ಮತ್ತೆ ಬಂದ ಶಿಷ್ಯ ದೀಪಕ್‌

ನಾನು ದುರಹಂಕಾರಿ ಅಲ್ಲ, ಸೆಟ್‌ಗೆ ಲೇಟ್‌ ಆಗಿ ಬರಲ್ಲ...

Team Udayavani, Mar 13, 2020, 4:09 AM IST

Shishya-Deepak

“ನಾನಿಲ್ಲಿ ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ನಾನು ದುರಹಂಕಾರಿಯಲ್ಲ. ನಾನು ಹೀರೋ ಅಲ್ಲ. ಕಲಾವಿದನಷ್ಟೇ. ನನ್ನ ನೋವನ್ನು ಎಲ್ಲರಿಗೂ ತಲುಪಿಸಿ. ನನ್ನ ಬಗ್ಗೆ ಹಬ್ಬುವ ಎಲ್ಲಾ ಮಾತುಗಳು ಸುಳ್ಳು…’

– ಇದು ದೀಪಕ್‌ ಮಾತು. ದೀಪಕ್‌ ಅಂದಾಕ್ಷಣ ಥಟ್ಟನೆ ನೆನಪಾಗೋದು ಕಷ್ಟ. “ಶಿಷ್ಯ’ ದೀಪಕ್‌ ಅಂದಾಗ, ಓ ಅವರಾ ಅನ್ನೋ ಉದ್ಘಾರ ಬರುತ್ತೆ. ಅದೇ “ಶಿಷ್ಯ’ ದೀಪಕ್‌ ಹೀಗೆ ಹೇಳಿಕೊಂಡರು. ಅಂದಹಾಗೆ, ಅವರು ಹೀಗೆ ಹೇಳ್ಳೋಕೆ ಕಾರಣ. ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿಗೆ ಒಂದೂವರೆ ದಶಕ ಕಳೆದಿದೆ. 14 ವರ್ಷ ಕಳೆದು ಈಗ 15 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಅವರು, ಆ ಕುರಿತು ತಮ್ಮ ಸಿನಿಪಯಣದ ಸಿಹಿ-ಕಹಿ ಅನುಭವ ಹಂಚಿಕೊಂಡರು. ಅಂದು ಮಾತಿಗಿಳಿದ “ಶಿಷ್ಯ’ ದೀಪಕ್‌, ಹೇಳಿದ್ದಿಷ್ಟು. “ನಾನು ಬಹಳ ಗ್ಯಾಪ್‌ ಬಳಿಕ ಪುನಃ ತೆರೆ ಮೇಲೆ ಬರುತ್ತಿದ್ದೇನೆ. ಇದು ನನ್ನ 15 ನೇ ವರ್ಷದ ಪಯಣ. ಇಷ್ಟು ವರ್ಷದ ಜರ್ನಿಯಲ್ಲಿ ನಾನು ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ನನ್ನ ಸೋಲು-ಗೆಲುವಿನಲ್ಲಿ ಜೊತೆಗಿದ್ದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಬಗ್ಗೆ ಸಾಕಷ್ಟು ತಪ್ಪು ಮಾಹಿತಿ ಹರಿದಾಡಿವೆ. ಅದೆಲ್ಲವೂ ಶುದ್ಧ ಸುಳ್ಳು. ನಾನು ದುರಹಂಕಾರಿ ಅಲ್ಲ. ಕಥೆಯಲ್ಲಿ ಮೂಗು ತೂರಿಸಲ್ಲ. ಸೆಟ್‌ಗೆ ಲೇಟ್‌ ಆಗಿ ಬರಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು, ಅದು ಇನ್ನಷ್ಟು ಜನರಿಗೆ ಹರಿಯುತ್ತಿದೆ. ನಾನಿಲ್ಲಿ ಹೀರೋ ಆಗಬೇಕು ಅಂತ ಬಂದವನಲ್ಲ. ಕಲಾವಿದ ಆಗಬೇಕಷ್ಟೇ. ನನಗೆ ಸಿನಿಮಾ ಅನ್ನೋದು ಪ್ಯಾಷನ್‌. ಎಷ್ಟೋ ಜನ ಮೂರು ವರ್ಷಕ್ಕೆ ಒಂದು ಸಿನ್ಮಾ ಮಾಡಿದರೆ, ಗುರುತಿಸೋದು ಹೇಗೆ ಅಂತಾರೆ. ನಿಜವಾಗಿಯೂ ನನಗೆ ಸಿನಿಮಾ ದುಡಿಮೆ ಅಲ್ಲವೇ ಅಲ್ಲ. ಅದೊಂದು ಪ್ರೀತಿಯಷ್ಟೇ. ಹಾಗಾಗಿ, ಇಷ್ಟು ವರ್ಷದ ಕಹಿ ಅನುಭವಗಳೆಲ್ಲವನ್ನೂ ಗಂಟುಗಟ್ಟಿ ಇಟ್ಟಿದ್ದೇನೆ. ಈಗ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದೇನೆ. ಇನ್ನು ಮುಂದೆ ಹೀರೋ ಆಗಿ ಕಾಣಿಸಿಕೊಳ್ಳಲ್ಲ. ನೆಗೆಟಿವ್‌ ಶೇಡ್‌ನ‌ಲ್ಲಿ ಎಂಟ್ರಿಯಾಗುತ್ತಿದ್ದೇನೆ’ ಎಂದು ಹೇಳಿಕೊಂಡರು ದೀಪಕ್‌.

