ಮಾತ್‌ ಮಾತಲ್ಲಿ ಟಾಂಗ್‌.. ಸೌತ್‌ ಸಿನಿ ಹವಾ; ಬಾಲಿವುಡ್‌ ಉರಿ


Team Udayavani, Apr 29, 2022, 11:52 AM IST

ಮಾತ್‌ ಮಾತಲ್ಲಿ ಟಾಂಗ್‌.. ಸೌತ್‌ ಸಿನಿ ಹವಾ; ಬಾಲಿವುಡ್‌ ಉರಿ

ಒಂದು ಕಾಲದಲ್ಲಿ ಭಾರತೀಯ ಸಿನಿ ದೊಡ್ಡಣ್ಣ ಎನಿಸಿಕೊಂಡಿದ್ದ ಬಾಲಿವುಡ್‌ನ‌ಲ್ಲಿ ಈಗ ಸಣ್ಣದೊಂದು ಭಯ ಶುರುವಾಗಿದೆ. ಆ ಭಯ ಉರಿಯಾಗಿ ಪರಿವರ್ತನೆಯಾಗಿದೆ. ಅದರ ಪರಿಣಾಮ ಅಲ್ಲಿನ ಬೇರೆ ಬೇರೆ ನಟರು ಆ ಉರಿಯನ್ನು ಮಾತಿನ ಮೂಲಕ ಕಾರುತ್ತಿದ್ದಾರೆ!

ಅಷ್ಟಕ್ಕೂ ಈ ಭಯ, ಉರಿ, ವ್ಯಂಗ್ಯದ ಮಾತುಗಳಿಗೆ ಕಾರಣವೇನೆಂದು ನೀವು ಕೇಳಿದರೆ ಅದಕ್ಕೆ ಸಿಗುವ ಉತ್ತರ ಸೌತ್‌ ಸಿನಿಮಾಗಳ ಭರ್ಜರಿ ಗೆಲುವು. ದಕ್ಷಿಣ ಭಾರತೀಯ ಚಿತ್ರರಂಗಗಳಿಂದ ತಯಾರಾಗುತ್ತಿರುವ ಸಿನಿಮಾಗಳು ಈಗ ಎಲ್ಲಾ ಕಡೆ ತಲುಪುತ್ತಿವೆ. ಅದರಲ್ಲೂ ಬಾಲಿವುಡ್‌ ಸಿನಿಮಾಗಳ ಭದ್ರ ಕೋಟೆಯಾಗಿದ್ದ ಉತ್ತರ ಭಾರತದಲ್ಲಿ ಸೌತ್‌ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತಿವೆ. ಇದು ಬಾಲಿವುಡ್‌ ಮಂದಿಯ ಉರಿಗೆ ಕಾರಣವಾಗಿದೆ. ಅದನ್ನು ಮಾತಿನ ಮೂಲಕ, ಟಾಂಗ್‌ ಕೊಡುವ ಮೂಲಕ ಅಲ್ಲಿನ ನಟರು ಹೊರ ಹಾಕುತ್ತಿದ್ದಾರೆ.

ಸದ್ಯ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಕಿಚ್ಚ ಸುದೀಪ್‌ ಹೇಳಿರುವ ಮಾತಿಗೆ ಅಜೇಯ್‌ ದೇವಗನ್‌ ಮಾಡಿರುವ ಟ್ವೀಟ್‌ವೊಂದು ಉದಾಹರಣೆಯಾದರೆ, ಕೆಲ ದಿನಗಳ ಹಿಂದಷ್ಟೇ ನವಾಜುದ್ದೀನ್‌ ಸಿದ್ಧಿಕಿ ಕೂಡಾ ಸೌತ್‌ ಸಿನಿಮಾಗಳನ್ನು ನೋಡಿಲ್ಲ, ನೋಡೋದು ಇಲ್ಲ. ಒಂದು ಸಿನಿಮಾದ ಗೆಲುವನ್ನು ಜನ ಬೇಗನೇ ಮರೆತು ಬಿಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೂ ಹಿಂದೆ ಜಾನ್‌ ಅಬ್ರಹಾಂ ಕೂಡಾ ಸೌತ್‌ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಆದರೆ, ಸೌತ್‌ ಸಿನಿ ದುನಿಯಾ ಮಾತ್ರ ಮಾತಲ್ಲಿ ಉತ್ತರ ಕೊಡದೇ ಕಾರ್ಯದಲ್ಲಿ ಮಾಡಿ ತೋರಿಸಿದೆ

ಬಿಟೌನ್‌ ದಾಖಲೆ ಉಡೀಸ್‌

ಒಂದು ಸಮಯದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವೆಂದರೆ ಮೂಗು ಮುರಿಯುತ್ತಿದ್ದ ಮಂದಿ ಇವತ್ತು ಸೌತ್‌ ಸಿನಿಮಾಗಳಿಗೆ ರೆಡ್‌ ಕಾರ್ಪೆಟ್‌ ಹಾಕಿ ಕಾಯುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳು ಮಾಡದ ಕಮಾಲ್‌ ಅನ್ನು ಈ ಸಿನಿಮಾಗಳು ಮಾಡುತ್ತಿವೆ. ಸದ್ಯ ಸೌತ್‌ ಫಿಲಂ ಇಂಡಸ್ಟ್ರಿ ಎನಿಸಿಕೊಂಡಿರುವ ತೆಲುಗು, ಕನ್ನಡ, ತಮಿಳು, ಮಲಯಾಳಂ .. ಈ ಚಿತ್ರರಂಗಗಳಿಂದ ಬಿಗ್‌ ಬಜೆಟ್‌ ಸಿನಿಮಾಗಳು ತಯಾರಾಗಿ, ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಿವೆ. ಕೋವಿಡ್‌ನ‌ ಹೊಡೆತಕ್ಕೆ ಎಲ್ಲಾ ಚಿತ್ರರಂಗಗಳು ನಲುಗಿ ಹೋಗಿದ್ದವು. ಆದರೆ, ಕೋವಿಡ್‌ ಬಳಿಕ ಬೇಗನೇ ಚೇತರಿಸಿಕೊಂಡ ಚಿತ್ರರಂಗವೆಂದರೆ ಅದು ಸೌತ್‌ ಫಿಲಂ ಇಂಡಸ್ಟ್ರಿ. ಬಾಲಿವುಡ್‌ ಒಂದು ಗೆಲುವಿಗೆ ಇನ್ನೂ ಎದುರು ನೋಡುತ್ತಲೇ ಇದೆ. ಆದರೆ, ದಕ್ಷಿಣ ಭಾರತದಿಂದ ತಯಾರಾದ ಸಾಲು ಸಾಲು ಚಿತ್ರಗಳು ಸಿಕ್ಸರ್‌ ಬಾರಿಸುತ್ತಾ ಮುಂದೆ ಸಾಗುತ್ತಲೇ ಇದೆ.

ಇದನ್ನೂ ಓದಿ:‘ಶೋಕಿವಾಲ’ನ ಕಲರ್‌ ಫುಲ್‌ ಎಂಟ್ರಿ

ಆ ತರಹದ ಒಂದಷ್ಟು ಸಿನಿಮಾಗಳನ್ನು ಉದಾಹರಿಸೋದಾದರೆ “ಪುಷ್ಪ’, “ಆರ್‌ಆರ್‌ಆರ್‌’, “ಕೆಜಿಎಫ್-2′ .  ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಬಾಲಿವುಡ್‌ ಸಿನಿಮಾಗಳು ಮಾಡಿದ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿವೆ. ಇವೆಲ್ಲವನ್ನು ಬಾಲಿವುಡ್‌ ಮಂದಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.

ಸೌತ್‌ ರೀಮೇಕ್‌ನಲ್ಲಿ ಬಾಲಿವುಡ್‌ ಮುಂದು

ದಕ್ಷಿಣ ಭಾರತೀಯ ಸಿನಿಮಾದ ಬಗ್ಗೆ ಹಗುರವಾಗಿ ಮಾತನಾಡುವ ಬಾಲಿವುಡ್‌, ಇಲ್ಲಿ ಹಿಟ್‌ ಆದ ಸಿನಿಮಾಗಳನ್ನು ರೀಮೇಕ್‌ ಮಾಡುವಲ್ಲಿ ಸಿಕ್ಕಾಪಟ್ಟೆ ಆಸಕ್ತಿ ತೋರಿಸುತ್ತಿದೆ. ದಕ್ಷಿಣದಲ್ಲಿ ಭಾರತದಲ್ಲಿ ಹಿಟ್‌ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್‌ ಮಾಡಿ, ಅದೆಷ್ಟೋ ಅಲ್ಲಿನ ನಟರು ತಮ್ಮ ಸಿನಿಕೆರಿಯರ್‌ನಲ್ಲಿ ಮರುಜೀವ ಪಡೆದುಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಾಲಿವುಡ್‌, ದಕ್ಷಿಣ ಭಾರತದ 4 ಪ್ರಮುಖ ಭಾಷೆಗಳ ಶೇ 65ಕ್ಕೂ ಹೆಚ್ಚು ಚಿತ್ರಗಳನ್ನು ರೀಮೇಕ್‌ ಮಾಡಿದೆ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.