ಪ್ರೀತಿಯ ಪೋಸ್ಟ್‌ ಮಾರ್ಟಮ್‌! “3 ಘಂಟೆ 30 ದಿನ 30 ಸೆಕೆಂಡ್‌’


Team Udayavani, Jul 7, 2017, 3:50 AM IST

post-martam.jpg

– ಹೀಗೊಂದು ಶೀರ್ಷಿಕೆ ಇಟ್ಟು ಮಾಡಿದ ಸಿನಿಮಾ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಪ್ರೀತಿ ಮುಖ್ಯನಾ, ಕೀರ್ತಿ ಮುಖ್ಯನಾ ಎಂಬ ವಿಷಯ ಇಟ್ಟುಕೊಂಡು ಮೊದಲ ಸಲ ನಿರ್ದೇಶನಕ್ಕಿಳಿದಿದ್ದಾರೆ ಮಧುಸೂದನ್‌. 
“3 ಘಂಟೆ ಆಟ ಆಡೋಕೆ ಬಂದು, 30 ದಿನ ಸಿಕ್ಕಿ ಹಾಕಿಕೊಂಡು 30 ಸೆಕೆಂಡ್‌ನ‌ಲ್ಲಿ ತಲೆ ಹೋಗುವಂತಹ ಸಂದರ್ಭ ಬಂದೊದಗಿದಾಗ ಏನೆಲ್ಲಾ ನಡೆದುಹೋಗುತ್ತೆ ಅನ್ನುವ ಕುತೂಹಲದ ಕಥೆ ಇಲ್ಲಿದೆ’ ಎನ್ನುವ ನಿರ್ದೇಶಕರು, “ಇಲ್ಲಿ ನವಿರಾದ ಪ್ರಮಕಾವ್ಯವಿದೆ. ಇದರೊಂದಿಗೆ ಚಿಂತನ, ಮಂಥನ, ಹಾಸ್ಯ, ಭಾವೋದ್ರೇಕ, ಆ್ಯಕ್ಷನ್‌ ಹಾಗೂ ಒಂದಷ್ಟು ಅನಿರೀಕ್ಷಿತ ತಿರುವುಗಳು ಸಿನಿಮಾದ ಹೈಲೈಟ್‌. ಒಬ್ಬ ಹುಡುಗಾಟದ ಹುಡುಗ, ಇನ್ನೊಬ್ಬ ಬುದ್ಧಿವಂತೆ ಹುಡುಗಿ ನಡುವೆ ನಡೆಯೋ ಒಂದು ಚಾಲೆಂಜ್‌, ಅವರಿಬ್ಬರ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಅದೇ ಚಿತ್ರದ ಪ್ರಮುಖ ಭಾಗ ಎನ್ನುತ್ತಾರೆ ಮಧುಸೂದನ್‌.

ನಾಯಕ ಅರುಗೌಡ ಇಲ್ಲಿ ಒಬ್ಬ ಲಾಯರ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಪಕ್ಕಾ ವಾದ ಮಾಡೋ ಲಾಯರ್‌ ಅಲ್ಲ, ಒಂದಷ್ಟು ತಮಾಷೆ ಮಾಡಿಕೊಂಡು, ಹುಡುಗಾಟವಾಡುತ್ತಲೇ ಕಥೆಗೊಂದು ಟ್ವಿಸ್ಟ್‌ ಕೊಟ್ಟು, ತಾನೇ ಒಂದು ಸಮಸ್ಯೆಗೆ ಸಿಲುಕಿಕೊಳ್ಳುವ ಹುಡುಗನಂತೆ ಅವರು. ಅವರಿಗಿಲ್ಲಿ ನಿರ್ದೇಶಕರ ಅಚ್ಚುಕಟ್ಟುತನ, ಹೆಣೆದಿರುವ ಕಥೆ, ಪಾತ್ರ ಬಗ್ಗೆ ಖುಷಿ ಇದೆಯಂತೆ. ಇದು ಈಗಿನ ವಾಸ್ತವ ಅಂಶಗಳ ಸುತ್ತ ಸಾಗುವ ಸಿನಿಮಾ ಆಗಿರುವುದರಿಂದ ಎಲ್ಲಾ ವರ್ಗದವರೂ ನೋಡಬೇಕಾದ ಚಿತ್ರ ಅನ್ನುತ್ತಾರೆ ಅರುಗೌಡ.

“ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್‌ ಅವರಿಗೆ ಶೀರ್ಷಿಕೆ ಕೇಳಿದಾಗ, ವಿಭಿನ್ನ ಎನಿಸಿತಂತೆ. ಕಥೆ ಮತ್ತು ಪಾತ್ರ ಕೇಳಿದಾಗ ಇದರಲ್ಲಿ ಹೊಸದೇನೋ ಇದೆ ಅಂತೆನಿಸಿ, ಕೆಲಸ ಮಾಡಿದರಂತೆ. ಅವರಿಲ್ಲಿ ಒಂದು ಟಿವಿ ಚಾನೆಲ್‌ವೊಂದರ ಹೆಡ್‌ ಆಗಿ ಕಾಣಿಸಿಕೊಂಡಿದ್ದು, “ಒಂದು ಲವ್‌ಸ್ಟೋರಿಯನ್ನು ಹೊಸ ನಿರೂಪಣೆಯಲ್ಲಿ ಹೇಳಿರುವ ನಿರ್ದೇಶಕರ ಜಾಣ್ಮೆ ಮೆಚ್ಚಬೇಕು. ಉಳಿದಂತೆ, ಇಲ್ಲಿ ಎಲ್ಲವೂ ಫ್ರೆಶ್‌ ಆಗಿದೆ. ಹಾಡುಗಳು ಮನಮುಟ್ಟುವಂತಿವೆ.

ಅರುಗೌಡ ಒಳ್ಳೆಯ ಪ್ರತಿಭಾವಂತ ಹುಡುಗ. ಆತ ಒಳ್ಳೆಯ ನಟ ಆಗುವ ಸೂಚನೆಗಳಿವೆ. ಉಳಿದಂತೆ ಒಳ್ಳೇ ತಂಡದಲ್ಲಿ ಕೆಲಸ ಮಾಡಿದ್ದು ಖುಷಿಕೊಟ್ಟಿದೆ ಅಂತ ಹೇಳಿದ ಚಂದ್ರಶೇಖರ್‌, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳು ಬಂದರೂ, ಪ್ರೇಕ್ಷಕರನ್ನು ತಲುಪುತ್ತಿಲ್ಲ. ಅದಕ್ಕೆ ಸಿಗದ ಚಿತ್ರಮಂದಿರಗಳು. ಇಂದು ಚಿತ್ರಮಂದಿರಗಳ ಕೊರತೆಯಿಂದಾಗಿ, ಪ್ರತಿಭಾವಂತರ ಚಿತ್ರಗಳು ಪ್ರೇಕ್ಷಕನನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಂಬಂಧಿಸಿದವರು ಚಿತ್ರಮಂದಿರದ ಕೊರತೆ ನೀಗಿಸಬೇಕು’ ಅಂದರು ಚಂದ್ರಶೇಖರ್‌.

ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಇಲ್ಲಿ ಐದು ಹಾಡು ಕೊಟ್ಟಿದ್ದಾರಂತೆ. ಅವರು ಇದೇ ಮೊದಲ ಸಲ ಇಲ್ಲೊಂದು ಹಾಡಿಗೂ ದನಿಯಾಗಿದ್ದಾರೆ. ಜಯಂತ್‌ ಕಾಯ್ಕಿಣಿ ಹಾಗೂ ನಿರ್ದೇಶಕರು ಗೀತೆ ರಚಿಸಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಂತೆಯೇ ಸಿನಿಮಾವನ್ನೂ ಮಾಡಿದ್ದಾರೆ. ಇಷ್ಟರಲ್ಲೇ ಆಡಿಯೋ ಸಿಡಿ ರಿಲೀಸ್‌ ಆಗಲಿದೆ ಅಂದರು ಶ್ರೀಧರ್‌.

ನಿರ್ಮಾಪಕ ಚಂದ್ರಶೇಖರ್‌ ಪದ್ಮಶಾಲಿ ಗೆಳೆಯರ ಜತೆಗೂಡಿ ಚಿತ್ರ ನಿರ್ಮಿಸಿದ್ದಾರೆ. ಅವರಿಗೂ ಈ ಚಿತ್ರ ಗೆಲುವು ಕೊಡುತ್ತೆ ಎಂಬ ವಿಶ್ವಾಸವಿದೆ. ಇಷ್ಟರಲ್ಲೇ ಒಂದು ರಿಯಾಲಿಟಿ ಶೋ ನಡೆಸಿ, ಆ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡುವ ಯೋಚನೆ ಇದೆ ಅಂದರು ಪದ್ಮಶಾಲಿ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.