ಸಂದೀಪ್ ಎಂಬ ಕಾಮಿಡಿ ಕಿಲಾಡಿ
Team Udayavani, Aug 25, 2017, 6:15 AM IST
ಓದಿಗೂ ವ್ಯಕ್ತಿಯ ಆಸಕ್ತಿಗೂ ಸಂಬಂಧವಿರೋದಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಯಾವುದೋ ವಿಷಯ ಓದಿದವರು, ಇನ್ಯಾವುದೋ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರವರ ಆಸಕ್ತಿ. ಅದರಂತೆ ಈಗ ಇಂಜಿನಿಯರಿಂಗ್ ಓದಿರುವ ಸಂದೀಪ್ ಕೂಡಾ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಹಾಗಂತ ನಟನೆಗಲ್ಲ. ಬರವಣಿಗೆಗೆ. ಸದ್ಯ ಸಂದೀಪ್ “ದುನಿಯಾ’ ವಿಜಯ್ ಅವರ “ಜಾನಿ ಜಾನಿ ಯೆಸ್ ಪಪ್ಪ’ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.
ಇದಲ್ಲದೇ, ಇನ್ನೂ ಹೆಸರಿಡದ ಚಿತ್ರವೊಂದಕ್ಕೂ ಸಂದೀಪ್ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಇಂಜಿನಿಯರಿಂಗ್ ಓದಿದ ಸಂದೀಪ್ಗೆ, ಬರವಣಿಗೆಯಲ್ಲಿ ಆಸಕ್ತಿ ತೊಡಗಿ, ಕೆಲವು ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದಾರೆ. ಹೀಗೆ ಬರವಣಿಗೆ ಆರಂಭಿಸಿದ ಸಂದೀಪ್ಗೆ ಒಳ್ಳೆಯ ವೇದಿಕೆ ಸಿಕ್ಕಿದ್ದು, “ಕಾಮಿಡಿ ಕಿಲಾಡಿ’ಗಳ ಮೂಲಕ. ಜೀ ವಾಹಿನಿಯ “ಕಾಮಿಡಿ ಕಿಲಾಡಿ’ಯ ಬರವಣಿಗೆಯಲ್ಲಿ ಅವಕಾಶ ಸಿಗುವ ಮೂಲಕ ಭಟ್ಟರು ಹಾಗೂ ಜಗ್ಗೇಶ್ ಅವರಿಂದ ಮೆಚ್ಚುಗೆಗೆ ಪಾತ್ರರಾದ ಖುಷಿ ಕೂಡಾ ಸಂದೀಪ್ಗಿದೆ. “ಕಾಮಿಡಿ ಕಿಲಾಡಿ’, “ಕಿಲಾಡಿ ಕುಟುಂಬ’, “ಡ್ರಾಮಾ ಜೂನಿಯರ್’ನ ಬರಹಗಾರರಾಗಿರುವ ಸಂದೀಪ್, “ಶಿವಾನಿ’, “ಮಿಂಚು’ ಸೇರಿದಂತೆ ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಕೂಡಾ ಬರೆದಿದ್ದಾರೆ.
ಸದ್ಯ ಸಂದೀಪ್ಗೆ ಸಿನಿಮಾದಿಂದ ಒಂದಷ್ಟು ಅವಕಾಶಗಳು ಬರುತ್ತಿವೆ. ಸದ್ಯ “ಜಾನಿ ಜಾನಿ ಯೆಸ್ ಪಪ್ಪಾ’ದ ಸಂಭಾಷಣೆಯಲ್ಲಿ ಬಿಝಿಯಾಗಿರುವ ಸಂದೀಪ್, ಕಾಮಿಡಿ ದೃಶ್ಯಗಳಿಗೆ ಸಂಭಾಷಣೆ ಬರೆಯುವುದರಲ್ಲಿ ಎತ್ತಿದ ಕೈ. “ನಾನು ಓದಿರೋದು ಇಂಜಿನಿಯರಿಂಗ್. ಆದರೆ, ನನಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತು. ಹಾಗಾಗಿ, ಪತ್ರಿಕೆಗಳಲ್ಲಿ ಬರೆಯಲಾರಂಭಿಸಿದೆ. ಈಗ ಸಿನಿಮಾ ಹಾಗೂ ಶೋಗಳಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ’ ಎನ್ನುವುದು ಸಂದೀಪ್ ಮಾತು.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು