ಗ್ರಾಮೀಣ ಸೊಗಡಿನ ಚಿತ್ರಗಳಲ್ಲಿ ಸೊಗಡೇ ಮಾಯ! 


Team Udayavani, Aug 18, 2017, 6:30 AM IST

lead.jpg

ಹಳ್ಳಿ ಸಿನಿಮಾಗಳಲ್ಲಿ ಅತಿಯಾದ ಡಬಲ್‌ ಮೀನಿಂಗ್‌ ಇದ್ದರೆ, ಅದರಲ್ಲೂ ಅದನ್ನು ಹಿರಿಯ ಜೀವಗಳಿಂದ ಹೇಳಿಸಿದರೆ ಸಿನಿಮಾ ಓಡುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದಾನೋ ಗೊತ್ತಿಲ್ಲ, ಬಹುತೇಕ ಹಳ್ಳಿ ಸೊಗಡಿನ ಚಿತ್ರಗಳು ಡಬಲ್‌ ಮೀನಿಂಗ್‌ನಿಂದ ತುಂಬಿ ತುಳುಕುತ್ತಿರುತ್ತವೆ. ಹಾಗಂತ ಅಷ್ಟೊಂದು ಡಬಲ್‌ ಮೀನಿಂಗ್‌ ಮೂಲಕ ಪಡ್ಡೆಗಳನ್ನು ಮೋಡಿ ಮಾಡಲು ಹೊರಟರೂ ಆ ತರಹದ ಯಾವ ಚಿತ್ರವೂ ಹಿಟ್‌ ಆದ ಉದಾಹರಣೆಯಂತೂ ಇಲ್ಲ. ಊರು ಬಿಟ್ಟು ಸಿಟಿಗೆ ಬಂದ ಮಂದಿ ನಮ್ಮೂರಿನ ಸೊಗಡನ್ನು ಕಣ್ತುಂಬಿಕೊಳ್ಳುವ ಎಂದು ಚಿತ್ರಮಂದಿರದೊಳಗೆ ಹೋದರೆ ಅವರಿಗೆ ಸಿಕ್ಕಿದ್ದು ಪಟಪಟ ಚಡ್ಡಿ, ಡಬಲ್‌ ಮೀನಿಂಗ್‌ ಡೈಲಾಗ್‌….

ಒಂದು ಕಾಲವಿತ್ತು. ಗ್ರಾಮೀಣ ಸೊಗಡಿನ ಚಿತ್ರವೆಂದರೆ ಹಚ್ಚ ಹಸಿರು, ಅಲ್ಲಿನ ಜನಜೀವನ, ಹಿರಿಯ ಜೀವಗಳ ಬುದ್ಧಿವಾದ, ಅಲ್ಲಿನ ಸೊಗಸಾದ ಭಾಷೆ, ಬದುಕುವ ಶೈಲಿ, ಜೊತೆಗೊಂದು ಸಂದೇಶ … ಈ ಅಂಶಗಳ ಜೊತೆಗೆ ಒಂದು ನೀಟಾದ ಸಿನಿಮಾ ಕಟ್ಟಿಕೊಡುತ್ತಿದ್ದರು. ನಿಜಕ್ಕೂ ಆಗಿನ ಸಿನಿಮಾಗಳಲ್ಲಿ ಹಳ್ಳಿಗಾಡಿನ ಸೊಗಸು ತುಂಬಿರುತ್ತಿತ್ತು. ಒಂದು ಜೀವನ ಶೈಲಿಯ ಪರಿಚಯ, ಅಲ್ಲಿನ ಸಂಸ್ಕೃತಿಯನ್ನು ಅಷ್ಟೇ ಚೆನ್ನಾಗಿ ಕಟ್ಟಿಕೊಡುವ ಮೂಲಕ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿದ್ದವು. ಆದರೆ, ಈಗ ಬರುತ್ತಿರುವ ಒಂದಷ್ಟು ಹಳ್ಳಿ ಹಿನ್ನೆಲೆಯ ಚಿತ್ರಗಳನ್ನು ನೋಡಿದರೆ ಹಳ್ಳಿಗರ ಬಗ್ಗೆಯೇ ಅನುಮಾನ ಮೂಡುವಂತೆ ಸಿನಿಮಾಗಳನ್ನು ಚಿತ್ರೀಕರಿಸುತ್ತಿದ್ದಾರೆ. 

