‘ಲವ್ ಯು ರಚ್ಚು’ ಹಾಡಿಗೆ ‘ಸಿದ್ಧ್ ಶ್ರೀರಾಮ್’ ಧ್ವನಿ
Team Udayavani, Oct 29, 2021, 9:38 AM IST
ಸೌಥ್ ಸಿನಿ ದುನಿಯಾದಲ್ಲಿ ತನ್ನ ಹಾಡುಗಳ ಮೂಲಕವೇ ಹಲ್ಚಲ್ ಸೃಷ್ಟಿಸಿರುವ ಗಾಯಕ ಸಿದ್ಧ್ ಶ್ರೀರಾಮ್ ಈಗ ಕನ್ನಡದ “ಲವ್ ಯು ರಚ್ಚು’ ಚಿತ್ರದ ಗೀತೆಗೆ ಧ್ವನಿಯಾಗಿದ್ದಾರೆ.
ಹೌದು, ಸಿದ್ಧ್ ಶ್ರೀರಾಮ್ ಈಗಾಗಲೇ ಕನ್ನಡದಲ್ಲಿ ಎರಡು ಚಿತ್ರದ ಗೀತೆಗಳಿಗೆ ಧ್ವನಿಯಾಗಿದ್ದು, ಈ ಎರಡೂ ಹಾಡುಗಳೂ ಸೂಪರ್ ಹಿಟ್ ಆಗಿವೆ. ಈಗ ಸಿದ್ಧ್ ಶ್ರೀರಾವ್ ಕನ್ನಡದಲ್ಲಿ ಹಾಡಿರುವ ಮೂರನೇ ಚಿತ್ರ “ಲವ್ ಯು ರಚ್ಚು’ವಿನ ಮತ್ತೂಂದು ಹಾಡು ಕೂಡ ಬಿಡುಗಡೆಗೆ ರೆಡಿಯಾಗಿದೆ.
ಕೃಷ್ಣ ಅಜೇಯ್ ರಾವ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಲವ್ ಕಂ ರೊಮ್ಯಾಂಟಿಕ್ ಕಥಾಹಂದರ “ಲವ್ ಯು ರಚ್ಚು’ ಚಿತ್ರದ “ಮುದ್ದು ನೀನು…’ ಎಂಬ ಗೀತೆಗೆ ಸಿದ್ಧ್ ಶ್ರೀರಾಮ್ ಧ್ವನಿಯಾಗಿದ್ದು, ಈ ಹಾಡಿಗೆ ನಾಗಾರ್ಜುನ ಸಾಹಿತ್ಯವಿದೆ. ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಗೀತೆಯ ವಿಡಿಯೋ ಸಾಂಗ್ ಅನ್ನು ನ. 8ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಸದ್ಯ “ಲವ್ ಯು ರಚ್ಚು’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ವೇಳೆ ಚಿತ್ರದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿದೆ. ಈಗಾಗಲೇ “ಲವ್ ಯು ರಚ್ಚು’ ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಸಂಚಿತ್ ಹೆಗ್ಡೆ ಹಾಡಿರುವ “ನೋಡುತಾ ನನ್ನನೆ…’ ಎಂಬ ರೊಮ್ಯಾಂಟಿಕ್ ಲಿರಿಕಲ್ ವಿಡಿಯೋ ಹಾಡು ಈಗಾಗಲೇ ಹಿಟ್ ಲಿಸ್ಟ್ ಸೇರಿದೆ.
ಇನ್ನು ಸಿದ್ಧ್ ಶ್ರೀರಾಮ್ ಹಾಡಿರುವ “ಮುದ್ದು ನೀನು…’ ಹಾಡು “ಲವ್ ಯು ರಚ್ಚು’ ಚಿತ್ರದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಗೀತೆಯಾಗಿದೆ. “ಜಿ ಸಿನಿಮಾಸ್’ ಬ್ಯಾನರ್ನಲ್ಲಿ ಗುರುದೇಶಪಾಂಡೆ ನಿರ್ಮಿಸುತ್ತಿರುವ “ಲವ್ ಯು ರಚ್ಚು’ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನವಿದೆ.
ಇದನ್ನೂ ಓದಿ:ಇಂದಿನಿಂದ ಭಜರಂಗಿ-2 ಹವಾ ಶುರು: ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ ಹೊಸ ಲೋಕ
ಲವ್ ಯು ರಚ್ಚು’ ಚಿತ್ರದಲ್ಲಿ ಸಿದ್ಧು ಶ್ರೀ ರಾಮ್ ಹಾಡಿನ ಬಗ್ಗೆ ಮಾತನಾಡುವ ನಿರ್ಮಾಪಕ ಗುರು ದೇಶಪಾಂಡೆ, “ಸದ್ಯದ ಮಟ್ಟಿಗೆ ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿದ್ಧ್ ಶ್ರೀರಾಮ್ ಹಾಡುಗಳ ಕ್ರೇಜ್ ತುಂಬಾ ಜೋರಾಗಿದೆ. ಸಿದ್ಧ್ ಶ್ರೀರಾಮ್ ಇಲ್ಲಿಯವರೆಗೆ ಹಾಡಿರುವ ಎಲ್ಲ ಭಾಷೆಗಳ ಹಾಡುಗಳೂ ಸೂಪರ್ ಹಿಟ್ ಆಗಿವೆ. ಕನ್ನಡದಲ್ಲಿ ಇದು ಅವರ ಮೂರನೇ ಹಾಡು. ಈಗಾಗಲೇ ಎರಡೂ ಹಾಡುಗಳು ಹಿಟ್ ಆಗಿದ್ದು, “ಲವ್ ಯು ರಚ್ಚು’ ಸಿನಿಮಾದ ಹಾಡಿನಲ್ಲೂ ಸಿದ್ಧ್ ಶ್ರೀರಾಮ್ ವಾಯ್ಸ ಮ್ಯಾಜಿಕ್ ಮಾಡಲಿದೆ. ಹಾಡು ಖಂಡಿತಾ ಕೇಳುಗರಿಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.
ಸದ್ಯ ತನ್ನ ಮೆಲೋಡಿ ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ “ಲವ್ ಯು ರಚ್ಚು’ ಡಿಸೆಂಬರ್ ಎರಡನೇ ವಾರದ ವೇಳೆಗೆ ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು