ಟಗರು ಶಿವ Speaking


Team Udayavani, Mar 9, 2018, 4:45 PM IST

Tagaru_(124).jpg

“ನಾವು ಚಿತ್ರ ನೋಡಿದಾಗ, ಅಲ್ಲಿ ಶಿವರಾಜಕುಮಾರ್‌ ಕಾಣಲಿಲ್ಲ. ಒಬ್ಬ ಕಾಪ್‌ ಕಂಡ …’ ಹಾಗಂತ ಹಲವು ಅಭಿಮಾನಿಗಳು, ಶಿವರಾಜಕುಮಾರ್‌ ಬಳಿ ಹೇಳಿಕೊಂಡರಂತೆ. ತಮಗೆ ಸಿಕ್ಕೆ ಅದ್ಭುತ ಕಾಂಪ್ಲಿಮೆಂಟ್‌ ಅದೇ ಎನ್ನುತ್ತಾರೆ ಶಿವರಾಜಕುಮಾರ್‌. “ಟಗರು’ ಹವಾ ಜೋರಾಗಿರುತ್ತದೆ ಎಂದು ಬಿಡುಗಡೆಯ ಮುಂಚೆಯೇ ಅವರಿಗೆ ಪಕ್ಕಾ ಆಗಿದ್ದರೂ, ಅದೂ ಈ ಲೆವೆಲ್‌ಗೆ ಹೋಗಬಹುದು ಎಂದು ಗೊತ್ತಿರಲಿಲ್ಲವಂತೆ.

“ನಾನು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಚಿತ್ರ ನೋಡಿದೆ. ದ್ವಿತೀಯಾರ್ಧ ಬಹಳ ಚೆನ್ನಾಗಿದೆ. ನಿರೂಪಣೆ ಬಹಳ ಚೆನ್ನಾಗಿ ಮಾಡಿದ್ದಾರೆ ಸೂರಿ. Confuse or Convince ಅಂತಾರಲ್ಲ. ಅವರು ಎರಡೂ ಮಾಡಿದ್ದಾರೆ. ಮೊದಲು Confuse ಮಾಡಿ, ನಂತರ Convince ಮಾಡಿದ್ದಾರೆ. ನನಗೆ ಭಾವನಾ ಮತ್ತು ದೇವರಾಜ್‌ ಅವರ ಎಪಿಸೋಡ್‌ಗಳು ಬಹಳ ಖುಷಿಯಾಯಿತು. ಎಲ್ಲೂ ಎಳೆಯದೆ, ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ’ ಎಂದು ಸೂರಿಗೆ ಶಹಬ್ಭಾಸ್‌ಗಿರಿ ನೀಡುತ್ತಾರೆ ಶಿವರಾಜಕುಮಾರ್‌.

ಇನ್ನು ಬೇರೆ ಪಾತ್ರಗಳನ್ನು ಜನ ಗುರುತಿಸುತ್ತಿರುವ ಬಗ್ಗೆಯೂ ಅವರಿಗೆ ಖುಷಿ ಇದೆಯಂತೆ. “ಡಾಲಿ ಪಾತ್ರ ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು. ಆ ಪಾತ್ರಕ್ಕೂ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಜನ ಆ ಪಾತ್ರದ ಬಗ್ಗೆ ಮಾತಾಡುತ್ತಿರೋದು ಬಹಳ ಖುಷಿ ಆಗುತ್ತೆ. ಬರೀ ಅದೊಂದೇ ಅಲ್ಲ, ಸಣ್ಣ ಪಾತ್ರಗಳ ಬಗ್ಗೆಯೂ ಜನ ಮಾತಾಡುತ್ತಿದ್ದಾರೆ. ಚಿಟ್ಟೆ, ಕಾಕ್ರೋಚ್‌, ಸರೋಜ ಪಾತ್ರಗಳ ಬಗ್ಗೆ ಜನ ಖುಷಿಪಟ್ಟಿದ್ದಾರೆ. “ಓಂ’ನಲ್ಲೂ ಇದೇ ತರಹ ಆಗಿತ್ತು. ಹರೀಶ್‌ ರೈ, ದಿಲೀಪ್‌ ಮುಂತಾದವರಿಗೂ ಒಳ್ಳೆಯ ಗುರುತು ಸಿಕ್ಕಿತ್ತು.

