ಹೊಸತನ ಕೊಡ್ತೀವಿ ಅಂದರು: ಜೊತೆಯಾಗಿ ಬಂದರು


Team Udayavani, Sep 8, 2017, 11:26 AM IST

08-SUCHI-2.jpg

“ಇದೊಂದು ಮ್ಯೂಸಿಕಲ್‌ ಸಿನಿಮಾ. ಜೊತೆಗೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ..’
– ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಸುಪ್ರೀತ್‌ ಶಂಕರ್‌ ರತ್ನ. ಅವರು ಹೇಳಿದ್ದು ತಮ್ಮ ಮೊದಲ ನಿರ್ದೇಶನದ “ಜೊತೆಯಾಗಿ’ ಚಿತ್ರದ ಬಗ್ಗೆ. ನಿರ್ದೇಶನದ ಜತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ ಇವರದೇ. ಇದು ಹೊಸಬರ ಸಿನಿಮಾ. ಹಾಗಂತ ಅಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಇವರೆಲ್ಲರಿಗೂ ಚಿತ್ರರಂಗ ಹೊಸದೇನಲ್ಲ. ನಿರ್ದೇಶಕ ಸುಪ್ರೀತ್‌ ಸ್ವತಃ ಸಂಕಲನಕಾರರು. ನಿರ್ದೇಶನ ಮಾತ್ರ ಹೊಸದು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಅಂದು ಚಿತ್ರರಂಗದ ಅನೇಕರು ಬಂದು ಹೊಸ ತಂಡಕ್ಕೆ ಭಕೋರಿದರು. ಅಷ್ಟೇ ಅಲ್ಲ, ಪುನೀತ್‌ ರಾಜ್‌ಕುಮಾರ್‌ ಕೂಡ ಮುಹೂರ್ತಕ್ಕೆ ಆಗಮಿಸಿ ಹೊಸಬರನ್ನು ಹಾರೈಸಿದರು. 

ಒಂದಷ್ಟು ಗೆಳೆಯರು, ಹಿತೈಷಿಗಳು ಬಂದು ಶುಭ ಕೋರಿದ ಬಳಿಕ ಚಿತ್ರತಂಡ ಪತ್ರಕರ್ತರ ಮುಂದೆ ಬಂದು ಕುಳಿತುಕೊಂಡಿತು. ನಿರ್ದೇಶಕ ಸುಪ್ರೀತ್‌ ಶಂಕರ್‌ ರತ್ನ ಮಾತಿಗಿಳಿದರು. “ನಾನು ಬೇಸಿಕಲಿ ಸಂಕಲನಕಾರ. ಇದುವರೆಗೆ ಮುನ್ನೂರಕ್ಕು ಹೆಚ್ಚು ಹಾಡುಗಳಿಗೆ ಸ್ಪೆಷಲ್‌ ಎಡಿಟ್‌ ಮಾಡಿರುವುದುಂಟು. ಸಿನಿಮಾ ನಿರ್ದೇಶಿಸುವ ಆಸೆ  ಇತ್ತು. ಈಗ “ಜೊತೆಯಾಗಿ’ ಮೂಲಕ ಈಡೇರುತ್ತಿದೆ. ಇದೊಂದು ಮ್ಯೂಸಿಕಲ್‌ ಚಿತ್ರ ಅನ್ನಬಹುದು. ಒಂದು ಮುದ್ದಾದ ಪ್ರೇಮಕಥೆಯಲ್ಲಿ ಸಾಕಷ್ಟು ಏರಿಳಿತಗಳು ಬಂದು ಹೋಗುತ್ತವೆ. ಆಗ ಏನೆಲ್ಲಾ ಆಗುತ್ತೆ ಎಂಬುದು ಕಥೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇಲ್ಲಿದೆ. ಹಾಡಿಗೆ ಇಲ್ಲಿ ಒತ್ತು ಕೊಡಲಾಗಿದೆ.  ಮನಾಲಿ, ಕೇರಳ, ಮಡಿಕೇರಿ, ಬೆಂಗಳೂರು ಇತರೆಡೆ ಚಿತ್ರೀಕರಣ ಮಾಡಲಾಗುವುದು. ಸದ್ಯಕ್ಕೆ ನಾಯಕಿ ಹಾಗೂ ಉಳಿದ ಕಲಾವಿದರ ಆಯ್ಕೆಯಾಗಬೇಕಿದೆ’ ಎಂದರು ಸುಪ್ರೀತ್‌.

ನಾಯಕ ಅಕ್ಷಯ್‌ರಾಜ್‌ಗೆ ಇದು ಮೊದಲ ಚಿತ್ರ. ಮೂಲತಃ ಡ್ಯಾನ್ಸರ್‌ ಆಗಿರುವ ಅಕ್ಷಯ್‌ ರಾಜ್‌, ಆದರ್ಶ ನಟನೆ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಒಬ್ಬ ಮುಗ್ಧ ಮನಸ್ಸಿನ ಹುಡುಗನ ಪಾತ್ರ ನನ್ನದು. ಡ್ಯಾನ್ಸರ್‌ ಆಗಿರುವುದರಿಂದ ಇಲ್ಲೊಂದು ಸ್ಪೆಷಲ್‌ ಸಾಂಗ್‌ ಕೂಡ ಇದೆ. ಆದರೂ, ಇಲ್ಲಿ ಮೆಲೋಡಿಗೆ ಹೆಚ್ಚು ಒತ್ತು ಕೊಡಲಾಗಿದೆ. ನಿಮ್ಮೆಲ್ಲರ ಸಹಕಾರ ನನಗೆ ಬೇಕು’ ಎಂದರು ಅಕ್ಷಯ್‌ರಾಜ್‌. ಸಂಗೀತ ನಿರ್ದೇಶಕ ಪಳನಿ ಡಿ.ಸೇನಾಪತಿ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರಂತೆ. “ಟ್ರಾಕ್‌ ಸಿಂಗರ್‌ ಅವರೇ ಅಂತಿಮವಾಗಿ ಆ ಹಾಡು ಹಾಡಬೇಕು. ಹಾಗಾಗಿ, ಮೊದಲೇ ಪ್ಲಾನ್‌ ಮಾಡಿ, ಟ್ರಾಕ್‌ ಹಾಡಿಸಿ, ಅದಕ್ಕೆ ಏನೆಲ್ಲಾ ಬೇಕು, ಬೇಡ ಎಂಬುದನ್ನು ನೋಡಿ  ಅವರಿಂದಲೇ ಆ ಹಾಡು ಹೊರಬರುವಂತೆ
ಮಾಡುವುದು ನನ್ನ ಐಡಿಯಾ. ಹಾಡುಗಳು ಚೆನ್ನಾಗಿ ಕೇಳಬೇಕು, ಸಾಹಿತ್ಯಕ್ಕೂ ಒತ್ತು ಕೊಡಬೇಕು. ಹಾಗಾಗಿ ಇಲ್ಲಿ ಮೆಲೋಡಿ ಹಾಡುಗಳಿರಲಿವೆ ಎಂದರು ಪಳನಿ.

ಕ್ಯಾಮೆರಾಮೆನ್‌ ಕರಣೇಶ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು “ಪ್ರತಿಕ್ಷಣ’ ಚಿತ್ರ ಮಾಡಿದ್ದರು. “ನಿರ್ದೇಶಕ ಸುಪ್ರೀತ್‌ ನನಗೆ ಹತ್ತು ವರ್ಷಗಳ ಗೆಳೆಯ. ನನಗೆ ಈ ಕಥೆ ಹೇಳಿದಾಗ, ಎಮೋಷನ್ಸ್‌ ಜತೆಗೆ ಒಂದೊಳ್ಳೆಯ ಲವ್‌ ಸ್ಟೋರಿ ಇದೆ ಅನಿಸಿತು. ಇಲ್ಲಿ ಕ್ಯಾಮೆರಾ ಮೂಲಕ ಹೊಸದೇನನ್ನೋ ಹೇಳಬಹುದು ಎಂಬ ಯೋಚನೆ ಬಂತು. ಡಿಫ‌ರೆಂಟ್‌ ಲೈಟಿಂಗ್‌ ಪ್ಯಾಟ್ರನ್‌ನಲ್ಲಿ ಸಿನಿಮಾ ಮಾಡುವ ಆಸೆ ಇದೆ. ಪ್ರತಿ ದೃಶ್ಯ ಪೇಂಟಿಂಗ್‌ ರೀತಿ ಇರಬೇಕು. ಹಾಗಾಗಿಯೇ ಮೊದಲೇ ಸ್ಟೋರಿ ಬೊರ್ಡ್‌ ಮಾಡಿಕೊಂಡು, ಹೇಗೆಲ್ಲಾ ಕೆಲಸ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಅಂದರು ಕರಣೇಶ್‌.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.