ಕಥೆ ಇಷ್ಟವಾದರಷ್ಟೇ ರೀಮೇಕ್‌: ಶಿವಣ್ಣ

ಭಾವ ಕವಚ

Team Udayavani, Mar 29, 2019, 6:00 AM IST

28

“ಅಂಧನಾಗಿ ಪಾತ್ರ ಮಾಡುವಾಗ ಕಣ್ಣಿಲ್ಲದವರೇ ಗ್ರೇಟ್‌ ಅನಿಸಿ ಬಿಡ್ತು’
– ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಶಿವರಾಜಕುಮಾರ್‌. ಅಂಧರ ಬಗ್ಗೆ ಶಿವಣ್ಣ ಮಾತನಾಡಲು ಕಾರಣ “ಕವಚ’ ಚಿತ್ರ. ಶಿವರಾಜಕುಮಾರ್‌ “ಕವಚ’ ಚಿತ್ರದಲ್ಲಿ ನಟಿಸಿರೋದು ನಿಮಗೆ ಗೊತ್ತೇ ಇದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಅವರು ಅಂಧನಾಗಿ ನಟಿಸಿದ್ದಾರೆ. ಈ ಪಾತ್ರ ಮಾಡುವಾಗ ಶಿವಣ್ಣ ತುಂಬಾ ಭಾವುಕರಾದರಂತೆ. “ಅಪ್ಪಾಜಿ ಹೋಗುವಾಗ ನೇತ್ರದಾನ ಮಹಾದಾನ ಅಂತಾ ಇಬ್ಬರಿಗೆ ಕಣ್ಣು ಕೊಟ್ಟು ಹೋದರು, ಆ ಎಮೋಶನ್‌, ಕಮಿಟ್‌ಮೆಂಟ್‌ ಈ ಪಾತ್ರದಲ್ಲಿದೆ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, “ಚಿತ್ರದಲ್ಲಿ ಮಗು ಪಾತ್ರ ಮಾಡಿರುವ ಮೀನಾಕ್ಷಿಯ ಅಭಿನಯವನ್ನೂ ನೋಡಿ ಕಲಿತಿದ್ದೀನಿ. ಎಲ್ಲರೂ ರಾಜಕುಮಾರ್‌, ರಜನೀಕಾಂತ್‌, ಅಮಿತಾಬಚ್ಚನ್‌ ಆಗಲಿಕ್ಕಾಗಲ್ಲ. 33 ವರ್ಷಗಳಿಂದ ಜನ ನನ್ನ ಸಿನಿಮಾ ನೋಡುತ್ತಿದ್ದರೂ, ಈಗಲೂ ನನ್ನ ಸಿನಿಮಾ ನೋಡಬೇಕು ಎಂದು ಬಯಸುತ್ತಾರಲ್ಲ ಅದೇ ನನ್ನ ಪುಣ್ಯ’ ಎಂದರು.

ಈ ಚಿತ್ರದಲ್ಲಿ ಅಂಧನ ಪಾತ್ರಕ್ಕಾಗಿ ಶಿವರಾಜಕುಮಾರ್‌ ಅವರಿಗೆ ಅಂಧರ ಶಾಲೆಯ ಶಿಕ್ಷಕರು 2-3 ದಿನ ಅಂಧರು ಸ್ಟಿಕ್‌ ಬಳಸುವುದು, ಕಣ್ಣು ಗುಡ್ಡೆ ಮೇಲೆ ಮಾಡುವುದನ್ನು ಹೇಳಿಕೊಟ್ಟರಂತೆ. “ಕಣ್ಣು ಗುಡ್ಡೆ ಮೇಲೆ ಮಾಡಿದಾಗ ಕೆಲವೊಮ್ಮೆ ತಲೆನೋವು ಬರುತ್ತಿತ್ತು. ಭಾವನೆಗಳ ಜೊತೆಗೆ ಎಷ್ಟರ ಮಟ್ಟಿಗೆ ಅಟ್ಯಾಚ್‌ಮೆಂಟ್‌ ಇರುತ್ತೆ ಅನ್ನುವ ಕಾರಣಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ’ ಎಂದರು. “ತುಂಬಾ ವರ್ಷದಿಂದ ರಿಮೇಕ್‌ ಚಿತ್ರ ಮಾಡಿರಲಿಲ್ಲ. ಮಲಯಾಳಂನ ಮೋಹನ್‌ಲಾಲ್‌ ಚಿತ್ರ ಎಂಬ ಕಾರಣಕ್ಕೆ ಮಾಡಿದೆವು, ಚಿತ್ರದಲ್ಲಿನ ಎಲ್ಲ ಪಾತ್ರಗಳು ಚಿಕ್ಕದಾಗಿದ್ದರೂ ಸಿನಿಮಾಗೆ ಬೇಕು ಎಂಬ ಕಾರಣಕ್ಕೆ ಮಾಡಿಸಲಾಗಿದೆ. ಅಪಾರ್ಟ್‌ ಮೆಂಟ್‌ ಕೂಡ ಇಲ್ಲಿ ಪಾತ್ರವಾಗಿದೆ’ ಎಂದು ಹೇಳಿದರು. ಒಳ್ಳೆಯ ಸಿನಿಮಾ ಬಂದರೆ ಮುಂದೆ ಕೂಡ ರೀಮೇಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ. ಹಾಗೆಂದು ಅದನ್ನೇ ಮುಂದುವರೆಸುವುದಿಲ್ಲ ಎನ್ನುವುದು ಶಿವಣ್ಣ ಮಾತು.

ಹಾಡುಗಳ ಬಗ್ಗೆ ಮಾತನಾಡಿದ ಶಿವಣ್ಣ, “ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದ ಚಿತ್ರಗಳೆಲ್ಲಾ ಯಶಸ್ಸಾಗಿದೆ. ಈ ಚಿತ್ರದಲ್ಲೂ ಕಣ್ಣೀರ ಒರೆಸೋಕೆ ಎಂಬ ಅದ್ಭುತವಾದ ಹಾಡೊಂದಿದೆ, ಅದನ್ನು ಮುಂದಿನ ವಾರ ಲಾಂಚ್‌ ಮಾಡುತ್ತೇವೆ’ ಎಂದು ಹೇಳಿದರು. ಚಿತ್ರ ಡಿಸೆಂಬರ್‌ನಲ್ಲೇ ಬಿಡುಗಡೆಯಾಗಬೇಕಿತ್ತು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಏ.5ರಂದು ಬೇವು-ಬೆಲ್ಲ ತಿನ್ನುವ ಯುಗಾದಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

ನಟಿ ಕೃತಿಕ ಜಯಕುಮಾರ್‌ ಮಾತನಾಡಿ, “”ಕವಚ’ ಸಿನಿಮಾ ಭಾವನೆಗಳಿಗೆ ಹತ್ತಿರವಾಗಿದೆ. ಶಿವಣ್ಣ ಜೊತೆಗೆ ಸಿನಿಮಾ ಮಾಡುವ ಅವಕಾಶ ದೊರೆತಿದ್ದು, ನನ್ನ ಭಾಗ್ಯ. ಹೀಗಾಗಿ ಕವಚ ನನಗೆ ವಿಶೇಷ ಸಿನಿಮಾ ಎನಿಸಿದೆ ಎಂದು ಹೇಳಿದರು. ನಟ ವಸಿಷ್ಠ ಸಿಂಹ, ನಿರ್ದೇಶಕ ಜಿವಿಆರ್‌ ವಾಸು ಮಾತನಾಡಿದರು.

ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.