ವಿಜಿ ಬಾಯಲ್ಲಿ ಪೋಲಿ ಮಾತು


Team Udayavani, Jun 8, 2018, 6:00 AM IST

cc-30.jpg

ಸಂಚಾರಿ ವಿಜಯ್‌ ಇಲ್ಲಿಯವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ, ಹೆಚ್ಚು ಪೋಲಿ ಡೈಲಾಗ್‌ಗಳಿರುವ, ಪಡ್ಡೆಗಳನ್ನು ಒಲಿಸಿಕೊಳ್ಳುವಂತಹ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ಅದೂ ಹಾಗೋಗಿದೆ, “ಪಾದರಸ’ ಎಂಬ ಸಿನಿಮಾದಲ್ಲಿ. 

ಹೌದು, “ಪಾದರಸ’ ಚಿತ್ರದಲ್ಲಿ ವಿಜಯ್‌ ಈ ಹಿಂದೆ ಮಾಡಿರದಂತಹ ಪಾತ್ರ ಮಾಡಿದ್ದಾರೆ. ಅದು ಲವರ್‌ಬಾಯ್‌ ಆಗಿ. ಜೊತೆಗೆ ಪಡ್ಡೆ ಹುಡುಗರು ಇಷ್ಟಪಡುವಂತಹ ಒಂದಷ್ಟು ಪೋಲಿ ಡೈಲಾಗ್‌ ಅನ್ನು ಕೂಡಾ ಹೇಳಿದ್ದಾರಂತೆ. ಆ ತರಹ ಡೈಲಾಗ್‌ ಹೊಡೆಯುವುದು ಅಷ್ಟು ಸುಲಭವಾಗಿರಲಿಲ್ಲವಂತೆ. ಈ ಕುರಿತು ಮಾತನಾಡುವ ಅವರು, “ನನಗೆ ಇದು ತುಂಬಾ ಕಷ್ಟ-ಇಷ್ಟದ ಸಿನಿಮಾ. ಬೇರೆ ತರಹದ ಇಮೇಜ್‌ ಇರೋ ಸಿನಿಮಾ. ಪಡ್ಡೆಹುಡುಗರನ್ನು ಕೆಣಕುವಂತಹ ಸಂಭಾಷಣೆಗಳನ್ನು ನಾನು ಹೇಳಿದ್ದೇನೆ. ಆರಂಭದಲ್ಲಿ ತುಂಬಾ ಮುಜುಗರವಾಯಿತು. ನಿರ್ದೇಶಕರು ಬಂದು, “ಈ ಸಿನಿಮಾದಿಂದ ನಿಮಗೊಂದು ಹೊಸ ಇಮೇಜ್‌ ಸಿಗಲಿದೆ. ಮಾಡಿ’ ಎಂದರು. ಅದರಂತೆ ಮಾಡಿದೆ. ಈಗ ಖುಷಿ ಇದೆ. ಒಂದು ವೇಳೆ ಈ ಸಿನಿಮಾವನ್ನು ಮಾಡದೇ ಇದ್ದಿದ್ದರೆ ಒಂದೊಳ್ಳೆಯ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ವಿಜಯ್‌. 

