ಸೋಡ ಇಲ್ಲದ ಊಟವಿದ್ದಂತೆ!


Team Udayavani, Jul 6, 2018, 6:00 AM IST

u-22.jpg

“ಜನರು ಸೋಡ ಇಲ್ಲದ ಊಟವನ್ನೇ ಹುಡುಕಿ ಹೋಗುವುದು ಹೆಚ್ಚು. ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ, ಮನರಂಜನೆ ಮತ್ತು ಗಟ್ಟಿ ಕಥೆ ಇರುವ ಸಿನಿಮಾ ಹುಡುಕುವುದು ಹೆಚ್ಚು. ನಮ್ಮ ಚಿತ್ರ ಒಂದು ರೀತಿಯ ಸೋಡ ಇಲ್ಲದ ಊಟ ಇದ್ದಂಗೆ…’

– ಹೀಗೆ ಹೇಳಿದ್ದು ನಿರ್ದೇಶಕ ಕೆ.ಎಂ. ರಘು. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ಪರಸಂಗ’ ಚಿತ್ರದ ಕುರಿತು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಂಡ ರಘು, “ಇದು ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಚಿತ್ರ. ಪಕ್ಕಾ ಹಳ್ಳಿ ಸೊಗಡಿನ ರುಚಿ ಇಲ್ಲಿರಲಿದೆ. ಎಲ್ಲರ ಮನಕಲಕುವ ಚಿತ್ರಣ ಚಿತ್ರದ ಹೈಲೆಟ್‌. ನಂಬಿಕೆಯನ್ನು ಅನುಮಾನದಿಂದ ನೋಡಿದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಈ ಸಮಾಜಕ್ಕೆ ಮುಖ್ಯವಾಗಿ ಏನೆಲ್ಲಾ ಬೇಕು, ಸಮಾಜ ಹೇಗೆಲ್ಲಾ ಇದೆ ಎಂಬುದನ್ನು ಒಂದು ಹಳ್ಳಿಪರಿಸರದಲ್ಲಿ ಮನರಂಜನೆ ಜೊತೆಗೆ ಹೇಳಿದ್ದೇನೆ. ಇದು ಹಳ್ಳಿಯೊಂದರ ರಿಯಲ್‌ ತಿಮ್ಮನ ಕಥೆ. ಆ ಕಥೆ ಕೇಳಿ, ಸಿನಿಮಾ ಮಾಡಬೇಕೆನಿಸಿತು. ಆ ಪಾತ್ರಕ್ಕೆ ಮಿತ್ರ ಸರಿಹೊಂದುತ್ತಾರೆ ಅಂತ ಆಯ್ಕೆ ಮಾಡಿದ್ದು ಖುಷಿಕೊಟ್ಟಿದೆ. ಯಾಕೆಂದರೆ, ನನ್ನ ಕಲ್ಪನೆ ಮೀರಿ ನಟಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರ ಸಹಕಾರದಿಂದ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇಂತಹ ಚಿತ್ರಗಳಿಗೆ ನಿರ್ಮಾಪಕರ ಪ್ರೋತ್ಸಾಹವೂ ಇರಬೇಕು. ಕುಮಾರ್‌, ಲೋಕೇಶ್‌ ಮತ್ತು ಮಹದೇವೇಗೌಡ ಅವರು ಚಿತ್ರಕ್ಕೆ ಬೇಕಾದ್ದೆಲ್ಲ ಕೊಟ್ಟು ಒಂದೊಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಜನರು ಸೋಡ ಇಲ್ಲದ ಊಟ ಬಯಸುವಂತೆ, ಮನರಂಜನೆ ಮತ್ತು ಕಥೆ ಇರುವ ಚಿತ್ರ ನೋಡುವ ಮನಸ್ಸುಗಳಿಗೆ “ಪರಸಂಗ’ ಹೇಳಿಮಾಡಿಸಿದ ಚಿತ್ರ’ ಅಂದರು ನಿರ್ದೇಶಕ ರಘು.

“ಪರಸಂಗ’ ತಮ್ಮ ಬದುಕಿನ ಮತ್ತೂಂದು ದಿಕ್ಕು ಬದಲಿಸುವ ಚಿತ್ರ ಎಂದು ಮಾತಿಗಿಳಿದ ಮಿತ್ರ, “ನಾನಿಲ್ಲಿ ತಿಮ್ಮನ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ಮುಗ್ಧತೆ ಪಾತ್ರ. ನೋಡುಗರಿಗೆ ಕಣ್ಣಂಚಲ್ಲಿ ನೀರು ತುಂಬಿಸುವ ಕಥೆ ಇಲ್ಲಿದೆ. ಹಾಗಂತ ಮನರಂಜನೆ ಇಲ್ಲವೆಂದಲ್ಲ, ಅದಕ್ಕೂ ಜಾಗವಿದೆ. ಒಂದು ಸದಭಿರುಚಿಯ ಚಿತ್ರ ಇದಾಗಲಿದೆ. ಪಕ್ಕಾ ಹಳ್ಳಿ ಭಾಷೆಯ ಚಿತ್ರಣದೊಂದಿಗೆ ಆಪ್ತತೆ ಎನಿಸುವ ಚಿತ್ರ ಇದಾಗಲಿದೆ’ ಎಂದರು ಮಿತ್ರ.

ನಾಯಕಿ ಅಕ್ಷತಾಗೆ ಹೊಸಬಗೆಯ ಪಾತ್ರ ಸಿಕ್ಕ ಖುಷಿ. ನಾಯಕ ಮನೋಜ್‌ಗೆ ಇದು ಹೊಸದೊಂದು ಇಮೇಜ್‌ ತಂದುಕೊಡುವ ಚಿತ್ರವಂತೆ. ನಿರ್ಮಾಪಕರಾದ ಕುಮಾರ್‌, ಲೋಕೇಶ್‌, ಮಹದೇವೇಗೌಡ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ. ಛಾಯಾಗ್ರಾಹಕ ಸುಜಯ್‌ಕುಮಾರ್‌ಗೆ ಇಲ್ಲಿ ಹಳ್ಳಿಯ ಪರಿಸರವನ್ನು ತೋರಿಸಿರುವುದೇ ಚಾಲೆಂಜ್‌ ಅಂತೆ. ಸಂಗೀತ ನಿರ್ದೇಶಕ ಹರ್ಷವರ್ಧನ್‌ ರಾಜ್‌ಗೆ ಇದು ಮೊದಲ ಚಿತ್ರ. ವಿತರಕ ದೀಪಕ್‌ ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.