ತ್ರಿವಿಕ್ರಮಾದಿತ್ಯ; ಸಹನಾಮೂರ್ತಿ ಹೆಗಲಿಗೆ ರವಿಚಂದ್ರನ್‌ ಮಗನ ಭಾರ


Team Udayavani, Aug 16, 2019, 5:49 AM IST

q-37

ಮೊದಲ ಚಿತ್ರದ ಮೂಲಕ ಹೀರೋ ಆಗುತ್ತಿದ್ದೇನೆ ಅಂದಮೇಲೆ ಸಹಜವಾಗಿಯೇ ಆ ಖುಷಿ ಹೆಚ್ಚು. ವಿಕ್ರಮ್‌ ರವಿಚಂದ್ರನ್‌ ಅವರಿಗೂ ಆ ಸಂಭ್ರಮ ದುಪ್ಪಟ್ಟಾಗಿದೆ. ‘ತ್ರಿವಿಕ್ರಮ’ ಚಿತ್ರದ ಮೂಲಕ ವಿಕ್ರಮ್‌ ಹೀರೋ ಆಗಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಟೀಸರ್‌ ಬಿಡುಗಡೆ ವೇಳೆ ವಿಕ್ರಮ್‌ ಸಂತಸಕ್ಕೆ ಪಾರವೇ ಇರಲಿಲ್ಲ. ಅಂದು ವೇದಿಕೆ ಏರಿದ ವಿಕ್ರಮ್‌, ತಮ್ಮ ಮೊದಲ ಚಿತ್ರದ ಬಗ್ಗೆ, ತಯಾರಿ ಮಾಡಿಕೊಂಡ ಪರಿ, ಅಪ್ಪನ ಸಲಹೆ, ಸೂಚನೆ ಇತ್ಯಾದಿ ಕುರಿತು ಹೇಳಿದ್ದಿಷ್ಟು.

‘ನನ್ನ ಅಪ್ಪನಿಗೆ ಗೊತ್ತಿತ್ತು. ನಾನು ಹೀರೋನೇ ಆಗ್ತೀನಿ ಅಂತ. ಸೋ, ಈಗ ಹೀರೋ ಆಗಿದ್ದೇನೆ. ನಿಜಕ್ಕೂ ನಾನೀಗ ಏನನ್ನೂ ಮಾತಾಡೋಕೆ ಆಗುತ್ತಿಲ್ಲ. ಇಂಥದ್ದೊಂದು ಅದ್ಭುತ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ಥ್ಯಾಂಕ್ಸ್‌ ಹೇಳ್ತೀನಿ. ಫ‌ಸ್ಟ್‌ಲುಕ್‌ ನೋಡಿದ ಎಲ್ಲರೂ, ‘ಪ್ರೇಮಲೋಕ’ ‘ರಣಧೀರ’ ಚಿತ್ರಗಳು ನೆನಪಾಗುತ್ತವೆ. ಆ ಬೈಕು, ಅದರ ಮೇಲೆ ಸ್ಟೈಲ್ ಆಗಿ ಕುಳಿತು, ಕೈಯೊಂದನ್ನು ಮೇಲೆತ್ತಿ ಒಂದೇ ಬೆರಳು ತೋರಿಸುವ ರೀತಿ ನೋಡಿದರೆ, ನಂಬರ್‌ ಒನ್‌ ಎಂಬುದನ್ನು ಸೂಚಿಸುತ್ತದೆಯಲ್ಲಾ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾರೆ. ರವಿಚಂದ್ರನ್‌ ಮಗ ಅಂದಾಕ್ಷಣ, ನಂಬರ್‌ ಒನ್‌ ಆಲ್ವಾ?’ ಎನ್ನುವ ವಿಕ್ರಮ್‌, ‘ಡ್ಯಾಡಿ ಅವರ ಸಿಗ್ನೇಚರ್‌ ಬಳಸಬೇಕಿತ್ತು. ಅದು ಬ್ಲಿಡ್‌ನ‌ಲ್ಲೇ ಇದೆ. ಅದೊಂದು ಪ್ರಯತ್ನವಾಗಿದೆಯಷ್ಟೇ. ಡ್ಯಾಡಿ ಯಾವತ್ತೂ ಒಂದು ಮಾತು ಹೇಳ್ಳೋರು. ‘ನಿನಗೆ ಅಂತ ಒಂದು ಸ್ಟೈಲ್ ಇರಬೇಕು’ ಅಂತ. ಅದಿಲ್ಲಿ ಸಿಂಕ್‌ ಆಗಿದೆ. ಪ್ರಯತ್ನ ಮಾಡಿದ್ದು ವರ್ಕೌಟ್ ಆಗಿದೆಯಷ್ಟೆ. ಇನ್ನು, ನನ್ನ ಸಹೋದರ ಮನೋರಂಜನ್‌ ನನಗೆ ಬೆನ್ನೆಲುಬು ಇದ್ದಂತೆ. ನನ್ನ ಶಕ್ತಿ ಕೂಡ ಅವರೇ. ಪ್ರತಿ ಹೆಜ್ಜೆಯಲ್ಲಿ ಅಣ್ಣನ ಸಹಕಾರ, ಪ್ರೋತ್ಸಾಹವಿದೆ’ ಎಂದರು ವಿಕ್ರಮ್‌.