“ಜೋಗಿ’ಯಲ್ಲೂ ಬಿಡ್ಡ ಪಾತ್ರ ಹಿಟ್‌ ಆಗಿತ್ತು. ಈಗ ಪುನಃ “ಟಗರು’ ಚಿತ್ರದಲ್ಲೂ ಹಾಗಾಗುತ್ತಿದೆ’ ಎನ್ನುತ್ತಾರೆ ಶಿವರಾಜಕುಮಾರ್‌. ಶಿವರಾಜಕುಮಾರ್‌ ಅವರಿಗೆ ಒಂದು ಹಂತದಲ್ಲಿ ಭಯವೂ ಆಗಿತ್ತಂತೆ. “ಈ ತರಹ ನಿರೂಪಣೆ ಸ್ವಲ್ಪ ರಿಸ್ಕಿ ಅನಿಸಿದ್ದು ಹೌದು. ಹಾಡುಗಳು ಹಿಟ್‌ ಆಗಿ ಚಿತ್ರದ ಬಗ್ಗೆ ಒಂದು ಲೆವೆಲ್‌ ನಿರೀಕ್ಷೆ ಇತ್ತು. ಹೀಗಿರುವಾಗ, ಸ್ವಲ್ಪ ಮಿಸ್‌ ಆದರೂ ಕಷ್ಟ. ಚಿತ್ರ ನೋಡಿದ ಜನ, ಏನು ಹೀಗೆ ಮಾಡಿºಟ್ರಾ ಅಂತ ಮಾತಾಡಿಕೊಳ್ಳಬಾರದು.

ಹಾಗಾಗಿ ಸ್ವಲ್ಪ ಭಯ ಇತ್ತು. ಆದರೆ, ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿನ  ನನ್ನ ವರ್ತನೆ, ಕೊಬ್ಬು, ಸಂಭಾಷಣೆ ಎಲ್ಲದರ ಬಗ್ಗೆ ಖುಷಿಪಟ್ಟಿದ್ದಾರೆ. ಅದರಲ್ಲೂ ಮಂಜು ಬರೆದ ಸಂಭಾಷಣೆಗಳು ಚೆನ್ನಾಗಿವೆ. “ರೈಲಿನೊಳಗೆ ನೀನು ಹೋದರೆ ಅದು ಜರ್ನಿ, ಅದೇ ನಿನ್ನ ಮೇಲೆ ರೈಲು ಹೋದರೆ ಅದು ಲಾಸ್ಟ್‌ ಜರ್ನಿ …’ ಎನ್ನುವ ಮಾತುಗಳನ್ನು ಜನ ಖುಷಿಡುತ್ತಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್‌.

ಇನ್ನು “ಕಡ್ಡಿಪುಡಿ’ ಸೂರಿಗೂ, “ಟಗರು’ ಸೂರಿಗೂ ಏನು ವ್ಯತ್ಯಾಸ ಕಂಡಿರಿ ಎಂದರೆ, “ಮೇಕಿಂಗ್‌ ವೈಸ್‌ ಬಹಳ ರಿಚ್‌ ಆಗಿ ಮಾಡಿದ್ದಾರೆ. ಎರಡೂ ಚಿತ್ರಗಳಲ್ಲಿನ ಇನ್ನೊಂದು ವಿಷಯ ಎಂದರೆ, ಇಲ್ಲಿ ನಾಯಕ ಮತ್ತು ವಿಲನ್‌ ಇಬ್ಬರಿಗೂ ಹೃದಯ ಇದೆ ಮತ್ತು ಅವರಿಬ್ಬರೂ ತಮ್ಮ ಮನಸ್ಸು ಹೇಳಿದ ಮಾತುಗಳನ್ನು ಕೇಳುತ್ತಾರೆ.

ಇನ್ನೂ ಒಂದು ವಿಶೇಷತೆ ಎಂದರೆ, ಇಲ್ಲಿ ನಾಯಕ ಪೊಲೀಸ್‌ ಆಗಿದ್ದುಕೊಂಡು ಅಂಡರ್‌ವರ್ಲ್ಡ್ನ ಮಟ್ಟಹಾಕಿದರೆ,  “ಕಡ್ಡಿಪುಡಿ’ಯಲ್ಲಿ ನಾಯಕ ಅಂಡರ್‌ವರ್ಲ್ಡ್ನಲ್ಲಿದ್ದುಕೊಂಡೇ ರೌಡಿಗಳನ್ನು ಮಟ್ಟಹಾಕುವ ಪ್ರಯತ್ನ ಮಾಡುತ್ತಾನೆ. “ಕಡ್ಡಿಪುಡಿ’ ಚಿತ್ರವನ್ನು ಸೂರಿ ಹೇಗೆ ರೂಪಿಸಿದ್ದರೋ, ಅದಕ್ಕೆ ಉಲ್ಟಾ ಆಗಿ ಈ ಚಿತ್ರ ಮಾಡಿದ್ದಾರೆ. ಬಹಳ ಚೆನ್ನಾಗಿ ಇಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚಿಕೊಳ್ಳುತ್ತಾರೆ ಶಿವರಾಜಕುಮಾರ್‌.

* ಚೇತನ್ ನಾಡಿಗೇರ್

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.