ಗುಡ್ಡದ ಮೇಲೊಂದು ಸಿನಿಮಾ ಮಾಡಿ…


Team Udayavani, May 11, 2018, 7:20 AM IST

13.jpg

ನಿರ್ಮಾಪಕ ಪ್ರಕಾಶ್‌ ಸಿನಿಮಾ ಮಾಡುತ್ತೀನಿ ಎಂದು ಹೊರಟಾಗ, ಅವರ ಹಿತೈಷಿಗಳು ತಡೆದರಂತೆ. “ಸುಮ್ಮನೆ ಭೂಮಿ ಮೇಲೆ ದುಡ್ಡು ಹಾಕಿದರೆ ಡಬ್ಬಲ್‌ ಆಗುತ್ತದೆ. ಅದು ಬಿಟ್ಟು ಸಿನಿಮಾ ಮೇಲೆ ಹಾಕಿ ಯಾಕೆ ರಿಸ್ಕಾ’ ಎಂದು ಕೇಳಿದರಂತೆ. ಆದರೆ, ಪ್ರಕಾಶ್‌ ಭೂಮಿಯ ಮೇಲೆ ದುಡ್ಡು ಹಾಕುವುದಕ್ಕಿಂತ “ಎಡಕಲ್ಲು ಗುಡ್ಡದ ಮೇಲೆ’ ದುಡ್ಡು ಹಾಕಿದ್ದಾರೆ. ಅವರು ಹಾಕಿದ ದುಡ್ಡು ಬರುತ್ತದೋ ಇಲ್ಲವೋ ಗೊತ್ತಿಲ್ಲ, ಪ್ರಶಸ್ತಿಯಂತೂ ಬಂದಿದೆ. ಚಿತ್ರವು ನಾಲ್ಕು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಗೆದ್ದಿದೆ. ಇದರಿಂದ ಖುಷಿಯಾಗಿ ಹೋಗಿದ್ದಾರೆ ಪ್ರಕಾಶ್‌. ಇಂದು ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಹೇಳಿದಂತೆಯೂ ಆಯಿತು, ಪ್ರಶಸ್ತಿ ಪತ್ರಗಳನ್ನು ತೋರಿಸಿದಂತೆಯೂ ಆಯಿತು ಎಂದು ಅವರು ಮಾಧ್ಯಮದವರೆದುರು ಬಂದಿದ್ದರು.

ಮೊದಲು ಮಾತನಾಡಿದ್ದು ಅವರೇ. “ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳಿಗೆ ಎಂಟ್ರಿ ಸಿಗುವುದೇ ಕಷ್ಟ. ಅಂಥದ್ದರಲ್ಲಿ ನಮ್ಮ ಚಿತ್ರ ಎಂಟ್ರಿ ಪಡೆಯುವುದರ ಜೊತೆಗೆ ಪ್ರಶಸ್ತಿ ಸಹ ಸಿಕ್ಕಿದೆ. ನಾನು ಚಿತ್ರ ಮಾಡುತ್ತೀನಿ ಎಂದಾಗ, ಎಲ್ಲರೂ ಚಿತ್ರ ಮಾಡುವ ಬದಲು ಲ್ಯಾಂಡ್‌ ಮೇಲೆ ಹಾಕಿ ಅಂತ ಹೇಳಿದ್ದರು. ನಾನು ಆದರೂ ಧೈರ್ಯ ಮಾಡಿ ಸಿನಿಮಾ ಮಾಡಿದೆ. ಈ ಪ್ರೋತ್ಸಾಹ ನೋಡಿ ಖುಷಿ ಸಿಗುತ್ತೆ. ಜನರಿಂದಲೂ ಈ ರೀತಿಯ ಪ್ರೋತ್ಸಾಹ ಸಿಕ್ಕರೆ, ಮುಂದೆಯೂ ಸಿನಿಮಾ ಮಾಡುತ್ತೀನಿ’ ಎಂದರು.

ಈ ಚಿತ್ರವನ್ನು ವಿವಿನ್‌ ಸೂರ್ಯ ನಿರ್ದೇಶಿಸಿದ್ದಾರೆ. ಅವರಿಗೆ ತಮ್ಮ ಮೊದಲ ಚಿತ್ರ ಪ್ರಶಸ್ತಿ ಸಿಗುವುದರ ಜೊತೆಗೆ ಸಮಾಜಕ್ಕೆ ಒಂದಿಷ್ಟು ಒಳಿತು ಮಾಡಬೇಕು ಎಂಬ ಆಸೆ ಇತ್ತಂತೆ. ಈಗ ಪ್ರಶಸ್ತಿ ಸಿಗುವ ಮೂಲಕ ಅರ್ಧ ಆಸೆ ಈಡೇರಿದೆ. “ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಈಗಿನ ಮಕ್ಕಳು ಹದಗೆಡುತ್ತಿರುವ ಬಗ್ಗೆ ಚಿತ್ರದಲ್ಲಿ ಹಲವು ವಿಷಯಗಳಿವೆ. ತಂದೆ-ತಾಯಿ ತಮ್ಮ ಮಕ್ಕಳನ್ನು ಹೇಗೆ ಬೆಳಸಬೇಕು, ಅವರು ತಮ್ಮ ಕರ್ತವ್ಯ ಮರೆತರೆ ಏನಾಗುತ್ತದೆ ಎಂಬ ವಿಷಯ ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಇದೊಂದು ಶೈಕ್ಷಣಿಕ ಚಿತ್ರ. ಆದರೆ, ಕಮರ್ಷಿಯಲ್‌ ಆಗಿ ಮಾಡಿದ್ದೀವಿ’ ಎಂದು ಹೇಳಿದರು. ಚಿತ್ರದಲ್ಲಿ ದತ್ತಣ್ಣ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಈ ಚಿತ್ರದಲ್ಲಿ ಏನೋ ಇದೆ. ಸುಮ್ಮನೆ ಪ್ರಶಸ್ತಿ ಸಿಗೋಕೆ ಸಾಧ್ಯವಿಲ್ಲ. ಪ್ರೇಕ್ಷಕರ ಸಹಕಾರ ಸಿಕ್ಕರೆ, ಚಿತ್ರ ಇನ್ನಷ್ಟು ಗೆದ್ದಂಗೆ’ ಎಂದರು. ಇನ್ನು ಚಿತ್ರದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮೇಂದ್ರಗೆ ಆರಂಭದಲ್ಲಿ ಚಿತ್ರದ ಬಗ್ಗೆ ಅಷ್ಟು ನಂಬಿಕೆ ಇರಲಿಲ್ಲವಂತೆ. ಆದರೆ, ಈಗ ಈ ಚಿತ್ರದಲ್ಲಿ ನಟಿಸಿರುವುದು ಹೆಮ್ಮೆ ಅನಿಸುತ್ತಿದೆ ಎಂದರು. ಚಿತ್ರದಲ್ಲಿ ನಾಯಕನಾಗಿರುವ ನಕುಲ್‌ ಶರ್ಮ, ನಾಯಕಿ ಸ್ವಾತಿ ಶರ್ಮ ಮತ್ತು ಚಿತ್ರವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕಳಿಸುತ್ತಿರುವ ಪರ್ಪಲ್‌ ಆ್ಯರೋ ಫಿಲ್ಮ್ಸ್ನ ಶ್ರೀನಿವಾಸ್‌ ತಮ್ಮ ಅನುಭವ ಹಂಚಿಕೊಂಡರು.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.