ಚಲ ಮತ್ತು ಛಲ


Team Udayavani, Mar 16, 2018, 8:15 AM IST

a-22.jpg

“ಈ ಚಿತ್ರವನ್ನು ಯೋಗಿ ಮಾಡಬೇಕಿತ್ತು. ಕಥೆ ಹೇಳಿದ್ದೆ, ಟೈಟಲ್ಲೂ ಫಿಕ್ಸ್‌ ಆಗಿತ್ತು. ಆದರೆ, ಅವರು ಮಾಡಲ್ಲ ಅಂತ ಹೇಳಿ, ನನ್ನ
ಟೈಟಲ್ಲನ್ನೇ ಇಟ್ಟುಕೊಂಡು ಬೇರೆ ಚಿತ್ರ ಮಾಡೋಕೆ ಮುಂದಾದರು.

ಮೊದಲೇ ಕೇಳಿದ್ದರೆ, ನಾನೇ ಕೊಡುತ್ತಿದ್ದೆ, ಟೈಟಲ್‌ಗಾಗಿ ಕೋರ್ಟ್‌ಗೆ ಹೋಗುತ್ತಿರಲಿಲ್ಲ. ನನ್ನ ಕಾನ್ಸೆಪ್ಟ್ಗೆ ಈ ಟೈಟಲ್‌ ಬೇಕಿತ್ತು. ಹಾಗಾಗಿ ನಾನು ಇದಕ್ಕಾಗಿಯೇ ವರ್ಷಗಟ್ಟಲೆ ಕಾದೆ…’ – ಹೀಗೆ ಒಂದೇ ಸಮನೆ ಹೇಳುತ್ತಾ ಹೋದರು ನಿರ್ದೇಶಕ ಚಲ. ಅವರು
ಹೇಳಿದ್ದು, “ದುನಿಯಾ 2′ ಶೀರ್ಷಿಕೆ ವಿವಾದ ಕುರಿತು. ಯೋಗಿ ಮಾಡುವ ಚಿತ್ರಕ್ಕೆ ಇದೇ ಶೀರ್ಷಿಕೆ ಇತ್ತು. ಚಲ ಅವರು ತಮ್ಮ ಛಲ ಬಿಡದೆ ಶೀರ್ಷಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ಬಿಡುಗಡೆಯೂ ಆಗಿದೆ. ಮೊದಲ ಪತ್ರಿಕಾಗೋಷ್ಠಿಗೆ ತಮ್ಮ ತಂಡದ ಜತೆ ಆಗಮಿಸಿದ್ದರು ಚಲ. ಅಂದು ಅವರು ಹೇಳಿದ್ದಿಷ್ಟು.

“ನನಗಿದು ಮೂರನೇ ಚಿತ್ರ. “ಅಂದವಾದ’, “ನಾನು ನಮ್‌ ಹುಡುಗಿ ಖರ್ಚಿಗೊಂದ್‌ ಮಾvಯಾ’ ಚಿತ್ರ ಬಳಿಕ “ದುನಿಯಾ
2′ ಮಾಡುತ್ತಿದ್ದೇನೆ. ಈ ಹಿಂದೆ ಯೋಗಿ ಆವರಿಗೆ “ಝಂಡ’ ಎಂಬ ಚಿತ್ರ ಶುರುಮಾಡಿದ್ದೆ. ಆ ನಿರ್ಮಾಪಕರು ನಿಧನರಾದ ಹಿನ್ನೆಲೆಯಲ್ಲಿ, ಯೋಗಿ ಅವರಿಗೆ ಈ ಕಥೆ ಹೇಳಿದ್ದೆ. ಅವರೂ ಒಪ್ಪಿದ್ದರು. ಆದರೆ, ಮಾಡಲಿಲ್ಲ. ನಾನು ಇದನ್ನು ಬೇರೆಯವರಿಗೆ ಮಾಡಲು ಮುಂದಾದೆ. ನನ್ನ ಕಥೆಗೆ ಈ ಟೈಟಲ್‌ ಸೂಕ್ತವಾಗಿತ್ತು ಎಂಬ ಕಾರಣಕ್ಕೆ ಇಟ್ಟುಕೊಂಡೆ. ಈ ಚಿತ್ರಕ್ಕೆ ನಾಲ್ಕು ದಿನಗಳ ಕಾಲ ಚಿತ್ರೀಕರಣವಾಗಿದೆ. ಯುಗಾದಿ ಬಳಿಕ ಪುನಃ ಶುರುವಾಗಲಿದೆ. ಇದು ಪಕ್ಕಾ ಲವ್‌ಸ್ಟೋರಿ. ಒಬ್ಬ ಗ್ಯಾರೇಜ್‌ ಹುಡುಗ, ಒಬ್ಬ ಗಾರ್ಮೆಂಟ್ಸ್‌ ಹುಡುಗಿ ನಡುವಿನ ಲವ್‌ಸ್ಟೋರಿ ಇಲ್ಲಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಅಂಶಗಳು ಚಿತ್ರದ ಹೈಲೆಟ್‌. ಇದು “ದುನಿಯಾ’ ಚಿತ್ರದ ಶೇಡ್‌ ಇರುವ ಚಿತ್ರವಲ್ಲ. ಮೇಕಿಂಗ್‌ ಆ ರೀತಿ ಇರಲಿದೆಯಷ್ಟೇ. ರಾಜಕೀಯ, ರೌಡಿಸಂ, ಅಂಡರ್‌ವರ್ಲ್ಡ್ ಇವೆಲ್ಲವೂ ಇದೆ.