ನೀವೇ ಸೂಕ್ಷ್ಮವಾಗಿ ಗಮನಿಸಿ, ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಸಿನಿಮಾಗಳು “ಇದು ಗ್ರಾಮೀಣ ಸೊಗಡಿನ ಚಿತ್ರ’ ಎಂಬ ನೇಮ್‌ಪ್ಲೇಟ್‌ನಡಿ ಬಂದವು. ಊರು ಬಿಟ್ಟು ಸಿಟಿಗೆ ಬಂದ ಮಂದಿ ನಮ್ಮೂರಿನ ಸೊಗಡನ್ನು ಕಣ್ತುಂಬಿಕೊಳ್ಳುವ ಎಂದು ಚಿತ್ರಮಂದಿರದೊಳಗೆ ಹೋದರೆ ಅವರಿಗೆ ಸಿಕ್ಕಿದ್ದು ದೊಡ್ಡ ನಿರಾಸೆ. ಪಟಟಪ ಚಡ್ಡಿ, ಡಬಲ್‌ ಮೀನಿಂಗ್‌ ಡೈಲಾಗ್‌, ಸಿಟಿ ಶೈಲಿಯನ್ನು ಕಣ್ಣಲ್ಲೇ ನೋಡಿರದವರಂತೆ ವರ್ತಿಸುವ ಹಳ್ಳಿ ಹೈದರನ್ನಿಟ್ಟುಕೊಂಡು ಸಿನಿಮಾಗಳು ಬಂದವೇ ಹೊರತು ಅದರಾಚೆ ಯೋಚನೆ ಮಾಡುವ ಗೋಜಿಗೆ ಯಾರೂ ಹೋಗಲಿಲ್ಲ. ಅದರಲ್ಲೂ “ತಿಥಿ’ ಚಿತ್ರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ, ಪ್ರಶಸ್ತಿಗಳನ್ನು ಚಾಚಿಕೊಂಡ ನಂತರವಂತೂ ಹಳ್ಳಿ ಸೊಗಡಿನ ಚಿತ್ರಗಳು ಅದೆಷ್ಟು ಬಂದವು ಲೆಕ್ಕವಿಲ್ಲ. “ತಿಥಿ’ಯಲ್ಲೊಂದು ಕಂಟೆಂಟ್‌ ಇತ್ತು, ಸಿಂಪಲ್‌ ವಿಷಯವನ್ನೇ ಹೊಸದಾಗಿ ಕಟ್ಟಿಕೊಡಲಾಗಿತ್ತು.

ಅಸಹ್ಯವೆನಿಸುವ ಸಂಭಾಷಣೆಗಳಿರಲಿಲ್ಲ. ಆ ಸಮಯಕ್ಕೆ “ತಿಥಿ’ಯ ಕಾನ್ಸೆಪ್ಟ್ ಹೊಸದು. ಜನ ಇಷ್ಟಪಟ್ಟರು. ಆದರೆ, ಅದರ ಹಿಂದೆ ಬಂದ ಒಂದಷ್ಟು ಚಿತ್ರಗಳನ್ನು ಗಮನಿಸಿದರೆ ಅಲ್ಲಿ ಹಳ್ಳಿ ಮಂದಿಯನ್ನು ತೀರಾ ಅನಕ್ಷರಸ್ಥರಂತೆ ತೋರಿಸಲಾಗುತ್ತಿದೆ. ಹಳ್ಳಿಗಳು ಬದಲಾಗುತ್ತಿವೆ. ಅಲ್ಲಿನ ಜನ ಕೂಡಾ ದೇಶದ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದಾರೆ. 

ಯಾವುದೇ ವಿಷಯದ ಬಗ್ಗೆ ಮಾತನಾಡುವಷ್ಟು ಪ್ರಬುದ್ಧರಾಗಿದ್ದಾರೆ. ಆದರೆ, “ಗ್ರಾಮೀಣ ಸೊಗಡಿನ’ ಚಿತ್ರ ಮಾಡುವವರಿಗೆ ಮಾತ್ರ ಇವ್ಯಾವುದು ಪರಿಗಣನೆ ಬರೋದೇ ಇಲ್ಲ. 

