ಸಾಫ್ಟ್ ನಿರ್ದೇಶಕನ ರಗಡ್‌ ಚಿತ್ರ!


Team Udayavani, Oct 2, 2017, 12:11 PM IST

Dalapathi_(122).jpg

“ಈ ಟ್ಯಾಗ್‌ ನನಗೆ ಹೊಂದುತ್ತೋ ಗೊತ್ತಿಲ್ಲ. ಆದರೆ, ಆ ತರಹದ ಒಂದು ಪ್ರಯತ್ನವಂತೂ ಈ ಸಿನಿಮಾದಲ್ಲಿ ಆಗಿದೆ …‘ ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ಪ್ರೇಮ್‌ ಮುಖ ನೋಡಿದರು ಪ್ರಶಾಂತ್‌ ರಾಜ್‌. ಪ್ರೇಮ್‌ ಒಂದು ಸ್ಮೈಲ್‌ ಕೊಟ್ಟರು. ಪ್ರಶಾಂತ್‌ ರಾಜ್‌ ಹೀಗೆ ಹೇಳಲು ಕಾರಣ “ದಳಪತಿ’. ಇದು ಪ್ರಶಾಂತ್‌ ರಾಜ್‌ ನಿರ್ದೇಶನದ ಐದನೇ ಸಿನಿಮಾ. ಪ್ರೇಮ್‌ ಈ ಸಿನಿಮಾದ ನಾಯಕ. ಪ್ರಶಾಂತ್‌ ಇಲ್ಲಿ “ಟ್ಯಾಗ್‌’ ಎಂದಿದ್ದು ಕಮರ್ಷಿಯಲ್‌ ಡೈರೆಕ್ಟರ್‌ ಎಂಬುದಕ್ಕೆ. ಪ್ರಶಾಂತ್‌ ರಾಜ್‌ ಅವರ ಈ ಹಿಂದಿನ ಸಿನಿಮಾಗಳಿಗೆ ಈ ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆಯಂತೆ.

“”ದಳಪತಿ’ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ನನಗೆ ಹೊಸ ಅನುಭವ ಕೊಟ್ಟ ಚಿತ್ರ. ಕಮರ್ಷಿಯಲ್‌ ಡೈರೆಕ್ಟರ್‌ ಎಂಬ ಟ್ಯಾಗ್‌ ನನಗೆ ಎಷ್ಟು ಹೊಂದುತ್ತೋ ಗೊತ್ತಿಲ್ಲ. ಆದರೆ, ಕಥೆ ಆ ತರಹದ ಒಂದು ಮೇಕಿಂಗ್‌ ಬಯಸಿತ್ತು. ಇದು ತುಂಬಾ ಸೀರಿಯಸ್‌ ಕಥೆ ಇರುವ ಸಿನಿಮಾ. ಅದನ್ನು ಅಷ್ಟೇ ಕಮರ್ಷಿಯಲ್‌ ಆಗಿ ತೋರಿಸಿದ್ದೇನೆ’ ಎಂದು ತಮ್ಮ “ದಳಪತಿ’ ಬಗ್ಗೆ ಹೇಳಿಕೊಂಡರು ಪ್ರಶಾಂತ್‌ ರಾಜ್‌. “ದಳಪತಿ’ ಎರಡು ವರ್ಷಗಳ ಹಿಂದೆ ಆರಂಭವಾದ ಚಿತ್ರ. ಆದರೆ, ತಡವಾಗಿದೆ.

ಅದಕ್ಕೆ ಕಾರಣ ಪ್ರಶಾಂತ್‌ ರಾಜ್‌ ಮೊದಲು “ಜೂಮ್‌’ ಚಿತ್ರವನ್ನು ಮುಗಿಸಿದ್ದು. “ಮೊದಲು ನಾನು “ಜೂಮ್‌’ ಚಿತ್ರವನ್ನು ಮುಗಿಸಬೇಕಿತ್ತು. ಹಾಗಾಗಿ, “ದಳಪತಿ’ ಸ್ವಲ್ಪ ತಡವಾಗಿದೆ. ಆದರೂ ನಾಯಕ ಪ್ರೇಮ್‌ರಿಂದ ಹಿಡಿದು ಪ್ರತಿಯೊಬ್ಬರು ಸಹಕಾರ ನೀಡಿದರು. ಜ್ವರದ ನಡುವೆಯೂ ಬಂದು ಪ್ರೇಮ್‌ ಫೈಟಿಂಗ್‌ ಸೀನ್‌ನಲ್ಲಿ ಭಾಗವಹಿಸಿದರು. ಅವರು ಈ ಸಿನಿಮಾಕ್ಕೆ ದೊಡ್ಡ ಶಕ್ತಿ. ಚಿತ್ರದಲ್ಲಿ ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ತಂಡದ ಬಗ್ಗೆ ಹೇಳುತ್ತಾರೆ ಪ್ರಶಾಂತ್‌ರಾಜ್‌.