ಕಳೆದ ಒಂದುವರೆ ವರ್ಷದ ತಯಾರಿ ಮಾಡಿಕೊಂಡಿದ್ದೇನೆ’ ಎಂದರು ಚಲ. ಈ ಚಿತ್ರಕ್ಕೆ ರಾಜಯ್‌ ಹೀರೋ. ಈ ಹಿಂದೆ ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದು ಬಿಟ್ಟರೆ, ಈ ಚಿತ್ರಕ್ಕೆ ಈಗ ಹೀರೋ ಆಗಿದ್ದಾರೆ. “ಒಂದು ದಿನ ನಿರ್ದೇಶಕರು ಬಂದು, ಫೈಟ್‌
ಬರುತ್ತಾ ಅಂದ್ರು. ಸ್ವಲ್ಪ ಬರುತ್ತೆ ಅಂದೆ. ಪೂರ್ಣ ಕಲಿತುಕೋ ಅಂದ್ರು, ರವಿ ಜಮಖಂಡಿ, ಹರಿ ಮಾಸ್ಟರ್‌ ಬಳಿ ಜಿಮ್ನಾಸ್ಟಿಕ್‌, ಕುಂಫ‌ು ಕಲಿತೆ. ಒಂದುವರೆ ವರ್ಷ ಬಳಿಕ ನಿರ್ದೇಶಕರು ನೀನೇ ಹೀರೋ ಅಂದ್ರು. ಕಥೆ ಕೇಳಿಲ್ಲ. ಒಳ್ಳೆಯ ಚಿತ್ರ ಆಗುವ ನಂಬಿಕೆ ಇದೆ’
ಎಂದರು ರಾಜಯ್‌.

ಹರಿಣಿ ಇಲ್ಲಿ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅವರದು ತುಂಬ ಎಮೋಷನಲ್‌ ಪಾತ್ರವಂತೆ. ಶುರುವಿನಿಂದ, ಕೊನೆಯವರೆಗೂ ಅವರು ಇರಲಿದ್ದಾರಂತೆ. ಅದು ಹೇಗೆ ಎಂಬುದು ಚಿತ್ರ ನೋಡಬೇಕು ಅಂದರು ಹರಿಣಿ. ಚಿತ್ರಕ್ಕೆ ನಾಯಕಿ ಆಯ್ಕೆ ಆಗಿಲ್ಲ. ಉತ್ಪಲ್‌ ಕುಮಾರ್‌ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಇನ್ನಷ್ಟು ಪಾತ್ರಗಳ ಆಯ್ಕೆ ಆಗಬೇಕಿದೆ.
ನಿರ್ಮಾಪಕ ಕೃಷ್ಣರಾಜ್‌ ಅವರಿಗೆ ಮೊದಲ ಚಿತ್ರ. ಒಳ್ಳೆಯ ಕಥೆಗೆ ಹುಡುಕಾಟ ನಡೆಸಿದ್ದರಂತೆ. ಚಲ ಅವರ ಕಥೆ ಕೇಳಿ, ಫಿಕ್ಸ್‌ ಆದರಂತೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.