ರೀಮೇಕ್‌ ಕವಚ


Team Udayavani, Dec 1, 2017, 12:05 PM IST

01-29.jpg

“ಈ ಪಾತ್ರ ನನಗೆ ತುಂಬಾ ಹೊಸದು. ನಾನು ಕೂಡಾ ಎಕ್ಸೆ„ಟ್‌ ಆಗಿದ್ದೀನಿ …’
ಹೀಗೆಂದರು ಶಿವರಾಜಕುಮಾರ್‌. ಇಲ್ಲಿವರೆಗೆ 110ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಶಿವರಾಜಕುಮಾರ್‌ ಅವರು
ಮಾಡಿರದಂತಹ ಪಾತ್ರ ಯಾವುದು, ಯಾವ ಪಾತ್ರ ಅವರ ಎಕ್ಸೆ„ಟ್‌ಮೆಂಟ್‌ಗೆ ಕಾರಣವಾಗಿದೆ ಎಂದು ನೀವು ಕೇಳಿದರೆ
ಅದು ಅಂಧನ ಪಾತ್ರ. ಹೌದು, ಶಿವರಾಜಕುಮಾರ್‌ “ಕವಚ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಅವರು ಅಂಧನ ಪಾತ್ರ ಮಾಡುತ್ತಿದ್ದಾರೆ. ತಮ್ಮ ಇಷ್ಟು ವರ್ಷದ ಕೆರಿಯರ್‌ನಲ್ಲಿ ಶಿವಣ್ಣ ಈ ತರಹದ ಪಾತ್ರ ಮಾಡಿಲ್ಲ. ಮೊದಲ ಬಾರಿಗೆ ಮಾಡುತ್ತಿರುವುದರಿಂದ ಸಹಜವಾಗಿಯೇ ಎಕ್ಸೆ„ಟ್‌ ಆಗಿದ್ದಾರೆ. ಈ ಪಾತ್ರಕ್ಕಾಗಿ ಒಂದಷ್ಟು ತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರೆ. ಅಂಧರ ಮ್ಯಾನರೀಸಂ ಯಾವ ರೀತಿ ಇರುತ್ತದೆ ಎಂಬುದನ್ನು ಶಿವಣ್ಣ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಅಂದಹಾಗೆ, ಇದು ಮಲಯಾಳಂನ “ಒಪ್ಪಂ’ ಚಿತ್ರದ ರೀಮೇಕ್‌. ಅಲ್ಲಿನ “ಒಪ್ಪಂ’ ಇಲ್ಲಿ “ಕವಚ’ ಆಗಿದೆ. ವಿಶೇಷವೆಂದರೆ ಸುಮಾರು 15 ವರ್ಷಗಳ ನಂತರ ಶಿವರಾಜಕುಮಾರ್‌ ರೀಮೇಕ್‌ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗ ಈ ಸಿನಿಮಾವನ್ನು ರೀಮೇಕ್‌ ಮಾಡಲು ಕಾರಣವೇನೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕಥೆ. ಶಿವರಾಜಕುಮಾರ್‌ ಅವರಿಗೆ “ಒಪ್ಪಂ’ ಚಿತ್ರ ತುಂಬಾ
ಇಷ್ಟವಾಯಿತಂತೆ. ಅದರಲ್ಲಿನ ಮೋಹನ್‌ ಲಾಲ್‌ ಅವರ ಅಭಿನಯ ಖುಷಿಕೊಟ್ಟಿತಂತೆ. “15 ವರ್ಷಗಳಿಂದ ಯಾವುದೇ ರೀಮೇಕ್‌ ಮಾಡಿರಲಿಲ್ಲ. ಈ ಸಿನಿಮಾ ಮಾಡಲು ಕಾರಣ ಕಥೆ ಹಾಗೂ ಪಾತ್ರ. ಒಬ್ಬ ಅಂಧ ತನ್ನ ಕುಟುಂಬ ಉಳಿಸಲು ಏನೆಲ್ಲಾ ಮಾಡುತ್ತಾನೆ ಎಂಬ ಲೈನ್‌ ನನಗೆ ತುಂಬಾ ಇಷ್ಟವಾಯಿತು’ ಎಂದು ತಾವು ರೀಮೇಕ್‌ ಒಪ್ಪಿಕೊಂಡ ಬಗ್ಗೆ ಹೇಳುತ್ತಾರೆ. ಚಿತ್ರದ ಪಾತ್ರದ ಬಗ್ಗೆಯೂ
ಶಿವಣ್ಣ ಮಾತನಾಡುತ್ತಾರೆ. “ಇಲ್ಲಿ ನಾನು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಂಧನ ಪಾತ್ರ ಕೂಡಾ ನನಗೆ ಮೊದಲು. ಈ ತರಹದ ಸವಾಲಿನ ಪಾತ್ರ ಮಾಡೋದು ಖುಷಿ. ಮೋಹನ್‌ ಲಾಲ್‌ ಮಟ್ಟಕ್ಕೆ ನಟಿಸುತ್ತೇನೋ ಗೊತ್ತಿಲ್ಲ, ಆದರೆ, ಶೇ. 60ರಷ್ಟಾದರೂ ನ್ಯಾಯ ಒದಗಿಸುತ್ತೇನೆ. ಈ ಪಾತ್ರಕ್ಕಾಗಿ ಮ್ಯಾನರೀಸಂ ಕೂಡಾ ಬದಲಾಗಬೇಕಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಜೀವ ತುಂಬಲು ಪ್ರಯತ್ನಿಸುತ್ತೇನೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ.