ಅಂದಹಾಗೆ, ಪ್ರಶಾಂತ್‌ ರಾಜ್‌ ಮಾತಿಗೆ ವೇದಿಕೆಯಾಗಿದ್ದು “ದಳಪತಿ’ ಚಿತ್ರದ ಆಡಿಯೋ ಬಿಡುಗಡೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಆನಂದ್‌ ಆಡಿಯೋ ಮೂಲಕ ಹಾಡುಗಳು ಹೊರಬಂದಿವೆ. ನಾಯಕ ಪ್ರೇಮ್‌ಗೆ ಪ್ರಶಾಂತ್‌ ರಾಜ್‌ ಅವರ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತಂತೆ. “ಚಿತ್ರದ ಹಾಡುಗಳನ್ನು ಸುಲಭವಾಗಿ ತೆಗೆಯಬಹುದಿತ್ತು. ಆದರೆ ಪ್ರಶಾಂತ್‌ ರಾಜ್‌ ಅವರಿಗೆ ಅವರದೇ ಆದ ಕಲ್ಪನೆ ಇತ್ತು. ಒಂದು ಲಾಂಬೋರ್ಗಿನಿ ಕಾರು ತಂದರು,

ಮತ್ತೂಂದು ದಿನ 25 ಲಕ್ಷದ ಬೈಕ್‌ ಸೆಟ್‌ಗೆ ಬಂತು. ಇಷ್ಟೆಲ್ಲಾ ಖರ್ಚು ಯಾಕೆ ಮಾಡ್ತೀರಿ ಎಂದು ಕೇಳಿದರೆ ಅಲ್ಲಿ ಅವರ ಕಲ್ಪನೆಯ ಚಿತ್ರ ಸಿಗುತ್ತದೆ. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ತುಂಬಾ ಕೂಲ್‌ ಆಗಿ ಖುಷಿಯಿಂದ ನಟಿಸಿ ಬಂದ ಸಿನಿಮಾವಿದು. ಅದಕ್ಕೆ ಕಾರಣ ಪ್ರಶಾಂತ್‌ ರಾಜ್‌ ಮೇಲಿನ ನಂಬಿಕೆ ಎಂದರು. ಇನ್ನು, ಪ್ರೇಮ್‌ ಸಿನಿಮಾ ಎಂದರೆ ಹಾಡುಗಳು ಚೆನ್ನಾಗಿರುತ್ತವೆ ಎಂಬ ಮಾತಿದ್ದು, ಅದರಂತೆ ಈ ಚಿತ್ರದ ಹಾಡುಗಳು ಕೂಡಾ ಚೆನ್ನಾಗಿ ಮೂಡಿಬಂದ ಬಗ್ಗೆ ಖುಷಿಪಟ್ಟರು ಪ್ರೇಮ್‌.

ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ. ಚರಣ್‌ ಒಪ್ಪಿಕೊಂಡ ಮೊದಲ ಸಿನಿಮಾ ಇದಂತೆ. ಆದರೆ, ಈ ಸಿನಿಮಾ ತಡವಾಗಿರುವುದರಿಂದ ಈಗಾಗಲೇ ಅವರು ಸಂಗೀತ ನೀಡಿರುವ ಬೇರೆ ಸಿನಿಮಾಗಳು ರಿಲೀಸ್‌ ಆಗಿವೆ. ಹಾಡುಗಳು ಗುಣಮಟ್ಟದಲ್ಲಿರಬೇಕೆಂಬ ಕಾರಣಕ್ಕೆ ವಿದೇಶದಲ್ಲಿ ಮಾಸ್ಟರಿಂಗ್‌ ಮಾಡಿಸಿದ ಬಗ್ಗೆ ಹೇಳಿಕೊಂಡರು ಚರಣ್‌ ರಾಜ್‌. ಚಿತ್ರದ ನಿರ್ಮಾಪಕ ನವೀನ್‌ ಕೂಡಾ “ದಳಪತಿ’ಯ ಅನುಭವ ಹಂಚಿಕೊಂಡರು.

ಟಾಪ್ ನ್ಯೂಸ್

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.