ದೋಸ್ತಿಯ ಹಾಡಿಗೆ ಪವರ್ ಸಾಥ್

ಮುಂದುವರೆದಿದೆ ಗಂಗಾಧರ್‌ ಮೋಹನ್‌ ಕಾಂಬಿನೇಶನ್‌

Team Udayavani, Nov 15, 2019, 5:49 AM IST

ff-34

ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು “ಜಿಗ್ರಿ ದೋಸ್ತ್’. ಈ ಚಿತ್ರವನ್ನು ಗಂಗಾಧರ್‌ ನಿರ್ಮಿಸಿದ್ದಾರೆ. ಹೊಸಬರನ್ನೇ ಹಾಕಿ ಮಾಡಿರುವ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ನಿರ್ಮಾಪಕರು ಪತ್ರಕರ್ತರನ್ನು ಆಹ್ವಾನಿಸಿದ್ದರು. ಅಂದಿನ ಮುಖ್ಯ ಆಕರ್ಷಣೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಪುನೀತ್‌ ರಾಜಕುಮಾರ್‌. ಅವರ ಸಮ್ಮುಖದಲ್ಲೇ ಟ್ರೇಲರ್‌, ಸಾಂಗ್‌ ಬಿಡುಗಡೆಯಾದ ಬಳಿಕ ನಿರ್ದೇಶಕ ಮೋಹನ್‌ ಮಾತಿಗಿಳಿದರು.

“ಚಿತ್ರದ ಶೀರ್ಷಿಕಗೆ ಬಗ್ಗೆ ಹೇಳುವುದಾದರೆ, ಜೇಬಲ್ಲಿ ಹಣ ಇದ್ದಾಗ ಇರುವ ಕೆಲವು ಸ್ನೇಹಿತರು, ಹಣ ಇಲ್ಲದಿರುವಾಗ ಇರುವುದಿಲ್ಲ. ಅಂತಹ ಗೆಳೆಯರನ್ನು ಸಂಪಾದಿಸುವುದಕ್ಕಿಂತ ಒಬ್ಬ ಜಿಗ್ರಿದೋಸ್ತ್ನನ್ನು ಸಂಪಾದಿಸಿದರೆ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದು ಚಿತ್ರದ ಒನ್‌ಲೈನ್‌. ಚಿತ್ರದಲ್ಲಿ ಸ್ಕಂದ ಅಶೋಕ್‌ ಲಾಯರ್‌ ಪಾತ್ರ ಮಾಡಿದರೆ, ಚೇತನ್‌ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದಾರೆ. ಸುಷ್ಮಾ, ಅಕ್ಷತಾ ನಾಯಕಿಯರಾಗಿದ್ದಾರೆ. ಚಿತ್ಕಲ ಅವರು ತಾಯಿ ಪಾತ್ರ ಮಾಡಿದ್ದಾರೆ. ಇಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಜಡ್ಜ್ ಪಾತ್ರ ಮಾಡಿದ್ದಾರೆ. ಅವರೂ ಕಾನೂನು ಓದಿದವರು. ಹಾಗಾಗಿ, ಪಾತ್ರವನ್ನು ನೀಟ್‌ ಆಗಿ ನಿರ್ವಹಿಸಿದ್ದಾರೆ. ಇನ್ನು, ನಿರ್ಮಾಪಕ ಗಂಗಾಧರ್‌ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ಮನೆ ಕೂಸು ಇದ್ದಂಗೆ ನಾನು. ಅವರ ಜೊತೆ ಯಾವಾಗಲೂ ಒಂದೊಂದು ಕೆಲಸ ನಡೆಯುತ್ತಲೇ ಇರುತ್ತದೆ. ಇಷ್ಟರಲ್ಲೆ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹಿಸಿ’ ಎಂದರು ಮೋಹನ್‌.