ಇಲ್ಲಿ ಯಾರ ಹಂಗಿಲ್ಲದ ಅನಾಥ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರಂತೆ. ಅವರ ಸ್ನೇಹಿತನಾಗಿ ನಿರಂಜನ್‌ ನಟಿಸಿದ್ದಾರೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವಿದೆಯಂತೆ. ಯಾರಿಗೆ ಬೇಕಾದರೂ ಮೋಸ ಮಾಡಬಹುದು, ಸುಳ್ಳು ಹೇಳಬಹುದು. ಆದರೆ, ನಮ್ಮ ಮನಸ್ಸಿಗೆ ಮಾತ್ರ ಸುಳ್ಳು ಹೇಳಲು ಸಾಧ್ಯವಿಲ್ಲ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಇನ್ನು, ಚಿತ್ರದ ಮುಂಬೈ-ಕರ್ನಾಟಕದ ಏರಿಯಾಗಳು ಮಾರಾಟವಾಗಿರುವುದರಿಂದ ವಿಜಯ್‌ ಖುಷಿಯಾಗಿದ್ದಾರೆ. ಈ ಚಿತ್ರವನ್ನು ಹೃಷಿಕೇಶ್‌ ಜಂಭಗಿ ನಿರ್ದೇಶಿಸಿದ್ದಾರೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಚಿತ್ರವಾಗಲು ಸಹಕರಿಸಿದವರಿಗೆ ಥ್ಯಾಂಕ್ಸ್‌ ಹೇಳಲು ಸಮಯ ತಗೊಂಡರು. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾದಲ್ಲಿ ಒಂದು ಸಂದೇಶವನ್ನು ಹೇಳಿದ್ದಾರಂತೆ ಹೃಷಿಕೇಶ್‌. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣ ಅವರು ಹೇಳುವಂತೆ ನವರಸಗಳು ಸೇರಿ “ಪಾದರಸ’ ಆಗಿದೆಯಂತೆ. “ಸಿನಿಮಾ ಇಷ್ಟವಾಗದಿದ್ದರೆ ಕಾಸು ವಾಪಾಸ್‌ ಕೊಡ್ತೀವಿ’ ಎನ್ನುವಷ್ಟರ ಮಟ್ಟಿಗೆ ನಾವು ಈ ಸಿನಿಮಾ ಮೇಲೆ ವಿಶ್ವಾಸ ಇಟ್ಟಿದ್ದೇವೆ ಎನ್ನುವುದು ಅವರ ಮಾತು. 

ಚಿತ್ರದಲ್ಲಿ ವೈಷ್ಣವಿ ಮೆನನ್‌ ನಾಯಕಿ. ಇದು ಅವರು ಒಪ್ಪಿಕೊಂಡ ಮೊದಲ ಸಿನಿಮಾವಂತೆ. ಆರಂಭದಲ್ಲಿ ನಿರ್ದೇಶಕರು ಯಾರ್ಯಾರು ನಟಿಸುತ್ತಿದ್ದಾರೆಂಬ ಪಟ್ಟಿ ಹೇಳಿದಾಗ ಭಯವಾಯಿತಂತೆ. ಏಕೆಂದರೆ, ಅವರೆಲ್ಲರಿಗೂ ನಟನೆಯ ಅನುಭವವಿದ್ದು, ತನಗಿಲ್ಲ ಎಂಬ ಕಾರಣದಿಂದ ಸ್ವಲ್ಪ ಟೆನ್ಸ್‌ ಆದರಂತೆ. ಆದರೆ, ಸೆಟ್‌ನಲ್ಲಿ ಎಲ್ಲರ ಸಹಕಾರ ಚೆನ್ನಾಗಿತ್ತು ಎನ್ನುವುದು ಅವರ ಮಾತು. ಮನಸ್ವಿನಿ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನು ವಿಜಯ್‌ ಚೆಂಡೂರ್‌ ಮತ್ತು ನಿರಂಜನ್‌ ದೇಶಪಾಂಡೆ ಕೂಡಾ ನಟಿಸಿದ್ದಾರೆ. ಚಿತ್ರದಲ್ಲಿ ನಿರಂಜನ್‌ ದೇಶಪಾಂಡೆ, ವಿಜಯ್‌ ಸ್ನೇಹಿತರಾಗಿ ನಟಿಸಿದ್ದಾರೆ. ಅವರದ್ದು ಮಾವ-ಭಾವ ಎನ್ನುತ್ತಾ ಓಡಾಡಿಕೊಂಡಿರುವ ಪಾತ್ರವಂತೆ. ವಿಜಯ್‌ ಚೆಂಡೂರುಗೆ ಈ ಸಿನಿಮಾ ತುಂಬಾ ವಿಶೇಷವಂತೆ. ಇವರ ಪಾತ್ರ ಕೇವಲ ಕಾಮಿಡಿಯಾಗಿ ಉಳಿಯದೇ, ಸಂದೇಶ ಕೊಡುವ ಕೆಲಸವನ್ನೂ ಮಾಡಿದೆಯಂತೆ. “ಪಾದರಸ’ ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ, ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣವಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.