ಮೂರು ಕೆಟ್ಟ ಗುಣ, ಒಂದು ಒಳ್ಳೆಯ ಗುಣ


Team Udayavani, Sep 28, 2018, 6:00 AM IST

d-22.jpg

ಕನ್ನಡದಲ್ಲಿ “6-5 = 2′ ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರ ಜೋರು ಸುದ್ದಿ ಮಾಡಿದ್ದೂ ಗೊತ್ತು. ಈಗ ಅಂಥದ್ದೇ ಸಂಖ್ಯೆಯ ಶೀರ್ಷಿಕೆಯ ಚಿತ್ರವೊಂದು ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ಅದು “- 3+1′. ಈ  ಚಿತ್ರದ ಹಾಡುಗಳನ್ನು ಹೊರತರುವ ಮೂಲಕ ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ತಂಡ ಕಟ್ಟಿಕೊಂಡು ಮಾಧ್ಯಮ ಮುಂದೆ ಬಂದಿದ್ದರು ನಿರ್ದೇಶಕ ರಮೇಶ್‌ ಯಾದವ್‌. ಚಿತ್ರದಲ್ಲಿ ನಟಿಸಿ­ರುವ ಹಿರಿಯ ನಟ ರಾಮಕೃಷ್ಣ ಅವರ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಿಸಿದ್ದು ವಿಶೇಷ.

ಅಂದು ನಟ ರಾಮಕೃಷ್ಣ ಅವರು ಬೇರೆಲ್ಲೋ ಹೋಗಬೇಕಿದ್ದರಿಂದ ಮೊದಲು ಮಾತಿಗಿಳಿ­ದರು. “ಇಲ್ಲಿ  “- 3+1′ ಚಿತ್ರದಲ್ಲಿ ನಾನೂ ಒಬ್ಬ ಮೈನಸ್‌ ಇದ್ದಂತೆ. ಇದೊಂದು ವಿಶಿಷ್ಟ ಕಥಾಹಂದರ. ನನ್ನ ಸಿನಿ ಪಯಣದಲ್ಲಿ ಇದೂ ಒಂದು ಹೊಸತನದ ಚಿತ್ರ. ಇಲ್ಲಿ ನಾಯಕಿಯ ತಂದೆ ಪಾತ್ರ ಮಾಡಿದ್ದೇನೆ. ಮನೆ ಕೆಲಸದ ಹುಡುಗ, ತನ್ನ ಮಗಳನ್ನು ಪ್ರೀತಿಸಿಬಿಟ್ಟರೆ ಏನಾಗಬಹುದು ಎಂಬ ಗೊಂದಲದ ತಂದೆ ಪಾತ್ರ ಮಾಡಿದ್ದೇನೆ’ ಎನ್ನುತ್ತಲೇ, ನಿರ್ದೇಶಕರ ಕೈಗೆ ಮೈಕ್‌ ಕೊಟ್ಟರು. ನಿರ್ದೇಶಕ ರಮೇಶ್‌ ಯಾದವ್‌, “ಇಲ್ಲಿ “- 3+1′. ಅಂದರೆ, ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುತ್ತವೆ. ತಾನು ಇಷ್ಟಪಟ್ಟಿದ್ದು ಸಿಗದೇ ಹೋದರೆ, ಸಹಜವಾಗಿಯೇ ಕೋಪ ಬರುತ್ತೆ. ಇಲ್ಲಿ ನಾಯಕ ಕೂಡ ನಾಯಕಿಯನ್ನು ಇಷ್ಟಪಡುತ್ತಾನೆ. ಆದರೆ, ಅವಳು ಸಿಗುವುದಿಲ್ಲ ಅಂತ ಗೊತ್ತಾದಾಗ ಅವನಲ್ಲಿ ಮೂರು ಕೆಟ್ಟ ಆಲೋಚನೆಗಳು ಮೂಡುತ್ತವೆ. ಅದು ಮೈನಸ್‌ 3. ಆದರೆ, ಅವನ ಲೈಫ್ನಲ್ಲೊಂದು ಒಳ್ಳೆಯ ಭಾವನೆ ಮೂಡುತ್ತದೆ. ಆ ಒಳ್ಳೆಯ ಭಾವನೆಯೇ ಪ್ಲಸ್‌ 1. ಉಳಿದದ್ದು ಚಿತ್ರ ನೋಡಬೇಕು’ ಎಂದು ಹೇಳಿ ಸುಮ್ಮನಾದರು ರಮೇಶ್‌ ಯಾದವ್‌.

ನಿರ್ಮಾಪಕ ಸತ್ಯನಾರಾಯಣ ಚಾರ್‌ ಅವರಿಗಿದು ಮೊದಲ ಚಿತ್ರ. ಸಿನಿಮಾ ಬಗ್ಗೆ ಹೆಚ್ಚೇನೂ ಹೇಳದೆ, ಏನೆಲ್ಲಾ ಹೇಳಬೇಕೋ ಅದೆಲ್ಲವನ್ನೂ ಹಾಳೆಯೊಂದರಲ್ಲಿ ಬರೆದು­ಕೊಂಡು ಬಂದು ಅದನ್ನು ಚಾಚೂ ತಪ್ಪದೆ ಓದಿ, ಎಲ್ಲರಿಗೊಂದು ಥ್ಯಾಂಕ್ಸ್‌ ಹೇಳಿ ಕುಳಿತರು. ಚಿತ್ರಕ್ಕೆ  “ತಿಥಿ’ ಖ್ಯಾತಿಯ ಅಭಿಷೇಕ್‌ ಹೀರೋ. “ಇದು ನನ್ನ 5ನೇ ಚಿತ್ರ. ಈ ಚಿತ್ರದ ಅನುಭವ ಮರೆಯುವಂತಿಲ್ಲ. 20 ದಿನಗಳ ಕಾಲ 

ಡ್ಯಾನ್ಸ್‌, ಫೈಟ್‌ ತರಬೇತಿ ಪಡೆದಿದ್ದೇನೆ’ ಅಂದರು ಅಭಿ. ಚಿತ್ರದಲ್ಲಿ “ತಿಥಿ’ ಖ್ಯಾತಿಯ ಸೆಂಚುರಿ ಗೌಡ ಕೂಡ ನಟಿಸಿದ್ದಾರೆ. ಎ.ಟಿ.ರವೀಶ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಸ್ಯಾ ಚಿತ್ರಕ್ಕೆ ನಾಯಕಿಯಾಗಿದ್ದು, ಅವರಿಗಿದು ಮೊದಲ ಚಿತ್ರವಂತೆ. ಎನ್‌.ಟಿ.ಜಯರಾಮರೆಡ್ಡಿ, ಶ್ರೀನಿ­ವಾಸಲು ಇತರರು ಇದ್ದರು. 

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.