ಸಾಂಗ್‌ ರಾಜ ಸಾಂಗ್‌


Team Udayavani, Sep 15, 2017, 10:50 AM IST

15-SUC-3.jpg

“ಗೌಡ್ರು ಹೋಟೆಲ್‌’ ಎಂಬ ಚಿತ್ರ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರದ ಹಾಡುಗಳ ಪ್ರದರ್ಶನದ ಜೊತೆಗೆ ಆ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುವ ಮೂಲಕ ಅದ್ಧೂರಿಯಾಗಿಯೇ ಆಡಿಯೋ ಬಿಡುಗಡೆ ಮಾಡಿತು ಚಿತ್ರತಂಡ.

ಈ ಚಿತ್ರವನ್ನು ಪಿ.ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಮೇಶ್‌ ಶಿವ, ಸತೀಶ್‌ ಹಾಗೂ ಸತ್ಯನ್‌ ಸೇರಿ ನಿರ್ಮಿಸಿದ್ದಾರೆ. ರಚನ್‌ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟರೆ, ವೇದಿಕಾ ನಾಯಕಿ. “ಗೌಡ್ರು ಹೋಟೆಲ್‌’ಗೆ ಸಂಗೀತ ನೀಡುವ ಮೂಲಕ ಯುವನ್‌ ಶಂಕರ್‌ ರಾಜಾ ಕನ್ನಡಕ್ಕೆ ಬಂದಿದ್ದಾರೆ. ಯುವನ್‌ ಶಂಕರ್‌ ರಾಜಾ ತಮ್ಮ ಹಾಡುಗಳ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. “ನನ್ನ ಹಾಡುಗಳ ಬಗ್ಗೆ ನಾನು ಮಾತನಾಡೋದು ಸರಿಯಲ್ಲ. ಹಾಡುಗಳು ಕೇಳಿ ನೀವು ಮಾತನಾಡಬೇಕು. ಅದು ಬಿಟ್ಟರೆ “ಗೌಡ್ರು ಹೋಟೆಲ್‌’ ಒಳ್ಳೆಯ ಅನುಭವ ಕೊಟ್ಟ ಸಿನಿಮಾ. ಪಕ್ಕಾ ಪ್ರೊಫೆಶನಲ್‌ ತಂಡದ ಜೊತೆ ಸಿನಿಮಾ ಮಾಡಿದ ಖುಷಿ ಇದೆ ಎಂದರು.