ಮತ್ತೆ ರೀಮೇಕ್‌ ಮಾಡುತ್ತಿರುವ ಶಿವಣ್ಣ ಮುಂದಿನ ದಿನಗಳಲ್ಲಿ ರೀಮೇಕ್‌ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂದು ನೀವು ಕೇಳಬಹುದು. “ನಟಿಸುತ್ತೇನೆ, ಆದರೆ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ ಅಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “ನನಗೆ ತುಂಬಾ ಇಷ್ಟವಾದ, ಮನಸ್ಸಿಗೆ ಹತ್ತಿರವಾದ ಕಥೆಯನ್ನಷ್ಟೇ ರೀಮೇಕ್‌ ಮಾಡುತ್ತೇನೆ. ಅದು ಬಿಟ್ಟು ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳನ್ನು ರೀಮೇಕ್‌ ಮಾಡಲ್ಲ. “ಒಪ್ಪಂ’ ತರಹದ ಕಥೆಗಳು ಇಷ್ಟವಾಗಿ, ಆ ಪಾತ್ರ ಮಾಡಬೇಕೆಂಬ ಆಸೆ ನನಗೆ ಬಂದರೆ ಮಾತ್ರ ಮಾಡುತ್ತೇನೆ’  ಎಂದು ಸ್ಪಷ್ಟಪಡಿಸುತ್ತಾರೆ. 

ಈ ಚಿತ್ರವನ್ನು ಜಿ.ವಿ.ಆರ್‌. ವಾಸು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ 
ಅವರು, ಶಿವರಾಜಕುಮಾರ್‌ ಅವರಿಗೆ ಸಿನಿಮಾ ಮಾಡಬೇಕೆಂದು ಅವತ್ತೇ ಅಂದುಕೊಂಡಿದ್ದರಂತೆ. ಈಗ ಆ ಅವಕಾಶ ಸಿಕ್ಕ ಖುಷಿಯನ್ನು ಹಂಚಿಕೊಂಡರೇ ಹೊರತು ಸಿನಿಮಾ ಬಗ್ಗೆ ಮಾತನಾಡಲಿಲ್ಲ. ಚಿತ್ರವನ್ನು ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಕೃತಿಕಾ ನಾಯಕಿಯಾಗಿ ನಟಿಸಿದರೆ, ಇಶಾ ಕೊಪ್ಪಿಕರ್‌ ಇಲ್ಲಿ ಪೊಲೀಸ್‌ ಆಫಿಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ವಸಿಷ್ಠ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.