ಸಣ್ಣಸಣ್ಣ ಪಾತ್ರಗಳಿಂದ
Team Udayavani, Jul 27, 2018, 6:00 AM IST
ಸಣ್ಣ ಸಣ್ಣ ಪಾತ್ರಗಳ ಮೂಲಕ ದೊಡ್ಡ ಕನಸು ಕಂಡು ಇವತ್ತು ಬಿಝಿಯಾಗಿರುವ ಅನೇಕ ನಟ-ನಟಿಯರು ಚಿತ್ರರಂಗದಲ್ಲಿದ್ದಾರೆ. ಸಿಕ್ಕ ಪಾತ್ರಕ್ಕೆ ಜೀವ ತುಂಬುತ್ತಾ ಹೋಗುವ ಅನೇಕ ನವನಟರ ಸಾಲಿಗೆ ಹೊಸ ಸೇರ್ಪಡೆ ನಿಶಾಂತ್ ಗುಡಿಹಳ್ಳಿ. ನಿಶಾಂತ್ ಈಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಿಶಾಂತ್ ಈಗ ಬಿಝಿಯಾಗುತ್ತಿರೋದು ಸುಳ್ಳಲ್ಲ. “ಕಾಲಾಯ ತಸ್ಮೈ ನಮಃ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಿಶಾಂತ್ ಇಲ್ಲಿವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. “ಜಿಂಕೆಮರಿ’, “ಮತ್ತೆ ಸತ್ಯಾಗ್ರಹ’, “ಗಣಪ’ ಚಿತ್ರಗಳಲ್ಲಿ ನಟಿಸಿರುವ ನಿಶಾಂತ್, “ಪುಷ್ಪಕ ವಿಮಾನ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ ಪಾತ್ರಕ್ಕೆ, ನಟನೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ರಂಗಭೂಮಿ ಹಿನ್ನೆಲೆ ಇರುವ ನಿಶಾಂತ್, ಡ್ರಾಮಾದಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಆ ನಂತರ ಕಿರುತೆರೆಯತ್ತ ಮುಖ ಮಾಡಿದ ನಿಶಾಂತ್ ಸುಮಾರು 80ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕಿರುತೆರೆ ವೀಕ್ಷಕರಿಗೆ ನಿಶಾಂತ್ ಪರಿಚಿತ ಮುಖ. ಎರಡು ವಾರದ ಹಿಂದೆ ಬಿಡುಗಡೆಯಾಗಿರುವ “ಅಥರ್ವ’ ಚಿತ್ರದಲ್ಲೂ ನಿಶಾಂತ್ಗೆ ಪ್ರಮುಖ ಪಾತ್ರ ಸಿಕ್ಕಿದೆ. ಸದ್ಯ “ಕಲ್ಲಳ್ಳಿ ಭಜನಾ ಮಂಡಳಿ’ ಎಂಬ ಸಿನಿಮಾದಲ್ಲಿ ನಿಶಾಂತ್ ನಟಿಸುತ್ತಿದ್ದು, ಒಳ್ಳೆಯ ಪಾತ್ರವಿದೆಯಂತೆ. “ಸಿನಿಮಾಗಳಿಂದ ಒಳ್ಳೆಯ ಅವಕಾಶಗಳು ಬರುತ್ತಿವೆ. ಸಿನಿಮಾದುದ್ದಕ್ಕೂ ಸಾಗಿಬರುವ ಪಾತ್ರಗಳಿಂದಾಗಿ ಪ್ರತಿಭೆ ತೋರಿಸಲು ಅವಕಾಶ ಸಿಗುತ್ತಿದೆ’ ಎನ್ನುವುದು ನಿಶಾಂತ್ ಮಾತು.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