ಸದ್ಯಕ್ಕೆ “ಜೋಗಿ’ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದಲ್ಲಿ ರೆಬೆಲ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು, ಪ್ರಜ್ವಲ್‌ ದೇವರಾಜ್‌ ಅಭಿನಯದ “ವೀರಂ’ ಚಿತ್ರದಲ್ಲೂ ನಾನು ಮೇಜರ್‌ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಎರಡು ಸಿನಿಮಾಗಳು ನನ್ನ ದೊಡ್ಡ ಹೆಜ್ಜೆಗಳಾಗುತ್ತವೆ ಎಂದು ನಂಬಿದ್ದೇನೆ. ಪುನಃ ನನ್ನ ಜರ್ನಿಗೆ ಈ ಎರಡು ಚಿತ್ರಗಳು ಸಾಥ್‌ ಕೊಟ್ಟಿವೆ. ಅವಕಾಶ ಕೊಟ್ಟ ಪ್ರೇಮ್‌ ಸರ್‌ಗೂ ಹಾಗು “ವೀರಂ’ ಚಿತ್ರತಂಡಕ್ಕೂ ಥ್ಯಾಂಕ್ಸ್‌’ ಎಂದರು ದೀಪಕ್‌.

ಅಂದು ಅಷ್ಟು ವರ್ಷ ಸಿನಿಪಯಣಕ್ಕೆ ಸಾಥ್‌ ಕೊಟ್ಟ, ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರನ್ನು ದೀಪಕ್‌ ಗೌರವಿಸಿದರು. ಮೊದಲ ಸಿನಿಮಾ ಮೂಲಕ ಅವಕಾಶ ಕೊಟ್ಟ ಭಾ.ಮ.ಹರೀಶ್‌, ಭಾ.ಮ.ಗಿರೀಶ್‌ ಹಾಗು ಕುಮಾರ್‌, ವಿಜಯಕುಮಾರ್‌, ಶಶಿಧರ್‌ ಕೆ.ಎಂ. ಮೊದಲ ಚಿತ್ರದ ಹಿರಿಯ ಪ್ರಚಾರಕರ್ತರಾದ ವಿಜಯಕುಮಾರ್‌, ನಾಗೇಂದ್ರ ಹಾಗು ಹಿರಿಯ ಛಾಯಾಗ್ರಾಹಕರಾದ ಕೆ.ಎನ್‌.ನಾಗೇಶ್‌ಕುಮಾರ್‌ ಅವರನ್ನು ಇದೇ ವೇಳೆ ಸನ್ಮಾನಿಸಿದರು ದೀಪಕ್‌. ಗೌರವ ಸ್ವೀಕರಿಸಿದ ಪ್ರತಿಯೊಬ್ಬರೂ, ದೀಪಕ್‌ ಅವರ ಎರಡನೇ ಇನ್ನಿಂಗ್ಸ್‌ ತುಂಬಾ ಅದ್ಭುತವಾಗಿರಲಿ ಎಂದು ಶುಭ ಹಾರೈಸಿದರು.

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.