ಬಹುತೇಕ ಹಳ್ಳಿ ಸಿನಿಮಾಗಳಲ್ಲಿ ರಿಪೀಟ್‌ ಆಗೋದು ಒಂದೇ ಕಾನ್ಸೆಪ್ಟ್. ಊರ ಗೌಡ, ಒಂದಷ್ಟು ಪುಂಡ ಯುವಕರು, ಯಾರಧ್ದೋ ಒಂದು ಅಕ್ರಮ ಸಂಬಂಧ, ಅದನ್ನು ಬಯಲಿಗೆಳೆಯುವ ಒಂದು ತಂಡ, ಹಳ್ಳಿಗೆ ಸಿಟಿಯಿಂದ ಎಂಟ್ರಿ ಕೊಡುವ ಸ್ಟೈಲಿಶ್‌ ಸಿಟಿ ಹುಡುಗಿ, ಆಕೆಯ ಹಿಂದೆ ಬೀಳುವ ಪಡ್ಡೆಗಳು … ಇವಿಷ್ಟೇ “ಗ್ರಾಮೀಣ ಸೊಗಡಿನ’ ಸಿನಿಮಾಗಳ ಸರಕಾಗಿಟ್ಟಿವೆ. ಹಳ್ಳಿ ಸಿನಿಮಾಗಳಲ್ಲಿ ಅತಿಯಾದ ಡಬಲ್‌ ಮೀನಿಂಗ್‌ ಇದ್ದರೆ, ಅದರಲ್ಲೂ ಅದನ್ನು ಹಿರಿಯ ಜೀವಗಳಿಂದ ಹೇಳಿಸಿದರೆ ಸಿನಿಮಾ ಓಡುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದ್ದಾನೋ ಗೊತ್ತಿಲ್ಲ, ಬಹುತೇಕ ಹಳ್ಳಿ ಸೊಗಡಿನ ಚಿತ್ರಗಳು ಡಬಲ್‌ ಮೀನಿಂಗ್‌ನಿಂದ ತುಂಬಿ ತುಳುಕುತ್ತಿರುತ್ತವೆ. ಹಾಗಂತ ಅಷ್ಟೊಂದು ಡಬಲ್‌ ಮೀನಿಂಗ್‌ ಮೂಲಕ ಪಡ್ಡೆಗಳನ್ನು ಮೋಡಿ ಮಾಡಲು ಹೊರಟರೂ ಆ ತರಹದ ಯಾವ ಚಿತ್ರವೂ ಹಿಟ್‌ ಆದ ಉದಾಹರಣೆಯಂತೂ ಇಲ್ಲ. ಇತ್ತೀಚೆಗೆ ಬಂದ “ತರೆಲ ವಿಲೇಜ್‌’, “ಹಳ್ಳಿ ಪಂಚಾಯ್ತಿ’, “ನಮ್ಮೂರ ಹೈಕ್ಳು’, “ತಾತನ್‌ ತಿಥಿ ಮೊಮ್ಮಗನ್‌ ಪ್ರಸ್ಥ’ … ಇವೆಲ್ಲಾ ಅದೇ ಸಾಲಿಗೆ ಸೇರುವಂತಹ ಚಿತ್ರಗಳು.

ಇತ್ತೀಚೆಗೆ ಸತತವಾಗಿ ಒಂದು ಚೌಕಟ್ಟು ಹಾಕಿಕೊಂಡು ಹಳ್ಳಿ ಸೊಗಡಿನ ಚಿತ್ರವೆಂದರೆ ಇಷ್ಟೇ ಎಂಬ ಮಿತಿಯಲ್ಲಿ ಸಿನಿಮಾಗಳು ಬರುತ್ತಿರುವುದರಿಂದ ಹೊಸದಾಗಿ ಆ ತರಹದ ಸಿನಿಮಾಗಳನ್ನು ನೋಡಿದವರಿಗೆ “ಏನಪ್ಪಾ ಹಳ್ಳಿ ಜನ ಹಿಂಗೇನಾ’ ಎಂಬ ಅನುಮಾನ ಮೂಡಿದರೂ ಅಚ್ಚರಿಯಿಲ್ಲ. ಸಿನಿಮಾವೊಂದು ಕಲ್ಪನೆ ನಿಜ. ಆ ಕಲ್ಪನೆ ರಿಯಾಲಿಟಿಗೆ ಹತ್ತಿರವಾಗಿದ್ದರೆ ಚೆಂದ. ಅದರಲ್ಲೂ ಈಗಂತೂ ಸಿನಿಮಾವನ್ನು ನೈಜವಾಗಿ ಕಟ್ಟಿಕೊಡುವ ಟ್ರೆಂಡ್‌ ಹೆಚ್ಚುತ್ತಿದೆ.

