಿ. ಇಂದು ಈ ಚಿತ್ರ ಗೆಲುವಿನ ಹಾದಿ ಹಿಡಿಯಲು ಕಾರಣ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮ. ಎಲ್ಲರೂ ಚಿತ್ರದ ಕಥೆ, ಗುಣಮಟ್ಟ ಕುರಿತು ಬರೆದಿದ್ದರಿಂದಲೇ ಇಂದು ಜನರು ಬಂದು ಸಿನಿಮಾ ನೋಡುತ್ತಿದ್ದಾರೆ. ಬೇರೆ ಯಾರ ಮಾತನ್ನೂ ಕೇಳದೆ, ಒಂದು ಸಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಮನವಿ ಇಟ್ಟರು ರವಿತೇಜ.

ನಿರ್ಮಾಪಕ ಅಮಿತ್‌ ಪೂಜಾರಿ ಅವರಿಗೂ ಸಿನಿಮಾ ಮಾಡಿದ್ದಕ್ಕೆ ಹೆಮ್ಮೆ ಇದೆಯಂತೆ. “ಸಿನಿಮಾ ನಾವು ಅಂದುಕೊಂಡಂತೆಯೇ ಜನರಿಗೆ ಇಷ್ಟವಾಗಿದೆ. ಚಿತ್ರ ನೋಡಿದವರು ಭಾವುಕರಾಗುತ್ತಿದ್ದಾರೆ. ಈಗ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ. ಕನ್ನಡಿಗರು ಒಳ್ಳೆಯ ಚಿತ್ರವನ್ನು ಎಂದಿಗೂ ಕೈ ಬಿಟ್ಟಿಲ್ಲ. ಮುಂದೆಯೂ ಹೊಸ ಬಗೆಯ ಚಿತ್ರ ಕೊಡುವ ಉತ್ಸಾಹವಿದೆ. ಸಿನಿಮಾ ನೋಡದಿರುವವರು ದಯವಿಟ್ಟು, ಚಿತ್ರಮಂದಿರಕ್ಕೆ ಬಂದು ಈ ಚಿತ್ರ ನೋಡಿ. ಇಷ್ಟವಾದರೆ, ಇತರರಿಗೂ ಹೇಳಿ. ಈ ವಾರದಿಂದ ಬೆಳಗಾವಿ ಸೇರಿದಂತೆ ಇತರೆಡೆ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ವಿವರ ಕೊಟ್ಟರು ಅಮಿತ್‌.
ಉಷಾ ಭಂಡಾರಿ ಅವರಿಗೂ ಸಿನಿಮಾ ಮೇಲೆ ನಂಬಿಕೆ ಇತ್ತಂತೆ. ಅದೀಗ ನಿಜವಾಗಿದ್ದರಿಂದ, ಒಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಎಂಬ ತೃಪ್ತಿ ಅವರದು. “ಚಿತ್ರಮಂದಿರ ಸಮಸ್ಯೆ ತಲೆದೋರಿದೆ. ಚಿತ್ರರಂಗದ ಹಿರಿಯರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಇಂತಹ ಒಳ್ಳೆಯ ಸಿನಿಮಾಗಳಿಗೂ ತೊಂದರೆ ಆಗುತ್ತೆ. ಬಿಡುಗಡೆ ಸಂಖ್ಯೆ ಹೆಚ್ಚಾದರೆ, ಯಾವ ಸಿನಿಮಾಗೂ ಒಳ್ಳೆಯದಾಗಲ್ಲ. ಇದಕ್ಕೊಂದು ನಿಯಮ ರೂಪಿಸುವ ಅಗತ್ಯವಿದೆ’ ಎಂಬುದು ಅವರ ಮಾತು.

ನಟ ಮಹೇಶ್‌ ಸಿದ್ದು ವೇದಿಕೆಯಲ್ಲೇ ಭಾವುಕರಾದರು. ಕಾರಣ, ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಆಗಿದೆ ಎಂಬುದು. ಸಿನಿಮಾ ಮೆಚ್ಚಿರುವ ಕನ್ನಡಿಗರು, ಮಹೇಶ್‌ ಸಿದ್ದು ಅವರ ನಟನೆಯನ್ನು ಒಪ್ಪಿದ್ದಾರೆ. ಬೆನ್ನು ತಟ್ಟಿದ್ದಾರೆ. ಹಾಗಾಗಿ, ಸ್ವಾಭಿಮಾನಿ ಕನ್ನಡಿಗರು ಒಳ್ಳೆಯ ಚಿತ್ರಕ್ಕೆ ಸದಾ ಬೆಂಬಲವಾಗಿರುತ್ತಾರೆ ಎಂಬುದು ಇಲ್ಲಿ ಸಾಬೀತಾಗಿದೆ ಎನ್ನುವ ಅವರು, ತಾಯಿ, ಮಗನ ಸೆಂಟಿಮೆಂಟ್‌ ಇಲ್ಲಿ ವಕೌìಟ್‌ ಆಗಿದೆ. ಚಿತ್ರ ಗೆಲುವಿನ ಸಂಭ್ರಮದಲ್ಲಿದೆ. ಆದರೂ, ಎಲ್ಲರಿಗೂ ಈ ಚಿತ್ರ ತಲುಪಬೇಕಷ್ಟೇ. ನಾನು ಫೈಟರ್‌ ಆಗಿದ್ದವನು. ಈ ಮೂಲಕ ಆ್ಯಕ್ಟರ್‌ ಅಂತಾನೂ ಸಾಬೀತಾಗಿದೆ. ಅದು ನಿಮ್ಮಿಂದ’ ಎಂದರು.

ಅಂದು ನವೀನ್‌ಕುಮಾರ್‌, ಸಂತೋಷ್‌ ನಾಯ್ಕ ಇತರರು ಸಿನಿಮಾ ಗೆಲುವಿನ ಸಂಭ್ರಮ ಹಂಚಿಕೊಂಡರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.