ಇನ್ನು, ‘ತ್ರಿವಿಕ್ರಮ’ ಚಿತ್ರದ ಮೂಲಕ ವಿಕ್ರಮ್‌ ರವಿಚಂದ್ರನ್‌ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ಸಹನಾಮೂರ್ತಿ ಅವರಿಗೂ ಅಂದು ಖುಷಿಗೆ ಪಾರವಿರಲಿಲ್ಲ. ಚಿತ್ರದ ಬಗ್ಗೆ ಹೇಳಿಕೊಂಡ ಸಹನಾಮೂರ್ತಿ, ‘ನಾನು ರವಿಚಂದ್ರನ್‌ ಅವರ ಅಪ್ಪಟ ಅಭಿಮಾನಿ. ಕನಸುಗಾರನ ಜೊತೆ ಸಿನಿಮಾ ಮಾಡಲು ಆಗಿಲ್ಲ. ಆದರೆ, ಕನಸುಗಾರನ ಕನಸು ಮಗನ ಜೊತೆ ಮಾಡುತ್ತಿದ್ದೇನೆ ಎಂಬ ಖುಷಿ ಇದೆ. ಈಗಾಗಲೇ ಟೀಸರ್‌ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇವತ್ತು ಕನ್ನಡದಲ್ಲಿ ಯಾವುದೇ ಲವ್‌ಸ್ಟೋರಿ ಚಿತ್ರವಾದರೂ ರವಿಚಂದ್ರನ್‌ ಸ್ಫೂರ್ತಿಯಾಗುತ್ತಾರೆ. ನಾನು ಮೊದಲು ಕಥೆ ಮಾಡಬೇಕಾದರೆ, ಇವರೇ ಹೀರೋ ಅಂತ ಪ್ಲಾನ್‌ ಮಾಡಿರಲಿಲ್ಲ. ಕಥೆ ಆದ ಮೇಲೆ ಒಂದು ಫೀಲ್ ಇತ್ತು. ಹೊಸಬರನ್ನು ಹುಡುಕುತ್ತಲೇ, ವಿಕ್ರಮ್‌ ಅವರನ್ನು ಗಮನಿಸುತ್ತಿದ್ದೆ. ಅವರ ಕೆಲ ವಿಡಿಯೋ ತುಣುಕು ನೋಡಿದ್ದೆ. ನಮ್ಮ ಕಥೆ, ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬ ನಂಬಿಕೆ ಇತ್ತು. ಭೇಟಿ ಮಾಡಿ, ಕಥೆ ಹೇಳಿದೆ. ಎಲ್ಲವೂ ಓಕೆ ಆಯ್ತು. ಇನ್ನು, ‘ತ್ರಿವಿಕ್ರಮ’ ಶೀರ್ಷಿಕೆಯೇ ಯಾಕೆ ಅಂದರೆ, ಸೋಲು ಇಲ್ಲದವನು ತ್ರಿವಿಕ್ರಮ ಎಂದರ್ಥ. ನಮ್ಮ ಚಿತ್ರದ ಹೀರೋ ಕೂಡ ಇಲ್ಲಿ ಸೋಲಿಲ್ಲದವನು. ಹಾಗಾಗಿ ಆ ಶೀರ್ಷಿಕೆ ಇಡಲಾಗಿದೆ. ಇದೊಂದು ಹೈ ವೋಲೆrೕಜ್‌ ಲವ್‌ಸ್ಟೋರಿ. ಎಲ್ಲೋ ಒಂದು ಕಡೆ ರವಿಸರ್‌ಗೆ ಭಯ ಇರಬಹುದು. ಹೇಗೆ ಮಗನನ್ನು ತೋರಿಸುತ್ತಾರೋ ಎಂಬ ಕುತೂಹಲವಿರಬಹುದು. ನಾನು ಒಳ್ಳೆಯ ಚಿತ್ರ ಮಾಡಿ ರವಿಸರ್‌ ಕಡೆಯಿಂದ ನಾನು ಫ‌ಸ್ಟ್‌ರ್‍ಯಾಂಕ್‌ ತಗೋತ್ತೀನಿ’ ಎಂದರು ಸಹನಾಮೂರ್ತಿ.

ಅಂದು ನಿರ್ಮಾಪಕದ್ವಯರಾದ ಸೋಮಣ್ಣ, ಸುರೇಶ್‌, ಮನೋರಂಜನ್‌, ರವಿಚಂದ್ರನ್‌ ಪತ್ನಿ ಸುಮತಿ, ಪುತ್ರಿ ಅಂಜು ಮತ್ತು ಅಳಿಯ ಸೇರಿದಂತೆ ಅನೇಕರಿದ್ದರು. ನಾಯಕಿ ಆಕಾಂಕ್ಷಾ , ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಇತರರು ಇದ್ದರು.

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.