ದೇಸಿ ಸ್ಪೆಷಲ್‌ ; ಥ್ರೀ-ಇನ್‌-ಒನ್‌ ಹುಟ್ಟುಹಬ್ಬದಲ್ಲಿ ಆಡಿಯೋ ಬಿಡುಗಡೆ


Team Udayavani, Jun 22, 2018, 6:00 AM IST

life-jothe-ond-selfie201.jpg

ಅಲ್ಲಿ ಎತ್ತ ನೋಡಿದರೂ ಜನಜಾತ್ರೆ. ಸಿಕ್ಕವರೆಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಎದುರಿಗೆ ಬಂದ ನಟ, ನಟಿಯರ ಕೈ ಕುಲುಕಿ ಅವರೊಂದಿಗೂ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವೇದಿಕೆ ಮೇಲೆ ಚಿತ್ರತಂಡ ಹೋದಾಗಲೂ, ವೇದಿಕೆ ಮುಂಭಾಗದಲ್ಲಿದ್ದವರು ಸೆಲ್ಫಿಗೆ ಫೋಸ್‌ ಕೊಡುತ್ತಿದ್ದರು …

– ಅಂದಹಾಗೆ, ಇದು “ಲೈಫ್ ಜೊತೆ ಒಂದ್‌ ಸೆಲ್ಫಿ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ದಿನಕರ್‌ ತೂಗುದೀಪ ಈ ಚಿತ್ರದ ನಿರ್ದೇಶಕರು. “ನೆನಪಿರಲಿ’ ಪ್ರೇಮ್‌,ಪ್ರಜ್ವಲ್‌ ದೇವರಾಜ್‌, ಹರಿಪ್ರಿಯಾ ಪ್ರಮುಖ ಆಕರ್ಷಣೆ. ಹಾಗಾಗಿ, ಅಂದು ಚಿತ್ರತಂಡದ ಕುಟುಂಬ ಸೇರಿದಂತೆ ರಾಜಕಾರಣಿಗಳು, ಚಿತ್ರರಂಗದ ಬಹುತೇಕ ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದು ವಿಶೇಷವಾಗಿತ್ತು. ಅಂದು ನಿರ್ದೇಶಕ ದಿನಕರ್‌ 
ತೂಗುದೀಪ, ನಿರ್ಮಾಪಕ ಸಮೃದಿಟಛಿ ಮಂಜುನಾಥ್‌, ನಟರಾದ ಪ್ರೇಮ್‌ ಮತ್ತು ಪ್ರಜ್ವಲ್‌ ದೇವರಾಜ್‌ ರೇಷ್ಮೆ 
ಪಂಚೆ, ಷರ್ಟು ಧರಿಸಿ, ಥೇಟ್‌ ದೇಸಿ ಶೈಲಿಯಲ್ಲಿ ಮಿಂಚುತ್ತಿದ್ದರು. ಎಲ್ಲರೂ ಅವರೊಂದಿಗೆ ಒಂದೊಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರ್ಯಕ್ರಮ ಶುರುವಾಯಿತು.

ವೇದಿಕೆ ಮೇಲಿನ ಪರದೆಯಲ್ಲಿ ಚಿತ್ರದ ತುಣುಕು ತೋರಿಸಲಾಯಿತು. ನಂತರ ನಿರ್ದೇಶಕ ದಿನಕರ್‌
ತೂಗುದೀಪ ಮಾತಿಗೆ ನಿಂತರು. “ಪತ್ನಿ ಹೇಳಿದ ಕಥೆ ಇಷ್ಟವಾಗಿದ್ದೇ ತಡ, ನಿರ್ಮಾಪಕರ ಬಳಿ ಹೇಳಿದೆ. ಎರಡೇ ನಿಮಿಷದಲ್ಲಿ ಗ್ರೀನ್‌ ಸಿಗ್ನಲ್‌ ಸಿಕ್ಕಿತು. ಚಿತ್ರಕ್ಕೆ ಹೊಸ ಕಲಾವಿದರನ್ನು ಆಯ್ಕೆ ಮಾಡುವ ಚರ್ಚೆ ನಡೆಯಿತು. ಕೊನೆಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಕಥೆಗೆ ತಕ್ಕಂತೆ ಅನುಭವಿ ನಟರಿದ್ದರೆ ಚೆನ್ನಾಗಿರುತ್ತೆ ಅಂದರು. ಕೊನೆಗೆ ಆಯ್ಕೆ 
ನಡೆದು, ಚಿತ್ರ ಶುರುವಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರೀಕರಣ ವೇಳೆ ತಂತ್ರಜ್ಞರಿಗೆ ನಾನು ಸಾಕಷ್ಟು ಕಾಟ ಕೊಟ್ಟಿದ್ದೇನೆ. ಅದು ಚಿತ್ರ ಚೆನ್ನಾಗಿ ಬರಲಿ ಎಂಬ ಕಾರಣಕ್ಕಷ್ಟೆ. ನನ್ನ ಕ್ಷಮೆ ಇರಲಿ’ ಎಂದರು ದಿನಕರ್‌.

ನಿರ್ಮಾಪಕ ಸಮೃದ್ದಿ ಮಂಜುನಾಥ್‌ ಅಂದು ಖುಷಿಯಿಂದಲೇ ಅತ್ತಿಂದತ್ತ ಓಡಾಡಿಕೊಂಡಿದ್ದರು. ಅಂದು ಅವರ ಪತ್ನಿ, ಮಗ ಮತ್ತು ಅವರ ಹುಟ್ಟುಹಬ್ಬ. ಆಡಿಯೋ ಹೊರಬರಲು ಅದೂ ಕಾರಣವಾಗಿತ್ತು. ದರ್ಶನ್‌ ಅವರ ಸಹಕಾರದಿಂದ ಚಿತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರ ಮಾಡುವುದು ನನ್ನ ಕೆಲಸ. ಇನ್ನು ಇದು ಕುಟುಂಬ ಸಮೇತ
ನೋಡಬಹುದಾದ ಚಿತ್ರ’ ಅಂದರು ನಿರ್ಮಾಪಕರು.

“ಹಣ ಇದ್ದಾಕ್ಷಣ ಸಿನಿಮಾ ಆಗಲ್ಲ. ಅದಕ್ಕೆ ಒಳ್ಳೆಯ ಕಥೆ ಮತ್ತು ತಯಾರಿ ಬೇಕು. ನಿರ್ಮಾಪಕರ ಹೆಸರಲ್ಲೇ
ಸಮೃದ್ಧಿ ಇದೆ. ಈ ಚಿತ್ರ ಅವರಿಗೆ ಸಮೃದ್ಧಿ ತರಲಿ. ಇನ್ನು, ದಿನಕರ್‌ ಮೂರು ಹಿಟ್‌ ಚಿತ್ರ ಕೊಟ್ಟಿದ್ದಾನೆ. ಇನ್ನು ಮುಂದೆಯೂ ಒಳ್ಳೆಯ ಚಿತ್ರ ಕೊಡಲಿ’ ಅಂತ ಹೇಳಿದ್ದು ದರ್ಶನ್‌.

ಅಂದು ಸಚಿವ ಪುಟ್ಟರಾಜು ಆಗಮಿಸಿದ್ದರು.ಅವರನ್ನು ಚಿತ್ರತಂಡ ಪ್ರೀತಿಯಿಂದ ಗೌರವಿಸಿತು.”ನಾನು ತೂಗುದೀಪ ಶ್ರೀನಿವಾಸ್‌ ಅವರ ಅಭಿಮಾನಿ.ಈಗ ಅವರ ಮಕ್ಕಳ ನಟನೆ ನೋಡಿ ಖುಷಿಪಡುತ್ತಿದ್ದೇನೆ ಅಂದರು ಸಚಿವರು. ಪ್ರೇಮ್‌, ಪ್ರಜ್ವಲ್‌,ಹರಿಪ್ರಿಯಾ ಮತ್ತಿತರರು ಚಿತ್ರದ ಕುರಿತು ಅನುಭವ ಹಂಚಿಕೊಂಡರು. ಅಂದು ದೇವರಾಜ್‌, ಸುಧಾರಾಣಿ,
ಧನಂಜಯ್‌, ಯಶಸ್‌ ಸೂರ್ಯ, ಧರ್ಮ ಕೀರ್ತಿರಾಜ್‌, ಮಾನಸ ದಿನಕರ್‌, ಕವಿರಾಜ್‌, ಶೈಲಜಾ ನಾಗ್‌, ಹರಿಕೃಷ್ಣ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.