ಹಳ್ಳಿಯಲ್ಲೂ ಸಾಕಷ್ಟು ಸಮಸ್ಯೆಗಳಿರುತ್ತವೆ, ಜೊತೆಗೆ ಅಲ್ಲಿನ ಜನಜೀವನದಲ್ಲೊಂದು ವಿಶೇಷತೆ ಇರುತ್ತದೆ, ಹಳ್ಳಿಯಲ್ಲಿ ಅರಳುವ ಲವ್‌ಸ್ಟೋರಿಗಳು ಕೂಡಾ ವಿಶಿಷ್ಟವಾಗಿರುತ್ತವೆ. ಅವುಗಳಿಗೆ ಸಿನಿಮಾ ಟಚ್‌ ಕೊಟ್ಟು ಸುಂದರವಾಗಿ ಕಟ್ಟಿಕೊಡಬಹುದು. ಆದರೆ, ಅದರ ಗೋಜಿಗೆ ಯಾರೂ ಹೋಗುವಂತೆ ಕಾಣುತ್ತಿಲ್ಲ. ಸಿಂಪಲ್ಲಾಗಿ ಏನೋ ಒಂದು ಸುತ್ತಿಕೊಟ್ಟರೆ ಸಾಕು ಎಂಬ ನಿರ್ಧಾರಕ್ಕೆ ಬಂದ ಪರಿಣಾಮವೇ “ಹಳ್ಳಿ ಸೊಗಡಿನ ಸಿನಿಮಾ’ ಎಂದರೆ ಜನ ಬೆನ್ನು ತಿರುಗಿಸುವಂತಾಗಿದೆ. 

ಇತ್ತೀಚೆಗೆ ಬಂದ “ಒಂದು ಮೊಟ್ಟೆಯ ಕಥೆ’, “ಹೊಂಬಣ್ಣ’ ಕೂಡಾ ಒಂದು ಪ್ರಾದೇಶಿಕತೆಯನ್ನು ಇಟ್ಟುಕೊಂಡೇ ಬಂದ ಸಿನಿಮಾಗಳು. ಅದರಲ್ಲೂ “ಹೊಂಬಣ್ಣ’ ಮಲೆನಾಡಿನ ಸುಂದರ ಪರಿಸರದ ಜೊತೆಗೆ ಅಲ್ಲಿನ ಸಮಸ್ಯೆಯತ್ತ ಕೂಡಾ ಬೆಳಕು ಚೆಲ್ಲಿತ್ತು. ಇಂತಹ ಪ್ರಯತ್ನಗಳು ಇನ್ನೂ ಹೆಚ್ಚೆಚ್ಚು ಆದರೆ, ಹಳ್ಳಿ ಸೊಗಡಿನ ಚಿತ್ರಗಳಿಗೂ ಒಂದು ಮಾನ್ಯತೆ ಬಂದಂತಾಗುತ್ತವೆ. ಹಳ್ಳಿ ಸೊಗಡಿನ ಚಿತ್ರಗಳನ್ನು ಕಡಿಮೆ ಬಜೆಟ್‌ನಲ್ಲಿ ಕಟ್ಟಿಕೊಟ್ಟಾರಾಯ್ತು, ಗ್ಯಾಪಲ್ಲಿ ಸಿನಿಮಾ ಹಿಟ್‌ 
ಆದರೆ ಬೇಜಾನ್‌ ಕಾಸು ಎಂಬ ಉಡಾಫೆಯಿಂದಲೋ ಅಥವಾ ಏನೋ ಒಂದು ಸಿನಿಮಾ ಮಾಡಿದ್ದೀವಿ 
ಎಂದು ಹೇಳಿಕೊಳ್ಳಬೇಕೆಂಬ ಜಂಭಕ್ಕೋ, ಹಳ್ಳಿ ಹಿನ್ನೆಲೆಯ ಸಿನಿಮಾಗಳು ಸ್ವಾಧ ಕಳೆದುಕೊಳ್ಳುತ್ತಿರುವುದಂತೂ ಸುಳ್ಳಲ್ಲ. 

– ರವಿಪ್ರಕಾಶ್ ರೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.