ಬಂಡಾಯದ ಬಾವುಟ

ರೈತ ಹೋರಾಟವೇ ಕಥಾವಸ್ತು

Team Udayavani, Mar 6, 2020, 5:06 AM IST

ಬಂಡಾಯದ ಬಾವುಟ

“ನರಗುಂದ ಬಂಡಾಯ…’
– ಇದು 1980 ರಲ್ಲಿ ನಡೆದ ರೈತರ ನೈಜ ಘಟನೆ ಆಧರಿಸಿ ಮಾಡಿರುವ ಸಿನಿಮಾ. ಅದರಲ್ಲೂ ಉತ್ತರ ಕರ್ನಾಟಕ ಭಾಷೆಯಲ್ಲೇ ತಯಾರಾಗಿರುವ ಸಿನಿಮಾ. ಚಿತ್ರ ರೆಡಿಯಾಗಿದ್ದು, ಮಾ.12 ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಶಿವರಾಜಕುಮಾರ್‌ ಅವರು ಚಿತ್ರದ ಟ್ರೇಲರ್‌ ಹಾಗು ಆಡಿಯೋ ಬಿಡುಗಡೆ ಮಾಡಿ, “ಕಷ್ಟಪಟ್ಟವರ ಬಗ್ಗೆ ಮಾಡಿರುವ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನರಗುಂದ ರೈತರ ಬಗ್ಗೆ ಅಪ್ಪಾಜಿ ಕೂಡ ಮಾತಾಡುತ್ತಿದ್ದರು. ಈಗ ಆ ವಿಷಯ ಇಟ್ಟುಕೊಂಡೇ ಚಿತ್ರ ಮಾಡಲಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ’ ಎಂದರು ಶಿವರಾಜಕುಮಾರ್‌.

ನಿರ್ದೇಶಕ ನಾಗೇಂದ್ರ ಮಾಗಡಿ ಅವರಿಗೆ ರೈತರ ಕುರಿತು ಸಿನಿಮಾ ಮಾಡಬೇಕು ಅನಿಸಿದ್ದು, ನಿರ್ಮಾಪಕ ಸಿದ್ದೇಶ್‌ ಅವರ ಕಥೆ ಕೇಳಿದ ಮೇಲಂತೆ. “ಇದು ನೈಜ ಘಟನೆ ಸಿನಿಮಾ. ಆಗಿನ ಸರ್ಕಾರ ರೈತರ ಮೇಲೆ ನೀರಿನ ಕಂದಾಯ 2500 ಕಟ್ಟುವಂತೆ ಆದೇಶ ನೀಡಿತ್ತು. ಆದರೆ, ಆಗ ಒಂದು ಎಕರೆ ಹೊಲದ ಬೆಲೆ ಕೂಡ 2500 ರು. ಇತ್ತು. ಅಂತಹ ಸಂದರ್ಭದಲ್ಲಿ ರೈತರು ಕಟ್ಟುವುದು ಕಷ್ಟ ಅಂದುಕೊಂಡು ಬಸಪ್ಪ ಲಕ್ಕುಂಡಿ ಇತರರು ರೈತರನ್ನು ಸಂಘಟಿಸಿ ಹೋರಾಟಕ್ಕಿಳಿಯುತ್ತಾರೆ. ರಾಜಕಾರಣಿಗಳು ನಿರ್ಲಕ್ಷಿಸುತ್ತಾರೆ. ರೈತರು ಹೋರಾಟದಲ್ಲಿ ಸಾವಿಗೀಡಾಗುತ್ತಾರೆ. ಕೊನೆಗೆ ಏನೆಲ್ಲಾ ಆಗುತ್ತೆ ಎಂಬುದೇ ಕಥೆ. ರಕ್ಷ್ ಇಲ್ಲಿ ಯುವ ರೈತ ಮುಖಂಡರಾದರೆ, ಶುಭಾ ಪೂಂಜಾ ಅವರನ್ನು ಹುರಿದುಂಬಿಸುವ ಪಾತ್ರ ಮಾಡಿದ್ದಾರೆ. ಒಳ್ಳೆಯ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ’ ಎಲ್ಲರ ಬೆಂಬಲ ಇರಲಿ’ ಅಂದರು ನಾಗೇಂದ್ರ ಮಾಗಡಿ.

ನಿರ್ಮಾಪಕ ಸಿದ್ದೇಶ ವಿರಕ್ತಮಠ ಕಥೆ ಬರೆದಿದ್ದಾರೆ. ಅವರು ಈ ಕಥೆ ಬರೆಯೋಕೆ ಕಾರಣ, ಅವರ ಮಾವ ವಿಜಯ ಕುಲಕರ್ಣಿ ಅವರಂತೆ. ಅವರು ರೈತ ಹೋರಾಟಗಾರರು. ಹಾಗಾಗಿ, ರೈತ ಪರ ಕಥೆ ಮಾಡಿ, ಸಿನಿಮಾ ಮಾಡಿದ್ದೇವೆ. ನಿಮ್ಮ ಸಹಕಾರ ಬೇಕು’ ಎಂದರು.

ರಕ್ಷ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿರುವ ರಕ್ಷ್,”ನಾನು ಇಲ್ಲಿ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಎಂಬ ರೈತನ ಪಾತ್ರ ಮಾಡಿದ್ದೆನೆ. ರೈತರ ಸಮಸ್ಯೆಗೆ ಸ್ಪಂದಿಸುವ ಹಾಗು ರೈತ ನಾಯಕರಾಗಿರುವ ಪಾತ್ರವದು. ಮೊದಲ ಚಿತ್ರವಾದ್ದರಿಂದ ತಪ್ಪುಗಳಿದ್ದರೆ, ಪಕ್ಕಕ್ಕಿಟ್ಟು ಬೆಂಬಲಿಸಿ’ ಎಂದರು ರಕ್ಷ್.

ಶುಭಾ ಪೂಂಜಾ ಅವರಿಲ್ಲಿ ರಾಣಿ ಎಂಬ ಪಾತ್ರ ಮಾಡಿದ್ದು, ನಾಯಕನ ಹೋರಾಟಕ್ಕೆ ಸಹಕಾರಿಯಾಗಿ ನಿಲ್ಲುವ ಪಾತ್ರ ಮಾಡಿದ್ದಾರಂತೆ. ಅವರಿಲ್ಲಿ ಉತ್ತರ ಭಾಗದ ಹುಡುಗಿಯಾಗಿ, ಖಡಕ್‌ ಡೈಲಾಗ್‌ನೊಂದಿಗೆ ಗಮನಸೆಳೆಯುವುದಾಗಿ ಹೇಳಿಕೊಂಡರು. ನೀನಾಸಂ ಅಶ್ವತ್ಥ್ ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ ಬಗ್ಗೆ ಹೇಳಿಕೊಂಡರು. ಭವ್ಯಾ ಕೂಡ ಇಲ್ಲಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರಂತೆ. ಕೇಶವಾದಿತ್ಯ ಸಂಭಾಷಣೆ ಹಾಗು ಒಂದು ಹಾಡು ಬರೆದಿದ್ದಾರೆ. ಯಶೋವರ್ಧನ್‌ ಸಂಗೀತವಿದೆ. ಶೇಖರ್‌ ಯಲುವಿಗಿ ಅವರು ಕೂಡ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.