ಹುಲಿ ಘರ್ಜನೆ ಜೋರಾಗಿದೆ


Team Udayavani, Oct 27, 2017, 11:53 AM IST

27-25.jpg

“ಚಿತ್ರಮಂದಿರಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ. ನೀವು ನೋಡಿ ಖುಷಿಪಡಿ..’
– ಹೀಗೆ ಹೇಳಿದರು ನೀನಾಸಂ ಸತೀಶ್‌. ಅವರು ಹೇಳಿದ್ದು “ಟೈಗರ್‌ ಗಲ್ಲಿ’ ಚಿತ್ರದ ಬಗ್ಗೆ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಬಿಡುಗಡೆ ಹೊತ್ತಲ್ಲಿ ಸತೀಶ್‌, ಹೀಗೆ ಹೇಳಲು ಕಾರಣ ಚಿತ್ರಕ್ಕೆ ಸಿಕ್ಕ ಸೆನ್ಸಾರ್‌ ಪ್ರಮಾಣ ಪತ್ರ. ಹೌದು, ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟಿದೆ. ಅದಕ್ಕೆ ಕಾರಣ ಚಿತ್ರದ ಖಡಕ್‌ ಡೈಲಾಗ್‌ ಹಾಗೂ ಕೆಲವು ಸನ್ನಿವೇಶಗಳು.

ಹಾಗಂತ ಚಿತ್ರತಂಡಕ್ಕೇನು ಬೇಸರವಿಲ್ಲ. “ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಕ್ಕಿದೆ. ಆದರೆ, ನಮಗೆ ಬೇಕಾದ, ಚಿತ್ರಕ್ಕೆ ತುಂಬಾ ಪ್ರಮುಖವಾಗಿರುವ ಸನ್ನಿವೇಶಗಳನ್ನು ಉಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಚಿತ್ರಕ್ಕೆ ಮಕ್ಕಳು ಬಿಟ್ಟು ಬೇರೆ ಎಲ್ಲರೂ ಬರಬಹುದು.  ಆ ತರಹದ ಒಂದು ಸಿನಿಮಾ ಇದು.

ಇಂತಹ ಸಿನಿಮಾ ಬಾರದೇ ಕನ್ನಡದಲ್ಲಿ ತುಂಬಾ ವರ್ಷಗಳೇ ಆಗಿದೆ. ನನಗೆ ಇದು ಹೊಸ ಅನುಭವ. ಮೊದಲ ಬಾರಿಗೆ
ಆ್ಯಕ್ಷನ್‌ ಮಾಡಿದ್ದೇನೆ’ ಎಂದರು. ಇನ್ನು, ಚಿತ್ರದ ಪ್ರಮೋಶನ್‌ನಲ್ಲಿ ಸಹಕರಿಸಿದ ಶಿವರಾಜಕುಮಾರ್‌, ಸುದೀಪ್‌, ವಿಜಯ್‌, ಪ್ರೇಮ್‌, ಯೋಗರಾಜ ಭಟ್‌ ಅವರಿಗೆ ಥ್ಯಾಂಕ್ಸ್‌ ಹೇಳಲು ಸತೀಶ್‌ ಮರೆಯಲಿಲ್ಲ. ಚಿತ್ರವನ್ನು ಪ್ರಚಾರ ಮಾಡಿದ ರೀತಿ ಸತೀಶ್‌ಗೆ ಖುಷಿಕೊಟ್ಟಿದೆಯಂತೆ.

“ನಿರ್ಮಾಪಕ ಯೋಗಿ ಅವರು ಆರಂಭದಲ್ಲಿ ಹೇಳಿದಂತೆ ಸಿನಿಮಾವನ್ನು ಚೆನ್ನಾಗಿ ಪಬ್ಲಿಸಿಟಿ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಚಿತ್ರ ಮೂರು ಕೋಟಿಗೂ ಅಧಿಕ ಮಂದಿಗೆ ತಲುಪಿದೆ. ಪೋಸ್ಟರ್‌ ಅನ್ನು ಕೂಡಾ ಎರಡೆರಡು ಬಾರಿ ಪ್ರಿಂಟ್‌ ಹಾಕಿಸಿದ್ದಾರೆ. ರೈಲ್ವೆ ಸ್ಪೆಷನ್‌ಗಳಲ್ಲೂ ಚಿತ್ರದ ಟ್ರೇಲರ್‌ ಪ್ಲೇ ಆಗುತ್ತಿದೆ’ ಎಂದು ಖುಷಿಯಾದರು. ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಹೆಚ್ಚು ಮಾತನಾಡಲಿಲ್ಲ. “ಸಿನಿಮಾ ಬಗ್ಗೆ ಈಗಾಗಲೇ ಎಲ್ಲವನ್ನು ಮಾತನಾಡಿಬಿಟ್ಟಿದ್ದೇನೆ. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಿಟ್ಟಿದ್ದು. ನಿರ್ಮಾಪಕ ಕುಮಾರ್‌ ಅವರು ಕಥೆ ಕೇಳಿ, ಜಗತ್ತಿನಲ್ಲಿ ಯಾರೇ ಬಂದು ಹೇಳಿದರೂ ಕಥೆಯಲ್ಲಿ ಒಂದಂಶವನ್ನು ಬದಲಿಸಬೇಡ, ಏನು ಮಾಡ್ಕೊಂಡಿದ್ದೀಯೋ ಅದನ್ನು ಸಿನಿಮಾ ಮಾಡು ಎಂದರು.  ಅದಕ್ಕಿಂತ ದೊಡ್ಡ ಧೈರ್ಯ ಮತ್ತೂಂದಿಲ್ಲ. ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಪ್ರೋತ್ಸಾಹಿಸಿ, ಬೆನ್ನು ತಟ್ಟಿ’ ಎಂದು ಕೇಳಿಕೊಂಡರು.  

ನಾಯಕಿಯರಾದ ರೋಶನಿ ಹಾಗೂ ಭಾವನಾ ರಾವ್‌ ಕೂಡಾ “ಟೈಗರ್‌ ಗಲ್ಲಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾಗಿ ಹೇಳಿ
ಕೊಂಡರು. ಪೂಜಾ ಲೋಕೇಶ್‌ ಕೂಡಾ ಇಲ್ಲಿ ಪ್ರಮುಖ ಪಾತ್ರ ಮಾಡಿದ್ದು, ದೊಡ್ಡ ಗ್ಯಾಪ್‌ನ ನಂತರ ಬಂದರೂ ಒಳ್ಳೆಯ
ಪಾತ್ರ ಮಾಡಿದ ಖುಷಿ ಅವರಿಗಿದೆಯಂತೆ. ನಿರ್ಮಾಪಕ ಯೋಗಿ ಹೆಚ್ಚು ಮಾತನಾಡಲಿಲ್ಲ.

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.