ಅಂದು ಪುನೀತ್‌ ಆ ಕಾರ್ಯಕ್ರಮಕ್ಕೆ ಬರಲು ಕಾರಣದ ಬಗ್ಗೆ ಹೇಳಿದರು. “ನಾನು ಬರೋಕೆ ಕಾರಣ, ನಿರ್ಮಾಪಕ ಗಂಗಾಧರ್‌ ಅವರು. ಅವರು ನಮ್ಮ ಕುಟುಂಬಕ್ಕೆ ಹತ್ತಿರವಾದವರು. ನಮ್ಮ ತಾಯಿಗೆ ಚಿಕ್ಕ ಕೆಲಸವಿದ್ದರೂ ಗಂಗಾಧರ್‌ ನಮ್ಮ ಕಚೇರಿಗೆ ಬರುತ್ತಿದ್ದರು. ಆ ಅಭಿಮಾನಕ್ಕೆ ಬಂದಿದ್ದೇನೆ. ಅವರು 27 ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಪೈಕಿ ಎಲ್ಲವೂ ಒಳ್ಳೆಯ ಚಿತ್ರಗಳೇ ಎಂಬುದು ವಿಶೇಷ. ಚಿತ್ರಕ್ಕೆ ಯಶಸ್ಸು ಬರಲಿ. ಹೊಸಬರಿಗೆ ಗೆಲುವು ಸಿಗಲಿ’ ಎಂಬುದು ಪುನೀತ್‌ ಮಾತು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಲ್ಲಿ ಮಾಡಿರುವ ಜಡ್ಜ್ ಪಾತ್ರ ಬಗ್ಗೆ ಹೇಳಿಕೊಂಡರು. “ನನಗೂ ಸಿನಿಮಾ ಆಸೆ ಇತ್ತು. ಆದರೆ, ಮಾಡಲು ಆಗಿರಲಿಲ್ಲ. 40 ವರ್ಷದ ಬಳಿಕ ನಟಿಸಿದ ಖುಷಿ ಇದೆ. ಚಿತ್ರ ಬಿಡುಗಡೆಯಾಗಿ, ಎಲ್ಲರೂ ನೋಡುವಂತಾಗಲಿ’ ಎಂದರು ಜಯಚಂದ್ರ.

ಲಹರಿ ವೇಲು ಅವರಿಗೆ, ಗಂಗಾಧರ್‌ ಬ್ಯಾನರ್‌ನ ಸಿನಿಮಾಗಳ ಬಗ್ಗೆ ಹೆಮ್ಮೆ ಇದೆಯಂತೆ. “27 ಸಿನಿಮಾ ನಿರ್ಮಾಣ ಸುಲಭವಲ್ಲ. ಗಂಗಾಧರ್‌ ಆ ಕೆಲಸ ಮಾಡಿದ್ದಾರೆ. “ಅಂಜದ ಗಂಡು’ ಚಿತ್ರಕ್ಕೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೆ. ಆ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಬಳಿಕ ಅವರ ಅನೇಕ ಚಿತ್ರಗಳ ಹಾಡು ಹಕ್ಕು ಖರಿದಿಸಿದ್ದೇವೆ’ ಎಂದರು ವೇಲು.

ನಾಯಕ ಚೇತನ್‌ ಅವರಿಗೆ ಇಲ್ಲೊಂದು ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. “ಚಿತ್ರ ನೋಡಿದವರಿಗೆ ಗೆಳೆತನ ಹೇಗಿರಬೇಕು ಎಂಬುದು ಗೊತ್ತಾಗುತ್ತೆ. ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ನಾನು ಥ್ಯಾಂಕ್ಸ್‌ ಹೇಳ್ತೀನಿ’ ಎಂದರು ಚೇತನ್‌. ಅಂದು ನಿರ್ಮಾಪಕ ಗಂಗಾಧರ್‌, ಸಂಗೀತ ನಿರ್ದೇಶಕ ದಿನೇಶ್‌ ಕುಮಾರ್‌ ಸಿನಿಮಾ ಕುರಿತು ಮಾತನಾಡಿದರು. ಸುಷ್ಮಾ, ಅಕ್ಷತಾ, ಚಿತ್ಕಲ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.