ಚಿತ್ರದಲ್ಲಿ ನಾಯಕರಾಗಿ ನಟಿಸಿದ ರಚನ್‌ ಅವರಿಗೆ ಮೊದಲ ಸಿನಿಮಾವಾದ್ದರಿಂದ ಹೇಗೋ ಏನೋ ಎಂಬ ಭಯ ಇತ್ತಂತೆ.  ಆದರೆ, ಶೂಟಿಂಗ್‌ನಲ್ಲಿ   ಆ ಭಯ ಹೋಯಿತಂತೆ. ಸ್ನೇಹಿತರೆಲ್ಲಾ, “ನೀನು ಆ್ಯಕ್ಟಿಂಗ್‌ ಹೇಗೆ  ಕಲಿತೆ’ ಎಂದಾಗ, “ಅಪ್ಪನಿಗೆ ಸುಳ್ಳು ಹೇಳುವ ಮೂಲಕ ಆ್ಯಕ್ಟಿಂಗ್‌ ಕಲಿತೆ’ ಎಂದು ಉತ್ತರಿಸುತ್ತಿದ್ದರಂತೆ ರಚನ್‌. ಚಿತ್ರದಲ್ಲಿ ಅನಂತ್‌ನಾಗ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಅವರ ಜೊತೆ ನಟಿಸಿದ್ದು ರಚನ್‌ ಗೆ ಖುಷಿಕೊಟ್ಟಿದೆಯಂತೆ. ನಾಯಕಿ ವೇದಿಕಾ ನಿರ್ದೇಶಕರ ತಾಳ್ಮೆಯ ಬಗ್ಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಅನಂತ್‌ನಾಗ್‌ ಅವರ ಜೊತೆ ತಮಗೆ ಯಾವುದೇ ದೃಶ್ಯವಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟಿಸಿರುವ ಅನಂತ್‌ನಾಗ್‌ ಅವರಿಗೆ “ಗೌಡ್ರು ಹೋಟೆಲ್‌’ ತಂಡದ ಕೆಲಸ ಖುಷಿಯಾಗಿದೆ. ಅದರಲ್ಲೂ ನಿರ್ದೇಶಕ ಪಿ. ಕುಮಾರ್‌ ಕೆಲಸ ತೃಪ್ತಿಕೊಟ್ಟಿದೆ. “ಸಾಮಾನ್ಯವಾಗಿ ಈಗಿನ ನಿರ್ದೇಶಕರು ಮಾನಿಟರ್‌ ಮುಂದೆ ಕುಳಿತೇ “ಹಾಗೆ ಮಾಡಿ, ಹೀಗೆ ಮಾಡಿ’ ಎನ್ನುತ್ತಾರೆ. ಚೇರ್‌ನಿಂದ ಎದ್ದು ಬಂದು ಓಡಾಡಿ ನಿರ್ದೇಶನ ಮಾಡುವುದಿಲ್ಲ. ಆದರೆ, ನಿರ್ದೇಶಕ ಪಿ.ಕುಮಾರ್‌ ಅವರನ್ನು ನೋಡಿ ಖುಷಿಯಾಯಿತು. ಮಾನಿಟರ್‌ ಮುಂದಿನ ಅವರ ಚೇರ್‌ ಯಾವತ್ತೂ ಖಾಲಿ ಇರುತ್ತಿತ್ತು. ಅಷ್ಟೊಂದು ಓಡಾಡಿ, ಕಲಾವಿದರಿಗೆ ಹೇಳಿಕೊಡುತ್ತಿದ್ದರು. ಮುಖ್ಯವಾಗಿ ಛಾಯಾಗ್ರಾಹಕರ ಹಾಗೂ ನಿರ್ದೇಶಕರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು’ ಎಂದು ತಮ್ಮ ಅನುಭವ ಹಂಚಿಕೊಂಡರು ಅನಂತ್‌ನಾಗ್‌.

ನಿರ್ದೇಶಕ ಪಿ.ಕುಮಾರ್‌ ಚಿತ್ರೀಕರಣದ ವೇಳೆ ನಿರ್ಮಾಪಕರಲ್ಲಿ ಸಿಟ್ಟುಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತಲೇ ಮಾತಿಗಿಳಿದರು. ಪಿ.ಕುಮಾರ್‌ ಅಂದು ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಥ್ಯಾಂಕ್ಸ್‌ ಹೇಳಲು ಹಾಗೂ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಆ ವೇದಿಕೆಯನ್ನು ಬಳಸಿಕೊಂಡರು. ಚಿತ್ರದಲ್ಲಿ ಪ್ರಕಾಶ್‌ ರೈ ಹಾಗೂ ಅನಂತ್‌ನಾಗ್‌ ನಟಿಸಿದ್ದು, ಅವರಿಬ್ಬರು ನಟಿಸುತ್ತಿದ್ದರೆ ಶಾಟ್‌ ಕಟ್‌ ಮಾಡೋಕೆ ಕುಮಾರ್‌ಗೆ ಮನಸ್ಸು ಬರುತ್ತಿರಲಿಲ್ಲವಂತೆ. ಇನ್ನು, ಚಿತ್ರದ ನಾಯಕಿ ವೇದಿಕಾ ಅವರ ಸರಳ ಗುಣವನ್ನು ಮೆಚ್ಚಿಕೊಂಡರು. ಸಂಗೀತ ನಿರ್ದೇಶಕ ಯುವನ್‌ ಶಂಕರ್‌ ರಾಜಾ ಕೊಟ್ಟ ಟ್ಯೂನ್‌ಗಳು ಬೇಗನೇ ಓಕೆಯಾಗಿದ್ದರ ಬಗ್ಗೆಯೂ ಮಾತನಾಡಿದರು ಕುಮಾರ್‌. 

ನಿರ್ಮಾಪಕರಾದ ರಮೇಶ್‌ ಶಿವ, ಸತೀಶ್‌ ಹಾಗೂ ಸತ್ಯನ್‌ ಕೂಡಾ ಸಿನಿಮಾ ಚೆನ್ನಾಗಿ ಮೂಡಿ ಬಂದ ಖುಷಿ ಹಂಚಿಕೊಂಡರು. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.